ಗ್ರಾಮದ ಗಂಗಾ ಸ್ಥಾನವಾದ ಕೆಗ್ಗೆರೆಯಲ್ಲಿ ಗುಜ್ಜಮ್ಮ ತಾಯಿ, ಮಲೆಯ ಋಷಿ ಕೊಣಪ್ಪ ಸ್ವಾಮಿ, ಕೆಂಗಲಮ್ಮ, ಚಿಕ್ಕ ದೇವಮ್ಮ ದೇವರುಗಳ ಬಿರುದು ಬಾವಲಿಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಬಾರಿ ಗಾತ್ರದ ಹೂವಿನ ಅಲಂಕಾರಗೊಂಡ ರಥೋತ್ಸವಕ್ಕೆ ಚಾಲನೆ ದೊರೆಯಿತು. ಗುಜ್ಜಮ್ಮ ತಾಯಿಯ ಮೂರ್ತಿಯನ್ನು ರಥೋತ್ಸವದಲ್ಲಿ ಮೆರವಣಿಗೆ ಮಾಡಲಾಯಿತು. ಬಾಲಕಿಯರು ಹಾಲಾರವಿ ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ನೂರಾರು ಭಕ್ತರು ಬಾಯಿಗೆ ಬೀಗ ಹಾಕಿಸಿಕೊಂಡು ದೇವಿಯ ಹರಕೆ ತೀರಿಸಿದರು. ತಮಟೆಯ ಸದ್ದಿಗೆ ಬರಡನಪುರ ಗ್ರಾಮಸ್ಥರು ನಂದಿ ಕಂಬವನ್ನು ಹೊತ್ತು ಕುಣಿದರು.