<p><strong>ಕೆ.ಆರ್.ನಗರ:</strong> ಎಡತೊರೆ ಗೃಹ ನಿರ್ಮಾಣ ಸಹಕಾರ ಸಂಘ 2024-25ನೇ ಸಾಲಿನಲ್ಲಿ ₹12.11ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎನ್.ಎಂ.ಪ್ರಕಾಶ್ ಹೇಳಿದರು.</p>.<p>ಇಲ್ಲಿನ ಶಿವಾನುಭವ ಕಲ್ಯಾಣ ಮಂಟಪದಲ್ಲಿ ಎಡತೊರೆ ಗೃಹ ನಿರ್ಮಾಣ ಸಹಕಾರ ಸಂಘದ ವತಿಯಿಂದ ಶನಿವಾರ ನಡೆದ 99ನೇ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು.</p>.<p>ಮುಂದಿನ ವರ್ಷ ಸಂಘ 100ವರ್ಷ ಪೂರೈಸುವುದರಿಂದ ಶತಮಾನೋತ್ಸವ ಅದ್ದೂರಿಯಾಗಿ ಆಚರಿಸಲು ಆಡಳಿತ ಮಂಡಳಿ ನಿರ್ಧರಿಸಿದೆ, ಅದಕ್ಕಾಗಿ ₹3.62ಲಕ್ಷ ಮೀಸಲು ಇಡಲಾಗಿದೆ ಎಂದರು.</p>.<p>ಷೇರುದಾರ ಸದಸ್ಯರಿಗೆ ಶೇ 10ರಷ್ಟು ಲಾಭಾಂಶ ನೀಡಲಾಗುತ್ತಿದೆ. ಸಂಘದ ಸದಸ್ಯರಿಂದ ₹32ಲಕ್ಷ ಠೇವಣಿ ಸಂಗ್ರಹಿಸಲಾಗಿದ್ದು, ಸಾಮಾನ್ಯ ಸದಸ್ಯರಿಗೆ ಶೇ 8.5ರಷ್ಟು ಮತ್ತು ಹಿರಿಯ ನಾಗರಿಕರಿಗೆ ಶೇ 9ರಷ್ಟು ಠೇವಣಿಗೆ ಬಡ್ಡಿ ನೀಡಲಾಗುತ್ತಿದೆ ಎಂದರು.</p>.<p>ಮರಣ ಹೊಂದಿರುವ ಸದಸ್ಯರ ಕುಟುಂಬಗಳಿಗೆ ಮರಣ ನಿಧಿಯಿಂದ ಪ್ರಸಕ್ತ ಸಾಲಿನಲ್ಲಿ ₹60 ಸಾವಿರ ವಿತರಣೆ ಮಾಡಲಾಗಿದೆ. ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ ಎಂದರು.</p>.<p>ಸಂಘದ ಸಿಇಒ ಜಿ.ಡಿ.ರೇಣುಕಾಪ್ರಸನ್ನ ಅವರು ಸಭೆಯಲ್ಲಿ 2025-26ನೇ ಸಾಲಿನ ಆಯ ವ್ಯಯ ಮಂಡಿಸಿ ಅನುಮೋದನೆ ಪಡೆದರು.</p>.<p>ಸಂಘದ ಉಪಾಧ್ಯಕ್ಷ ಮೋಹನರಾವ್, ನಿರ್ದೇಶಕ ಕೆ.ಸಿ.ನಾಗರಾಜ್, ಸುಭಾಷ್, ಕೆ.ಎಲ್.ರಾಜೇಶ್, ಸಯ್ಯದ್ ಅಸ್ಲಂ, ಕೆ.ಎನ್.ಶಂಕರ್, ಅವಿನಾಶ್ ಪಿ.ಪಟೇಲ್, ಸಿ.ಎಂ.ಶಶಿಕಲಾ, ಕೆ.ಸಿ.ಶಿಲ್ಪಾ, ಎಂ.ಎ.ರವೀಂದ್ರಕುಮಾರ್, ಸಿಬ್ಬಂದಿ ಕೆ.ಪಿ.ಪಟೇಲ್, ಎಂ.ಎ.ರವೀಂದ್ರಕುಮಾರ್, ಎಂ.ವಿಶ್ವನಾಥ್, ಎನ್.ಜಿ.ಕವಿತಾ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆ.