<p><strong>ಮೈಸೂರು</strong>: ‘ಹಾಲಿನ ದರ ಮತ್ತಷ್ಟು ಹೆಚ್ಚಳವಾಗಬೇಕಾದ ಅಗತ್ಯವಿದೆ. ಪ್ರಸ್ತುತ ಸಂದರ್ಭಕ್ಕೆ ಹೋಲಿಸಿದರೆ ಲೀಟರ್ಗೆ ₹ 40ರಿಂದ ₹ 50 ಇರಬೇಕಿತ್ತು. ಈ ಬಗ್ಗೆ ಎಲ್ಲರೂ ಒಗ್ಗೂಡಿ ಮುಖ್ಯಮಂತ್ರಿಯವರಲ್ಲಿ ಮನವಿ ಮಾಡೋಣ’ ಎಂದು ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದ (ಮೈಮುಲ್) ಅಧ್ಯಕ್ಷ ಆರ್.ಚೆಲುವರಾಜು ಹೇಳಿದರು.</p>.<p>ನಗರದ ಪಡುವಾರಹಳ್ಳಿಯ ವಿನಾಯಕ ಕನ್ವೆಷನ್ ಹಾಲ್ನಲ್ಲಿ ಶನಿವಾರ ನಡೆದ ಮೈಮುಲ್ನ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p>.<p>‘ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಹಾಲಿನ ದರ ಕಡಿಮೆ ಇದೆ. ಕೋವಿಡ್ ವೇಳೆ ಹಾಲಿನ ದರ ಹೆಚ್ಚಿಸಬಹುದಿತ್ತು. ಆಗಿನ ಸರ್ಕಾರ ಮಾಡಲಿಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಬಳಿಕ ₹ 36ಕ್ಕೆ ಹೆಚ್ಚಳ ಮಾಡಿ ರೈತರಿಗೆ ನೆರವಾಗಿದ್ದಾರೆ. ಅದು ಮತ್ತಷ್ಟು ಹೆಚ್ಚಳ ಆಗಬೇಕೆಂಬುದು ಒಕ್ಕೊರಲ ಬೇಡಿಕೆ ಇದೆ. ಅದನ್ನು ಸರ್ಕಾರಕ್ಕೆ ತಲುಪಿಸಲಾಗುವುದು’ ಎಂದು ತಿಳಿಸಿದರು.</p>.<p>‘ಮರಣ ನಿಧಿ ₹ 15ಸಾವಿರ ಇದ್ದು, 60 ವರ್ಷ ಮೇಲಿನವರಿಗೆ ₹ 20ಸಾವಿರ ನಿಧಿ ನೀಡಲು, ಪ್ರತಿಯೊಬ್ಬರಿಗೂ ₹ 1ಲಕ್ಷ ವಿಮೆ ಮಾಡಿಸಲು ಆಡಳಿತ ಮಂಡಳಿ ತೀರ್ಮಾನಿಸಿದೆ. ರಾಸುಗಳಿಗೂ ವಿಮೆ ಕಡ್ಡಾಯಗೊಳಿಸಿದ್ದು, ಪ್ರಮಾಣ ಹೆಚ್ಚಳ ಸಂಬಂಧ ಚರ್ಚಿಸಿ ತೀರ್ಮಾನಿಸಲಾಗುವುದು’ ಎಂದು ಹೇಳಿದರು.</p>.