ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಆತಿಥೇಯರನ್ನು ಶುಭಂ ಮಿಶ್ರಾ ಕಾಡಿದರು. ಮೂರನೇ ದಿನದ ಕೊನೆಗೆ 35 ರನ್ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಕರ್ನಾಟಕಕ್ಕೆ ಅಂತಿಮ ದಿನ ಸಮಿತ್ ದ್ರಾವಿಡ್ (28 ರನ್) ಹಾಗೂ ಧ್ರುವ್ ಪ್ರಭಾಕರ್ (21) ಕೆಲಕಾಲ ಆಸರೆಯಾದರು. ಡ್ರಾದತ್ತ ಚಿತ್ತ ಹರಿಸಿದ ಈ ಜೋಡಿ 38 ರನ್ ಜೊತೆಯಾಟವಾಡಿತು. ಈ ವೇಳೆ ಸಮಿತ್, ಆರುಷ್ ಗೋಯೆಲ್ ಎಸೆತದಲ್ಲಿ ಯಶು ಪ್ರಧಾನ್ಗೆ ಕ್ಯಾಚ್ ನೀಡಿದ ನಂತರ ತಂಡ ಸೋಲಿನತ್ತ ಮುಖಮಾಡಿತು.