ಆರ್.ನಗರ:</strong> ಎಡತೊರೆ ಗೃಹ ನಿರ್ಮಾಣ ಸಹಕಾರ ಸಂಘ 2024-25ನೇ ಸಾಲಿನಲ್ಲಿ ₹12.11ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎನ್.ಎಂ.ಪ್ರಕಾಶ್ ಹೇಳಿದರು.</p>.<p>ಇಲ್ಲಿನ ಶಿವಾನುಭವ ಕಲ್ಯಾಣ ಮಂಟಪದಲ್ಲಿ ಎಡತೊರೆ ಗೃಹ ನಿರ್ಮಾಣ ಸಹಕಾರ ಸಂಘದ ವತಿಯಿಂದ ಶನಿವಾರ ನಡೆದ 99ನೇ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು.</p>.<p>ಮುಂದಿನ ವರ್ಷ ಸಂಘ 100ವರ್ಷ ಪೂರೈಸುವುದರಿಂದ ಶತಮಾನೋತ್ಸವ ಅದ್ದೂರಿಯಾಗಿ ಆಚರಿಸಲು ಆಡಳಿತ ಮಂಡಳಿ ನಿರ್ಧರಿಸಿದೆ, ಅದಕ್ಕಾಗಿ ₹3.62ಲಕ್ಷ ಮೀಸಲು ಇಡಲಾಗಿದೆ ಎಂದರು.</p>.<p>ಷೇರುದಾರ ಸದಸ್ಯರಿಗೆ ಶೇ 10ರಷ್ಟು ಲಾಭಾಂಶ ನೀಡಲಾಗುತ್ತಿದೆ. ಸಂಘದ ಸದಸ್ಯರಿಂದ ₹32ಲಕ್ಷ ಠೇವಣಿ ಸಂಗ್ರಹಿಸಲಾಗಿದ್ದು, ಸಾಮಾನ್ಯ ಸದಸ್ಯರಿಗೆ ಶೇ 8.5ರಷ್ಟು ಮತ್ತು ಹಿರಿಯ ನಾಗರಿಕರಿಗೆ ಶೇ 9ರಷ್ಟು ಠೇವಣಿಗೆ ಬಡ್ಡಿ ನೀಡಲಾಗುತ್ತಿದೆ ಎಂದರು.</p>.<p>ಮರಣ ಹೊಂದಿರುವ ಸದಸ್ಯರ ಕುಟುಂಬಗಳಿಗೆ ಮರಣ ನಿಧಿಯಿಂದ ಪ್ರಸಕ್ತ ಸಾಲಿನಲ್ಲಿ ₹60 ಸಾವಿರ ವಿತರಣೆ ಮಾಡಲಾಗಿದೆ. ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ ಎಂದರು.</p>.<p>ಸಂಘದ ಸಿಇಒ ಜಿ.ಡಿ.ರೇಣುಕಾಪ್ರಸನ್ನ ಅವರು ಸಭೆಯಲ್ಲಿ 2025-26ನೇ ಸಾಲಿನ ಆಯ ವ್ಯಯ ಮಂಡಿಸಿ ಅನುಮೋದನೆ ಪಡೆದರು.</p>.<p>ಸಂಘದ ಉಪಾಧ್ಯಕ್ಷ ಮೋಹನರಾವ್, ನಿರ್ದೇಶಕ ಕೆ.ಸಿ.ನಾಗರಾಜ್, ಸುಭಾಷ್, ಕೆ.ಎಲ್.ರಾಜೇಶ್, ಸಯ್ಯದ್ ಅಸ್ಲಂ, ಕೆ.ಎನ್.ಶಂಕರ್, ಅವಿನಾಶ್ ಪಿ.ಪಟೇಲ್, ಸಿ.ಎಂ.ಶಶಿಕಲಾ, ಕೆ.ಸಿ.ಶಿಲ್ಪಾ, ಎಂ.ಎ.ರವೀಂದ್ರಕುಮಾರ್, ಸಿಬ್ಬಂದಿ ಕೆ.ಪಿ.ಪಟೇಲ್, ಎಂ.ಎ.ರವೀಂದ್ರಕುಮಾರ್, ಎಂ.ವಿಶ್ವನಾಥ್, ಎನ್.ಜಿ.ಕವಿತಾ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>