<p>ಮ್ಯಾಟ್ಗಳಿಗೆ ಬೇಡಿಕೆ: ‘ಮ್ಯಾಟ್ಗಳಿಗೆ ಬೇಡಿಕೆ ಇರುವುದು ಗಮನಕ್ಕೆ ಬಂದಿದೆ. ಸದ್ಯ 2ಸಾವಿರ ಮ್ಯಾಟ್ ಹಂಚಿದ್ದು, ಉಳಿದ 7ಸಾವಿರ ಮ್ಯಾಟ್ಗಳನ್ನು ಶೀಘ್ರದಲ್ಲೇ ಹಂಚುವ ಪ್ರಕ್ರಿಯೆ ನಡೆಯಲಿದೆ. ಚಾಪ್ ಕಟ್ಟರ್ಗಳು ಬಂದಿದ್ದು, ಸದಸ್ಯರು ಪಡೆದುಕೊಳ್ಳಬೇಕು’ ಎಂದರು.</p>.<p>‘ರಾಜ್ಯದಲ್ಲೇ ಶೇ.10ರಷ್ಟು ಹಾಲು ಜಿಲ್ಲೆಯಿಂದಲೇ ಉತ್ಪಾದನೆ ಆಗುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆ ಬಿಟ್ಟರೆ ಜಿಲ್ಲೆ 2ನೇ ಸ್ಥಾನದಲ್ಲಿದೆ. 4.5 ಲಕ್ಷ ಲೀಟರ್ ಮಾರಿ ಉಳಿದ ಹಾಲನ್ನು ಪುಡಿಯಾಗಿ ಪರಿವರ್ತಿಸಲಾಗುತ್ತಿದೆ. ಇದರಿಂದಾಗಿ ಪ್ರತಿ ವರ್ಷ ₹ 25 ಕೋಟಿ ಖರ್ಚು ಆಗುತ್ತಿದೆ. ಇದಕ್ಕಾಗಿ ನಮ್ಮಲ್ಲೇ ಪೌಡರ್ ಪ್ಲಾಂಟ್, ಚಾಕೊಲೆಟ್, ಪನ್ನೀರ್ ಉತ್ಪಾದನೆ ಘಟಕ ಸ್ಥಾಪಿಸುವ ಗುರಿಯನ್ನು ಆಡಳಿತ ಮಂಡಳಿ ಹೊಂದಿದೆ. ಪ್ರತಿ ಗ್ರಾಮದಲ್ಲೂ ಹಾಲು ಒಕ್ಕೂಟದ ಸ್ವಂತ ಕಟ್ಟಡ ಹೊಂದಬೇಕೆಂಬ ಉದ್ದೇಶದಿಂದ ಅನುದಾನ ಸಹ ನೀಡಲಾಗುತ್ತಿದೆ’ ಎಂದು ತಿಳಿಸಿದರು.</p>.<p>‘ಚೆನ್ನೈಗೆ 50ಸಾವಿರ ಲೀಟರ್ ಹಾಲು ಮಾರಾಟ ಮಾಡಲಾಗುತ್ತಿದ್ದು, ಇದನ್ನು ಲಕ್ಷಕ್ಕೆ ಏರಿಸುವ ಗುರಿ ಹೊಂದಿದ್ದೇವೆ. 17ಸಾವಿರ ಲೀಟರ್ ಹಾಲನ್ನು ಕೇರಳದಲ್ಲಿ ಮಾರಲಾಗುತ್ತಿದೆ. ಮೈಸೂರಿನಲ್ಲಿ ಹೆಚ್ಚಿನ ದರ ಕೊಟ್ಟು ರಾಜ್ಯದಲೇ ನಂಬರ್ ಒನ್ ಮಾಡುವ ಗುರಿ ಇದೆ. ಪದವಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯ ವ್ಯವಸ್ಥೆ ಮಾಡುತ್ತಿದ್ದೇವೆ. ಹಿಂದೆ ಎಲ್ಲರಿಗೂ ಇದ್ದ ವ್ಯವಸ್ಥೆಯನ್ನು ಜಿಲ್ಲಾ ಮಕ್ಕಳಿಗೆ ಸೀಮಿತಗೊಳಿಸಿದ್ದೇವೆ’ ಎಂದು ಹೇಳಿದರು.</p>.