<p><strong>ಮೈಸೂರು:</strong> ವಿದ್ವಾಂಸ ಟಿ.ವಿ.ವೆಂಕಟಾಚಲ ಶಾಸ್ತ್ರಿ ಅವರಿಗೆ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯು ಮಂಗಳವಾರ ‘ಮುದ್ದುರಾಮ ಪ್ರಶಸ್ತಿ’ ಪ್ರದಾನ ಮಾಡಿದರು.</p>.<p>ಮುದ್ದುರಾಮ ಪ್ರತಿಷ್ಠಾನದಿಂದ ಇಲ್ಲಿನ ಜೆಎಸ್ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು.</p>.<p>ಪ್ರಶಸ್ತಿಯು ₹ 50 ಸಾವಿರ ನಗದು, ಪ್ರಶಸ್ತಿ ಫಲಕ ಒಳಗೊಂಡಿದೆ. ಇದೇ ವೇಳೆ ಪ್ರತಿಷ್ಠಾನದ ಅಧ್ಯಕ್ಷ ಕೆ.ಸಿ.ಶಿವಪ್ಪ ಅವರ 1,008 ಚೌಪದಿಗಳನ್ನು ಒಳಗೊಂಡ ‘ಮುದ್ದುರಾಮ ಮಂಜರಿ’ ಕೃತಿಯೂ ಬಿಡುಗಡೆಯಾಯಿತು.</p>.<p>ಕೃತಿ ಕುರಿತು ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಮಾತನಾಡಿ, ‘ಎಲ್ಲರಿಗೂ ಒಳಿತು ಬಯಸುವುದೇ ಕಾವ್ಯದ ಉದ್ದೇಶ. ಅದನ್ನು ಗ್ರಹಿಸುವುದು ಆಯಾ ಕಾಲಘಟ್ಟವನ್ನು ಅವಲಂಬಿಸಿರುತ್ತದೆ’ ಎಂದರು.</p>.<p>‘ಕಾವ್ಯ ಓದಿದರೆ ಏನು ಸಿಗುತ್ತದೆ ಎಂಬ ಪ್ರಶ್ನೆ ಇಂದು ಹೆಚ್ಚುತ್ತಿದೆ. ಮುದ್ದುರಾಮ ಕೃತಿಗಳನ್ನು ಓದಿದಾಗ ಬದುಕಿನಲ್ಲಿ ಯಾವುದು ಆನಂದ, ಜೀವನದ ಗುರಿಯೇನು ಎಂಬುದು ತಿಳಿಯುತ್ತದೆ. ಮನುಷ್ಯ ಜೀವನದ ಸಾರ್ಥಕತೆಗೆ ಅಗತ್ಯವಾದ ಕವನಗಳು ಇಲ್ಲಿವೆ. ಕೃತಿಯು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದೆ’ ಎಂದು ಶ್ಲಾಘಿಸಿದರು.</p>.<p>ಸಂಸ್ಕೃತ ವಿದ್ವಾಂಸ ಎಚ್.ವಿ.ನಾಗರಾಜ ರಾವ್, ‘1995ರಲ್ಲಿ ಚಿಕಾಗೊ ವಿಶ್ವವಿದ್ಯಾಲಯದಲ್ಲಿದ್ದ ಶೆಲ್ಡನ್ ಪೋಲಕ್ ಎಂಬ ವಿದ್ವಾಂಸ, ಪಂಪನ ವಿಕ್ರಮಾರ್ಜುನ ವಿಜಯದ ಬಗ್ಗೆ ತಿಳಿದುಕೊಳ್ಳಲು ಮೈಸೂರಿಗೆ ಬಂದು ವೆಂಕಟಾಚಲ ಶಾಸ್ತ್ರಿ ಅವರ ಬಳಿ 8 ತಿಂಗಳು ಅಭ್ಯಾಸ ಮಾಡಿದ್ದರು. ಇದು ಶಾಸ್ತ್ರಿಗಳ ವಿದ್ವತ್ತನ್ನು ತೋರುತ್ತದೆ’ ಎಂದರು.