ನಂತರ, ವಿವಿಧ ಕ್ಷೇತ್ರದ ಸಾಧಕರಿಗೆ ದತ್ತ ಪೀಠದಿಂದ ಬಿರುದು ಪ್ರದಾನ ಮಾಡಲಾಯಿತು. ಕಪಿಲವಾಯಿ ರಾಮ ಸೋಮಯಾಜುಲು (ವೇದ ನಿಧಿ), ಬ್ರಜ್ ಭೂಷಣ್ ಓಝಾ (ಶಾಸ್ತ್ರ ನಿಧಿ), ನಾಗೈ ಕೆ.ಮುರಳೀಧರನ್ (ನಾದ ನಿಧಿ), ಪ್ರಭಲ ಸುಬ್ರಹ್ಮಣ್ಯ ಶರ್ಮಾ, ಮಾಮಿಳ್ಳಪಲ್ಲಿ ಮೃತ್ಯುಂಜಯ ಪ್ರಸಾದ್, ತ್ರಿಚೂರ್ ಸಹೋದರರಾದ ಶ್ರೀಕೃಷ್ಣಮೋಹನ್ ಮತ್ತು ರಾಮ್ಕುಮಾರ್ ಮೋಹನ್ (ದತ್ತ ಪೀಠ ಆಸ್ಥಾನ ವಿದ್ವಾನ್), ಮಾಯಾ ಸೀತಾರಾಮ್ (ಸಸ್ಯ ಬಂಧು), ಕರುಮೂರಿ ಲಲಿತಮ್ಮ (ಜಯಲಕ್ಷ್ಮಿ ಪುರಸ್ಕಾರ) ಹಾಗೂ ಸಂಪರ ನಾಗಸಾಯಿ ರಾಮಚಂದ್ರ ಶೇಖರ್ (ದತ್ತ ಪೀಠ ಬಂಧು) ಬಿರುದು ಪಡೆದುಕೊಂಡರು.