<p>‘ಮುಂದಿನ ದಿನಗಳಲ್ಲಿ ಹೈನೋದ್ಯಮಿಗಳಿಗೂ ಒಳ್ಳೆಯ ದಿನಗಳು ಬರಲಿವೆ. ಹೈನುಗಾರಿಕೆ ಉಪಕಸುಬಾಗದೇ ದೊಡ್ಡ ಉದ್ಯಮವಾಗಿ ಬೆಳೆಯಬೇಕಿದೆ’ ಎಂದರು.</p>.<p>ನಿರ್ದೆಶಕರಾದ ಎ.ಟಿ.ಸೋಮಶೇಖರ, ಕೆ.ಜಿ.ಮಹೇಶ್, ಕೆ.ಉಮಾಶಂಕರ್, ಸಿ.ಓಂ.ಪ್ರಕಾಶ್, ಪಿ.ಎಂ.ಪ್ರಸನ್ನ, ಕೆ.ಈರೇಗೌಡ, ಕೆ.ಎಸ್.ಕುಮಾರ್, ದಾಕ್ಷಾಯಿಣಿ ಬಸವರಾಜಪ್ಪ, ಲೀಲಾ ಬಿ.ಕೆ. ನಾಗರಾಜು, ನೀಲಾಂಬಿಕೆ ಮಹೇಶ್ ಕುರಹಟ್ಟಿ, ಶಿವಗಾಮಿ ಷಣ್ಮುಗಂ, ಬಿ.ಎನ್. ಸದಾನಂದ, ಬಿ.ಗುರುಸ್ವಾಮಿ, ಬಿ.ಎ.ಪ್ರಕಾಶ್, ಎ.ಬಿ.ಮಲ್ಲಿಕಾ ರವಿಕುಮಾರ್, ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಸುರೇಶ್ ನಾಯ್ಕ್, ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು. </p>.<p><strong>ಪ್ರಶಸ್ತಿಗಳ ವಿವರ ಉತ್ತಮ ಮಹಿಳಾ ಸಂಘ: ಕೆಂಪೇಗೌಡ</strong></p><p>ನಹುಂಡಿಯ ಆರ್.ಮಂಗಳಾ ಕೃಷ್ಣರಾಜಪುರ ಮಂಜುಳಾ ಮುಡುಕನಪುರ ರಾಜಮಣಿ ಅಗ್ರಹಾರದ ಕೆಂಪಾಮಣಿ ಶೀಗವಾಳು ಧನಲಕ್ಷ್ಮಿ ಕೊತ್ತೇಗಾಲದ ಜ್ಯೋತಿ ಮಲಗನಕೆರೆ ಸಂಘ. ಅತಿ ಹೆಚ್ಚು ಹಾಲು ಸರಬರಾಜು: ಬಂಡೀಪಾಳ್ಯ ಬಸವರಾಜು ದೇವನೂರು ಸುಹಾಸ್ ತುರಗನೂರು ಡಿ.ಪಿ.ಅಶೋಕ್ ಕುಲಕರ್ಣಿ ಬಸವನಹಳ್ಳಿ ಸುರೇಶ್ ಬಾಬು ಗುಳವಿನ ಅತ್ತೀಗುಪ್ಪೆ ಹನುಮಂತೇಗೌಡ ಇಂದಿರಾನಗರ ಶಿಜೋಜಾರ್ಜ್ ನವಿಲೂರು ಪಿಡಿ ಭೂಷಿತ್ ಪ್ರಶಸ್ತಿ ಸ್ವೀಕರಿಸಿದರು. ಉತ್ತಮ ಸೊಸೈಟಿ: ವರಕೋಡಿನ ಪಿ.ಶಂಕರ್ ಸರಗೂರಿನ ಎಂ.ರಾಜೇಶಪ್ಪ ಜೆ.ರಂಗಸ್ವಾಮಿ ಮರಳಯ್ಯನ ಕೊಪ್ಪಲು ಬಸವರಾಜು ನಾರಾಯಣಪುರ ರುದ್ರಸ್ವಾಮಿ ಜೆ.ಸಿಪಾಳ್ಯದ ದೇವರಾಜ ಅರಸ್ ಆನಂದಗೆರೆ ಅಭಿಲಾಷ್. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ‘ಹಾಲಿನ ದರ ಮತ್ತಷ್ಟು ಹೆಚ್ಚಳವಾಗಬೇಕಾದ ಅಗತ್ಯವಿದೆ. ಪ್ರಸ್ತುತ ಸಂದರ್ಭಕ್ಕೆ ಹೋಲಿಸಿದರೆ ಲೀಟರ್ಗೆ ₹ 40ರಿಂದ ₹ 50 ಇರಬೇಕಿತ್ತು. ಈ ಬಗ್ಗೆ ಎಲ್ಲರೂ ಒಗ್ಗೂಡಿ ಮುಖ್ಯಮಂತ್ರಿಯವರಲ್ಲಿ ಮನವಿ ಮಾಡೋಣ’ ಎಂದು ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದ (ಮೈಮುಲ್) ಅಧ್ಯಕ್ಷ ಆರ್.ಚೆಲುವರಾಜು ಹೇಳಿದರು.</p>.<p>ನಗರದ ಪಡುವಾರಹಳ್ಳಿಯ ವಿನಾಯಕ ಕನ್ವೆಷನ್ ಹಾಲ್ನಲ್ಲಿ ಶನಿವಾರ ನಡೆದ ಮೈಮುಲ್ನ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p>.<p>‘ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಹಾಲಿನ ದರ ಕಡಿಮೆ ಇದೆ. ಕೋವಿಡ್ ವೇಳೆ ಹಾಲಿನ ದರ ಹೆಚ್ಚಿಸಬಹುದಿತ್ತು. ಆಗಿನ ಸರ್ಕಾರ ಮಾಡಲಿಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಬಳಿಕ ₹ 36ಕ್ಕೆ ಹೆಚ್ಚಳ ಮಾಡಿ ರೈತರಿಗೆ ನೆರವಾಗಿದ್ದಾರೆ. ಅದು ಮತ್ತಷ್ಟು ಹೆಚ್ಚಳ ಆಗಬೇಕೆಂಬುದು ಒಕ್ಕೊರಲ ಬೇಡಿಕೆ ಇದೆ. ಅದನ್ನು ಸರ್ಕಾರಕ್ಕೆ ತಲುಪಿಸಲಾಗುವುದು’ ಎಂದು ತಿಳಿಸಿದರು.</p>.<p>‘ಮರಣ ನಿಧಿ ₹ 15ಸಾವಿರ ಇದ್ದು, 60 ವರ್ಷ ಮೇಲಿನವರಿಗೆ ₹ 20ಸಾವಿರ ನಿಧಿ ನೀಡಲು, ಪ್ರತಿಯೊಬ್ಬರಿಗೂ ₹ 1ಲಕ್ಷ ವಿಮೆ ಮಾಡಿಸಲು ಆಡಳಿತ ಮಂಡಳಿ ತೀರ್ಮಾನಿಸಿದೆ. ರಾಸುಗಳಿಗೂ ವಿಮೆ ಕಡ್ಡಾಯಗೊಳಿಸಿದ್ದು, ಪ್ರಮಾಣ ಹೆಚ್ಚಳ ಸಂಬಂಧ ಚರ್ಚಿಸಿ ತೀರ್ಮಾನಿಸಲಾಗುವುದು’ ಎಂದು ಹೇಳಿದರು.</p>.