</p>.<p>ವಾಗ್ಮಿ ಹಿರೇಮಗಳೂರು ಕಣ್ಣನ್ ಮಾತನಾಡಿ, ‘ಕಾವ್ಯಾಸಕ್ತಿಯಿದ್ದಾಗ ಮಾತ್ರ ಕಾವ್ಯದ ಆಸ್ವಾದನೆ ಸಾಧ್ಯ. ಮುದ್ದುರಾಮ ಚೌಪದಿಗಳು ಸಾಹಿತ್ಯ ಕ್ಷೇತ್ರದಲ್ಲಿ ಮಹತ್ವದ ಸ್ಥಾನ ಹೊಂದಿವೆ’ ಎಂದು ತಿಳಿಸಿದರು.</p>.<p>ಪ್ರತಿಷ್ಠಾನದ ಅಧ್ಯಕ್ಷ ಕೆ.ಸಿ.ಶಿವಪ್ಪ, ಕಾರ್ಯದರ್ಶಿ ಆರ್.ಎ.ಚೇತನ ರಾಮ್, ಉಪಾಧ್ಯಕ್ಷ ನೀಲಗಿರಿ ತಳವಾರ, ಸಹಕಾರ್ಯದರ್ಶಿ ನ. ರವಿಕುಮಾರ್ ಹಾಜರಿದ್ದರು. </p>.<p><strong>ಕೃತಿ ಪರಿಚಯ</strong> </p><p>ಕೃತಿ: ಮುದ್ದುರಾಮ ಮಂಜರಿ </p><p>ಲೇಖಕ: ಕೆ.ಸಿ.ಶಿವಪ್ಪ </p><p>ಪುಟಗಳು: 295 </p><p>ಬೆಲೆ: ₹250 </p><p>ಪ್ರಕಾಶನ: ಮುದ್ದುರಾಮ ಪ್ರತಿಷ್ಠಾನ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ವಿದ್ವಾಂಸ ಟಿ.ವಿ.ವೆಂಕಟಾಚಲ ಶಾಸ್ತ್ರಿ ಅವರಿಗೆ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯು ಮಂಗಳವಾರ ‘ಮುದ್ದುರಾಮ ಪ್ರಶಸ್ತಿ’ ಪ್ರದಾನ ಮಾಡಿದರು.</p>.<p>ಮುದ್ದುರಾಮ ಪ್ರತಿಷ್ಠಾನದಿಂದ ಇಲ್ಲಿನ ಜೆಎಸ್ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು.</p>.<p>ಪ್ರಶಸ್ತಿಯು ₹ 50 ಸಾವಿರ ನಗದು, ಪ್ರಶಸ್ತಿ ಫಲಕ ಒಳಗೊಂಡಿದೆ. ಇದೇ ವೇಳೆ ಪ್ರತಿಷ್ಠಾನದ ಅಧ್ಯಕ್ಷ ಕೆ.ಸಿ.ಶಿವಪ್ಪ ಅವರ 1,008 ಚೌಪದಿಗಳನ್ನು ಒಳಗೊಂಡ ‘ಮುದ್ದುರಾಮ ಮಂಜರಿ’ ಕೃತಿಯೂ ಬಿಡುಗಡೆಯಾಯಿತು.</p>.<p>ಕೃತಿ ಕುರಿತು ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಮಾತನಾಡಿ, ‘ಎಲ್ಲರಿಗೂ ಒಳಿತು ಬಯಸುವುದೇ ಕಾವ್ಯದ ಉದ್ದೇಶ. ಅದನ್ನು ಗ್ರಹಿಸುವುದು ಆಯಾ ಕಾಲಘಟ್ಟವನ್ನು ಅವಲಂಬಿಸಿರುತ್ತದೆ’ ಎಂದರು.