<p><strong>ಮೈಸೂರು:</strong> ‘ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ ₹1.40 ಕೋಟಿ ನಿವ್ವಳ ಲಾಭವನ್ನು ಪಡೆದಿದೆ’ ಎಂದು ಬ್ಯಾಂಕ್ ಅಧ್ಯಕ್ಷ ಜೆ.ಯೋಗೇಶ್ ಹೇಳಿದರು. </p>.<p>ವಸ್ತುಪ್ರದರ್ಶನ ಪ್ರಾಧಿಕಾರದ ಕಾಳಿಂಗರಾವ್ ಸಭಾ ಭವನದಲ್ಲಿ ಸೋಮವಾರ ಆಯೋಜಿಸಿದ್ದ 119ನೇ ವಾರ್ಷಿಕ ಸಭೆಯಲ್ಲಿ, ‘ 33,333 ಸದಸ್ಯರನ್ನು ಹೊಂದಿರುವ ಬ್ಯಾಂಕ್ನಲ್ಲಿ ₹10,968 ಲಕ್ಷ ಸಾಲ ನೀಡಿದ್ದು, ಶೇ 10 ರಷ್ಟು ಡಿವಿಡೆಂಡ್ ನೀಡುತ್ತೇವೆ’ ಎಂದರು.</p>.<p>‘ನನ್ನ ಅವಧಿಯಲ್ಲಿ ಶೇ 32ರಷ್ಟಿದ್ದ ಎನ್ಪಿಎಯನ್ನು 40 ದಿನದಲ್ಲಿ ಶೇ 5.46 ಕ್ಕೆ ನಿಲ್ಲಿಸಿದ್ದೇನೆ. ಬ್ಯಾಂಕ್ ಉತ್ತಮ ಸ್ಥಿತಿಯಲ್ಲಿದೆ. ಆಡಳಿತ ಮಂಡಳಿ ಸಹಕಾರದಿಂದ ಇದನ್ನು ಕಾರ್ಯಗತ ಮಾಡಿದ್ದೇವೆ. ಮಾರ್ಚ್ ಒಳಗೆ ವಸೂಲಾತಿ ಮಾಡಿದ್ದರ ಫಲವಾಗಿ ₹1.40 ಕೋಟಿ ಲಾಭ ತಂದಿದ್ದೇವೆ. ಎಸ್ಬಿ ಖಾತೆ ತೆರೆಯುವ ಮೂಲಕ ಯುಪಿಎ ಆನ್ಲೈನ್ ಮೂಲಕವೂ ಬ್ಯಾಂಕ್ನಲ್ಲಿ ಹಣಕಾಸಿನ ವ್ಯವಹಾರ ಮಾಡಬಹುದಾಗಿದೆ. ನಾಲ್ಕು ವರ್ಷದಿಂದ ಮರಣ ನಿಧಿ ಕಟ್ಟಿಲ್ಲ. ಸದ್ಯಕ್ಕೆ ಶೇ 70ರಷ್ಟು ಮಂದಿ ₹500 ವಂತಿಗೆ ಕಟ್ಟಿದ್ದಾರೆ. ಉಳಿದವರಿಗೆ ಡಿ.31 ರವರೆಗೆ ಅವಕಾಶ ನೀಡಲಾಗುತ್ತಿದೆ’ ಎಂದು ತಿಳಿಸಿದರು.</p>.<p>ಸಭೆಯಲ್ಲಿ ಡಿವಿಡೆಂಡ್ ಹೆಚ್ಚಳ, ಯುಪಿಎ (UPI) ಬಳಕೆ, ಮರಣ ನಿಧಿಯ ಬಗ್ಗೆ ಸದಸ್ಯರು ಸಲಹೆ ನೀಡಿದರು. ಸಭೆ ಬಳಿಕ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಾಧಕ ಮಕ್ಕಳಿಗೆ ಸನ್ಮಾನಿಸಲಾಯಿತು. ಬ್ಯಾಂಕಿನ ಷೇರು ಹೊಂದಿದ ಹಿರಿಯ 119 ಮಂದಿ ಸದಸ್ಯರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.</p>.<p>ನಿರ್ದೇಶಕರಾದ ಎಸ್.ಬಿ.ಎಂ.ಮಂಜು, ಎನ್.ಯೋಗನಂದ, ಜಿ.ನಿರಂಜನ್, ಎಚ್.ಹರೀಶ್ಕುಮಾರ್, ಪಡುವಾರಹಳ್ಳಿ ಎಂ.ರಾಮಕೃಷ್ಣ, ಆರ್.ರವಿಕುಮಾರ್, ಆರ್.ಸೋಮಣ್ಣ, ಕೆ.ಗಿರೀಶ್, ಸಿ.ಚಂದ್ರಶೇಖರ್, ಪಿ.ರಾಜೇಶ್ವರಿ, ಎಂ.ಪ್ರಮೀಳಾ, ವೃತ್ತಿಪರ ನಿರ್ದೇಶಕರಾದ ಎಂ.ವೈ.ರಮೇಶ್ ಗೌಡ, ಸಿ.