<p>ಮ್ಯಾಟ್ಗಳಿಗೆ ಬೇಡಿಕೆ: ‘ಮ್ಯಾಟ್ಗಳಿಗೆ ಬೇಡಿಕೆ ಇರುವುದು ಗಮನಕ್ಕೆ ಬಂದಿದೆ. ಸದ್ಯ 2ಸಾವಿರ ಮ್ಯಾಟ್ ಹಂಚಿದ್ದು, ಉಳಿದ 7ಸಾವಿರ ಮ್ಯಾಟ್ಗಳನ್ನು ಶೀಘ್ರದಲ್ಲೇ ಹಂಚುವ ಪ್ರಕ್ರಿಯೆ ನಡೆಯಲಿದೆ. ಚಾಪ್ ಕಟ್ಟರ್ಗಳು ಬಂದಿದ್ದು, ಸದಸ್ಯರು ಪಡೆದುಕೊಳ್ಳಬೇಕು’ ಎಂದರು.</p>.<p>‘ರಾಜ್ಯದಲ್ಲೇ ಶೇ.10ರಷ್ಟು ಹಾಲು ಜಿಲ್ಲೆಯಿಂದಲೇ ಉತ್ಪಾದನೆ ಆಗುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆ ಬಿಟ್ಟರೆ ಜಿಲ್ಲೆ 2ನೇ ಸ್ಥಾನದಲ್ಲಿದೆ. 4.5 ಲಕ್ಷ ಲೀಟರ್ ಮಾರಿ ಉಳಿದ ಹಾಲನ್ನು ಪುಡಿಯಾಗಿ ಪರಿವರ್ತಿಸಲಾಗುತ್ತಿದೆ. ಇದರಿಂದಾಗಿ ಪ್ರತಿ ವರ್ಷ ₹ 25 ಕೋಟಿ ಖರ್ಚು ಆಗುತ್ತಿದೆ. ಇದಕ್ಕಾಗಿ ನಮ್ಮಲ್ಲೇ ಪೌಡರ್ ಪ್ಲಾಂಟ್, ಚಾಕೊಲೆಟ್, ಪನ್ನೀರ್ ಉತ್ಪಾದನೆ ಘಟಕ ಸ್ಥಾಪಿಸುವ ಗುರಿಯನ್ನು ಆಡಳಿತ ಮಂಡಳಿ ಹೊಂದಿದೆ. ಪ್ರತಿ ಗ್ರಾಮದಲ್ಲೂ ಹಾಲು ಒಕ್ಕೂಟದ ಸ್ವಂತ ಕಟ್ಟಡ ಹೊಂದಬೇಕೆಂಬ ಉದ್ದೇಶದಿಂದ ಅನುದಾನ ಸಹ ನೀಡಲಾಗುತ್ತಿದೆ’ ಎಂದು ತಿಳಿಸಿದರು.</p>.<p>‘ಚೆನ್ನೈಗೆ 50ಸಾವಿರ ಲೀಟರ್ ಹಾಲು ಮಾರಾಟ ಮಾಡಲಾಗುತ್ತಿದ್ದು, ಇದನ್ನು ಲಕ್ಷಕ್ಕೆ ಏರಿಸುವ ಗುರಿ ಹೊಂದಿದ್ದೇವೆ. 17ಸಾವಿರ ಲೀಟರ್ ಹಾಲನ್ನು ಕೇರಳದಲ್ಲಿ ಮಾರಲಾಗುತ್ತಿದೆ. ಮೈಸೂರಿನಲ್ಲಿ ಹೆಚ್ಚಿನ ದರ ಕೊಟ್ಟು ರಾಜ್ಯದಲೇ ನಂಬರ್ ಒನ್ ಮಾಡುವ ಗುರಿ ಇದೆ. ಪದವಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯ ವ್ಯವಸ್ಥೆ ಮಾಡುತ್ತಿದ್ದೇವೆ. ಹಿಂದೆ ಎಲ್ಲರಿಗೂ ಇದ್ದ ವ್ಯವಸ್ಥೆಯನ್ನು ಜಿಲ್ಲಾ ಮಕ್ಕಳಿಗೆ ಸೀಮಿತಗೊಳಿಸಿದ್ದೇವೆ’ ಎಂದು ಹೇಳಿದರು.</p>.<p>‘ಮುಂದಿನ ದಿನಗಳಲ್ಲಿ ಹೈನೋದ್ಯಮಿಗಳಿಗೂ ಒಳ್ಳೆಯ ದಿನಗಳು ಬರಲಿವೆ. ಹೈನುಗಾರಿಕೆ ಉಪಕಸುಬಾಗದೇ ದೊಡ್ಡ ಉದ್ಯಮವಾಗಿ ಬೆಳೆಯಬೇಕಿದೆ’ ಎಂದರು.