</p>.<p>‘ಕಾವ್ಯ ಓದಿದರೆ ಏನು ಸಿಗುತ್ತದೆ ಎಂಬ ಪ್ರಶ್ನೆ ಇಂದು ಹೆಚ್ಚುತ್ತಿದೆ. ಮುದ್ದುರಾಮ ಕೃತಿಗಳನ್ನು ಓದಿದಾಗ ಬದುಕಿನಲ್ಲಿ ಯಾವುದು ಆನಂದ, ಜೀವನದ ಗುರಿಯೇನು ಎಂಬುದು ತಿಳಿಯುತ್ತದೆ. ಮನುಷ್ಯ ಜೀವನದ ಸಾರ್ಥಕತೆಗೆ ಅಗತ್ಯವಾದ ಕವನಗಳು ಇಲ್ಲಿವೆ. ಕೃತಿಯು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದೆ’ ಎಂದು ಶ್ಲಾಘಿಸಿದರು.</p>.<p>ಸಂಸ್ಕೃತ ವಿದ್ವಾಂಸ ಎಚ್.ವಿ.ನಾಗರಾಜ ರಾವ್, ‘1995ರಲ್ಲಿ ಚಿಕಾಗೊ ವಿಶ್ವವಿದ್ಯಾಲಯದಲ್ಲಿದ್ದ ಶೆಲ್ಡನ್ ಪೋಲಕ್ ಎಂಬ ವಿದ್ವಾಂಸ, ಪಂಪನ ವಿಕ್ರಮಾರ್ಜುನ ವಿಜಯದ ಬಗ್ಗೆ ತಿಳಿದುಕೊಳ್ಳಲು ಮೈಸೂರಿಗೆ ಬಂದು ವೆಂಕಟಾಚಲ ಶಾಸ್ತ್ರಿ ಅವರ ಬಳಿ 8 ತಿಂಗಳು ಅಭ್ಯಾಸ ಮಾಡಿದ್ದರು. ಇದು ಶಾಸ್ತ್ರಿಗಳ ವಿದ್ವತ್ತನ್ನು ತೋರುತ್ತದೆ’ ಎಂದರು.</p>.<p>ವಾಗ್ಮಿ ಹಿರೇಮಗಳೂರು ಕಣ್ಣನ್ ಮಾತನಾಡಿ, ‘ಕಾವ್ಯಾಸಕ್ತಿಯಿದ್ದಾಗ ಮಾತ್ರ ಕಾವ್ಯದ ಆಸ್ವಾದನೆ ಸಾಧ್ಯ. ಮುದ್ದುರಾಮ ಚೌಪದಿಗಳು ಸಾಹಿತ್ಯ ಕ್ಷೇತ್ರದಲ್ಲಿ ಮಹತ್ವದ ಸ್ಥಾನ ಹೊಂದಿವೆ’ ಎಂದು ತಿಳಿಸಿದರು.</p>.<p>ಪ್ರತಿಷ್ಠಾನದ ಅಧ್ಯಕ್ಷ ಕೆ.ಸಿ.ಶಿವಪ್ಪ, ಕಾರ್ಯದರ್ಶಿ ಆರ್.ಎ.ಚೇತನ ರಾಮ್, ಉಪಾಧ್ಯಕ್ಷ ನೀಲಗಿರಿ ತಳವಾರ, ಸಹಕಾರ್ಯದರ್ಶಿ ನ. ರವಿಕುಮಾರ್ ಹಾಜರಿದ್ದರು. </p>.<p><strong>ಕೃತಿ ಪರಿಚಯ</strong> </p><p>ಕೃತಿ: ಮುದ್ದುರಾಮ ಮಂಜರಿ </p><p>ಲೇಖಕ: ಕೆ.ಸಿ.ಶಿವಪ್ಪ </p><p>ಪುಟಗಳು: 295 </p><p>ಬೆಲೆ: ₹250 </p><p>ಪ್ರಕಾಶನ: ಮುದ್ದುರಾಮ ಪ್ರತಿಷ್ಠಾನ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>