ಎಸ್. ರಾಮಕೃಷ್ಣಯ್ಯ, ಕಾರ್ಯದರ್ಶಿ ಕೆ. ಹರ್ಷಿತ್ ಗೌಡ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ ₹1.40 ಕೋಟಿ ನಿವ್ವಳ ಲಾಭವನ್ನು ಪಡೆದಿದೆ’ ಎಂದು ಬ್ಯಾಂಕ್ ಅಧ್ಯಕ್ಷ ಜೆ.ಯೋಗೇಶ್ ಹೇಳಿದರು. </p>.<p>ವಸ್ತುಪ್ರದರ್ಶನ ಪ್ರಾಧಿಕಾರದ ಕಾಳಿಂಗರಾವ್ ಸಭಾ ಭವನದಲ್ಲಿ ಸೋಮವಾರ ಆಯೋಜಿಸಿದ್ದ 119ನೇ ವಾರ್ಷಿಕ ಸಭೆಯಲ್ಲಿ, ‘ 33,333 ಸದಸ್ಯರನ್ನು ಹೊಂದಿರುವ ಬ್ಯಾಂಕ್ನಲ್ಲಿ ₹10,968 ಲಕ್ಷ ಸಾಲ ನೀಡಿದ್ದು, ಶೇ 10 ರಷ್ಟು ಡಿವಿಡೆಂಡ್ ನೀಡುತ್ತೇವೆ’ ಎಂದರು.</p>.<p>‘ನನ್ನ ಅವಧಿಯಲ್ಲಿ ಶೇ 32ರಷ್ಟಿದ್ದ ಎನ್ಪಿಎಯನ್ನು 40 ದಿನದಲ್ಲಿ ಶೇ 5.46 ಕ್ಕೆ ನಿಲ್ಲಿಸಿದ್ದೇನೆ. ಬ್ಯಾಂಕ್ ಉತ್ತಮ ಸ್ಥಿತಿಯಲ್ಲಿದೆ. ಆಡಳಿತ ಮಂಡಳಿ ಸಹಕಾರದಿಂದ ಇದನ್ನು ಕಾರ್ಯಗತ ಮಾಡಿದ್ದೇವೆ. ಮಾರ್ಚ್ ಒಳಗೆ ವಸೂಲಾತಿ ಮಾಡಿದ್ದರ ಫಲವಾಗಿ ₹1.40 ಕೋಟಿ ಲಾಭ ತಂದಿದ್ದೇವೆ. ಎಸ್ಬಿ ಖಾತೆ ತೆರೆಯುವ ಮೂಲಕ ಯುಪಿಎ ಆನ್ಲೈನ್ ಮೂಲಕವೂ ಬ್ಯಾಂಕ್ನಲ್ಲಿ ಹಣಕಾಸಿನ ವ್ಯವಹಾರ ಮಾಡಬಹುದಾಗಿದೆ. ನಾಲ್ಕು ವರ್ಷದಿಂದ ಮರಣ ನಿಧಿ ಕಟ್ಟಿಲ್ಲ. ಸದ್ಯಕ್ಕೆ ಶೇ 70ರಷ್ಟು ಮಂದಿ ₹500 ವಂತಿಗೆ ಕಟ್ಟಿದ್ದಾರೆ. ಉಳಿದವರಿಗೆ ಡಿ.31 ರವರೆಗೆ ಅವಕಾಶ ನೀಡಲಾಗುತ್ತಿದೆ’ ಎಂದು ತಿಳಿಸಿದರು.</p>.<p>ಸಭೆಯಲ್ಲಿ ಡಿವಿಡೆಂಡ್ ಹೆಚ್ಚಳ, ಯುಪಿಎ (UPI) ಬಳಕೆ, ಮರಣ ನಿಧಿಯ ಬಗ್ಗೆ ಸದಸ್ಯರು ಸಲಹೆ ನೀಡಿದರು. ಸಭೆ ಬಳಿಕ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಾಧಕ ಮಕ್ಕಳಿಗೆ ಸನ್ಮಾನಿಸಲಾಯಿತು. ಬ್ಯಾಂಕಿನ ಷೇರು ಹೊಂದಿದ ಹಿರಿಯ 119 ಮಂದಿ ಸದಸ್ಯರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.</p>.<p>ನಿರ್ದೇಶಕರಾದ ಎಸ್.ಬಿ.ಎಂ.ಮಂಜು, ಎನ್.ಯೋಗನಂದ, ಜಿ.ನಿರಂಜನ್, ಎಚ್.ಹರೀಶ್ಕುಮಾರ್, ಪಡುವಾರಹಳ್ಳಿ ಎಂ.ರಾಮಕೃಷ್ಣ, ಆರ್.ರವಿಕುಮಾರ್, ಆರ್.ಸೋಮಣ್ಣ, ಕೆ.ಗಿರೀಶ್, ಸಿ.ಚಂದ್ರಶೇಖರ್, ಪಿ.ರಾಜೇಶ್ವರಿ, ಎಂ.ಪ್ರಮೀಳಾ, ವೃತ್ತಿಪರ ನಿರ್ದೇಶಕರಾದ ಎಂ.ವೈ.ರಮೇಶ್ ಗೌಡ, ಸಿ.ಎಸ್. ರಾಮಕೃಷ್ಣಯ್ಯ, ಕಾರ್ಯದರ್ಶಿ ಕೆ. ಹರ್ಷಿತ್ ಗೌಡ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>