<p><strong>ಮೈಸೂರು</strong>: ಜಯಲಕ್ಷ್ಮಿಪುರಂನ ಕೊಡಗು ಸಹಕಾರ ಸಂಘದ ಅಂಗಳದಲ್ಲಿ ಕೇರಳದ ತಿರುವನಂತಪುರದಿಂದ ಬಂದ ಇ–ಬೈಕ್ ರ್ಯಾಲಿಯ ಐವರು ಮಾಜಿ ಯೋಧರನ್ನು ನಿವೃತ್ತ ಮೇಜರ್ ಜನರಲ್ ಸುಧೀರ್ ಒಂಭತ್ಕೆರೆ ಹಾಗೂ ಮೈಸೂರು ಸಶಸ್ತ್ರ ಪಡೆಗಳ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಪಿ.ಕೆ.ಬಿದ್ದಪ್ಪ ಸ್ವಾಗತಿಸಿ, ಬೀಳ್ಕೊಟ್ಟರು. </p>.<p>25ನೇ ಕಾರ್ಗಿಲ್ ವಿಜಯ್ ದಿವಸ್ ಹಾಗೂ ‘ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್’ನ (ಎಂಇಜಿ) 224ನೇ ವಾರ್ಷಿಕೋತ್ಸವ ಪ್ರಯುಕ್ತ ತಿರುವನಂತಪುರದಿಂದ ಬೆಂಗಳೂರಿಗೆ ರ್ಯಾಲಿ ನಡೆಯುತ್ತಿದ್ದು, ಮಂಗಳವಾರ ರಾತ್ರಿ ಅವರನ್ನು ಸ್ವಾಗತಿಸಲಾಗಿತ್ತು. ಬುಧವಾರ ಬೆಳಿಗ್ಗೆ 9.30ಕ್ಕೆ ಅವರಿಗೆ ವಂದನೆ ಸಲ್ಲಿಸಿದರು.</p>.<p>ಎನ್ಸಿಸಿ ಕೆಡೆಟ್ಗಳು ಪಥ ಸಂಚಲನ ನಡೆಸಿ ಗೌರವ ಸಲ್ಲಿಸಿದರು. ರ್ಯಾಲಿಯು ಬೆಳಗಾವಿ, ತಿರುವನಂತಪುರ, ಹೈದರಾಬಾದ್ ಹಾಗೂ ಕನ್ಯಾಕುಮಾರಿಯಿಂದ ಹೊರಟು ನ.22ರಂದು ಬೆಂಗಳೂರು ತಲುಪಲಿದ್ದು, ಅಲ್ಲಿ ವಿಜಯ್ ದಿವಸ್ ಹಾಗೂ ಎಂಇಜಿಯ ವಾರ್ಷಿಕೋತ್ಸವ ನಡೆಯಲಿದೆ.</p>.<p>ಸಂಘದ ಉಪಾಧ್ಯಕ್ಷ ನರಸೇಗೌಡ, ಮೇಜರ್ ಸೀತಾಶಿಖಾ, ಸುಬೇದಾರ್ ಎಚ್.ಡಿ.ಪಿಳ್ಳೈ, ನಿವೃತ್ತ ಲೆಫ್ಟಿನೆಂಟ್ ರಾಜೇಂದ್ರ ಹಾಗೂ 150ಕ್ಕೂ ನಿವೃತ್ತ ಸೇನಾ ಅಧಿಕಾರಿಗಳು ಹಾಗೂ ಯೋಧರು ಪಾಲ್ಗೊಂಡಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ಜಯಲಕ್ಷ್ಮಿಪುರಂನ ಕೊಡಗು ಸಹಕಾರ ಸಂಘದ ಅಂಗಳದಲ್ಲಿ ಕೇರಳದ ತಿರುವನಂತಪುರದಿಂದ ಬಂದ ಇ–ಬೈಕ್ ರ್ಯಾಲಿಯ ಐವರು ಮಾಜಿ ಯೋಧರನ್ನು ನಿವೃತ್ತ ಮೇಜರ್ ಜನರಲ್ ಸುಧೀರ್ ಒಂಭತ್ಕೆರೆ ಹಾಗೂ ಮೈಸೂರು ಸಶಸ್ತ್ರ ಪಡೆಗಳ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಪಿ.ಕೆ.ಬಿದ್ದಪ್ಪ ಸ್ವಾಗತಿಸಿ, ಬೀಳ್ಕೊಟ್ಟರು. </p>.<p>25ನೇ ಕಾರ್ಗಿಲ್ ವಿಜಯ್ ದಿವಸ್ ಹಾಗೂ ‘ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್’ನ (ಎಂಇಜಿ) 224ನೇ ವಾರ್ಷಿಕೋತ್ಸವ ಪ್ರಯುಕ್ತ ತಿರುವನಂತಪುರದಿಂದ ಬೆಂಗಳೂರಿಗೆ ರ್ಯಾಲಿ ನಡೆಯುತ್ತಿದ್ದು, ಮಂಗಳವಾರ ರಾತ್ರಿ ಅವರನ್ನು ಸ್ವಾಗತಿಸಲಾಗಿತ್ತು. ಬುಧವಾರ ಬೆಳಿಗ್ಗೆ 9.30ಕ್ಕೆ ಅವರಿಗೆ ವಂದನೆ ಸಲ್ಲಿಸಿದರು.</p>.<p>ಎನ್ಸಿಸಿ ಕೆಡೆಟ್ಗಳು ಪಥ ಸಂಚಲನ ನಡೆಸಿ ಗೌರವ ಸಲ್ಲಿಸಿದರು. ರ್ಯಾಲಿಯು ಬೆಳಗಾವಿ, ತಿರುವನಂತಪುರ, ಹೈದರಾಬಾದ್ ಹಾಗೂ ಕನ್ಯಾಕುಮಾರಿಯಿಂದ ಹೊರಟು ನ.22ರಂದು ಬೆಂಗಳೂರು ತಲುಪಲಿದ್ದು, ಅಲ್ಲಿ ವಿಜಯ್ ದಿವಸ್ ಹಾಗೂ ಎಂಇಜಿಯ ವಾರ್ಷಿಕೋತ್ಸವ ನಡೆಯಲಿದೆ.</p>.<p>ಸಂಘದ ಉಪಾಧ್ಯಕ್ಷ ನರಸೇಗೌಡ, ಮೇಜರ್ ಸೀತಾಶಿಖಾ, ಸುಬೇದಾರ್ ಎಚ್.ಡಿ.ಪಿಳ್ಳೈ, ನಿವೃತ್ತ ಲೆಫ್ಟಿನೆಂಟ್ ರಾಜೇಂದ್ರ ಹಾಗೂ 150ಕ್ಕೂ ನಿವೃತ್ತ ಸೇನಾ ಅಧಿಕಾರಿಗಳು ಹಾಗೂ ಯೋಧರು ಪಾಲ್ಗೊಂಡಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>