</p>.<p>ನಿರ್ದೆಶಕರಾದ ಎ.ಟಿ.ಸೋಮಶೇಖರ, ಕೆ.ಜಿ.ಮಹೇಶ್, ಕೆ.ಉಮಾಶಂಕರ್, ಸಿ.ಓಂ.ಪ್ರಕಾಶ್, ಪಿ.ಎಂ.ಪ್ರಸನ್ನ, ಕೆ.ಈರೇಗೌಡ, ಕೆ.ಎಸ್.ಕುಮಾರ್, ದಾಕ್ಷಾಯಿಣಿ ಬಸವರಾಜಪ್ಪ, ಲೀಲಾ ಬಿ.ಕೆ. ನಾಗರಾಜು, ನೀಲಾಂಬಿಕೆ ಮಹೇಶ್ ಕುರಹಟ್ಟಿ, ಶಿವಗಾಮಿ ಷಣ್ಮುಗಂ, ಬಿ.ಎನ್. ಸದಾನಂದ, ಬಿ.ಗುರುಸ್ವಾಮಿ, ಬಿ.ಎ.ಪ್ರಕಾಶ್, ಎ.ಬಿ.ಮಲ್ಲಿಕಾ ರವಿಕುಮಾರ್, ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಸುರೇಶ್ ನಾಯ್ಕ್, ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು. </p>.<p><strong>ಪ್ರಶಸ್ತಿಗಳ ವಿವರ ಉತ್ತಮ ಮಹಿಳಾ ಸಂಘ: ಕೆಂಪೇಗೌಡ</strong></p><p>ನಹುಂಡಿಯ ಆರ್.ಮಂಗಳಾ ಕೃಷ್ಣರಾಜಪುರ ಮಂಜುಳಾ ಮುಡುಕನಪುರ ರಾಜಮಣಿ ಅಗ್ರಹಾರದ ಕೆಂಪಾಮಣಿ ಶೀಗವಾಳು ಧನಲಕ್ಷ್ಮಿ ಕೊತ್ತೇಗಾಲದ ಜ್ಯೋತಿ ಮಲಗನಕೆರೆ ಸಂಘ. ಅತಿ ಹೆಚ್ಚು ಹಾಲು ಸರಬರಾಜು: ಬಂಡೀಪಾಳ್ಯ ಬಸವರಾಜು ದೇವನೂರು ಸುಹಾಸ್ ತುರಗನೂರು ಡಿ.ಪಿ.ಅಶೋಕ್ ಕುಲಕರ್ಣಿ ಬಸವನಹಳ್ಳಿ ಸುರೇಶ್ ಬಾಬು ಗುಳವಿನ ಅತ್ತೀಗುಪ್ಪೆ ಹನುಮಂತೇಗೌಡ ಇಂದಿರಾನಗರ ಶಿಜೋಜಾರ್ಜ್ ನವಿಲೂರು ಪಿಡಿ ಭೂಷಿತ್ ಪ್ರಶಸ್ತಿ ಸ್ವೀಕರಿಸಿದರು. ಉತ್ತಮ ಸೊಸೈಟಿ: ವರಕೋಡಿನ ಪಿ.ಶಂಕರ್ ಸರಗೂರಿನ ಎಂ.ರಾಜೇಶಪ್ಪ ಜೆ.ರಂಗಸ್ವಾಮಿ ಮರಳಯ್ಯನ ಕೊಪ್ಪಲು ಬಸವರಾಜು ನಾರಾಯಣಪುರ ರುದ್ರಸ್ವಾಮಿ ಜೆ.ಸಿಪಾಳ್ಯದ ದೇವರಾಜ ಅರಸ್ ಆನಂದಗೆರೆ ಅಭಿಲಾಷ್. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>