<p><strong>ಮೈಸೂರು</strong>: ಅರಮನೆ ಆವರಣದಲ್ಲಿ ಜಂಬೂಸವಾರಿ ವೀಕ್ಷಣೆಗೆ ಗೋಲ್ಡ್ ಕಾರ್ಡ್, ವಿಐಪಿ ಟಿಕೆಟ್ ಇದ್ದರೂ ಒಳಗೆ ಪ್ರವೇಶ ಸಿಗದೇ ನೂರಾರು ಜನ ಪರದಾಡಿದರು.</p>.<p>ಮಧ್ಯಾಹ್ನ 12ರ ವೇಳೆಗೆ ಅರಮನೆ ಆವರಣ ಭರ್ತಿಯಾಗಿದ್ದರಿಂದ ನಂತರ ಬಂದವರಿಗೆ ಪೊಲೀಸರು ಪ್ರವೇಶ ನಿರಾಕರಿಸಿದರು. ಪಾಸ್ ಹಿಡಿದು ಸಾಲಿನಲ್ಲಿ ನಿಂತರೂ ಪ್ರವೇಶ ಸಿಗದ ಕಾರಣ ಬೇಸತ್ತ ಪ್ರವಾಸಿಗರು– ಸ್ಥಳೀಯರು ಪೊಲೀಸರೊಂದಿಗೆ ವಾಗ್ದಾದ ನಡೆಸಿದರು. ಗಂಟೆಗಟ್ಟಲೆ ಕಾದು ನಿಂತರೂ ಪ್ರಯೋಜನವಾಗಲಿಲ್ಲ.</p>.<p>‘₹6,500 ಕೊಟ್ಟು ಗೋಲ್ಡ್ ಕಾರ್ಡ್ ಪಡೆದಿದ್ದೇವೆ. ದಸರಾ ಮೆರವಣಿಗೆ ಆರಂಭದ ಒಂದು ಗಂಟೆ ಮುನ್ನವೇ ಬಂದು ಸಾಲಿನಲ್ಲಿ ನಿಂತಿದ್ದೆವು. ಹೀಗಿದ್ದೂ ಒಳಗೆ ಬಿಡದೆ ಸತಾಯಿಸಲಾಗುತ್ತಿದೆ’ ಎಂದು ಪ್ರವಾಸಿಗರು ಬೇಸರ ವ್ಯಕ್ತಪಡಿಸಿದರು.</p>.<p>‘ಟಿಕೆಟ್ ಪಡೆದಿರುವವರಿಗೇ ಜಾಗವಿಲ್ಲ ಎಂತಾದರೆ ಆ ಆಸನಗಳು ಏನಾದವು? ಜಿಲ್ಲಾಡಳಿತವು ಹೆಚ್ಚುವರಿಯಾಗಿ ಟಿಕೆಟ್, ಪಾಸ್ ಹಂಚಿದೆಯೇ’ ಎಂದು ಅಖಿಲ ಭಾರತ ಗ್ರಾಹಕರ ಕಲ್ಯಾಣ ಪರಿಷತ್ ಕಾರ್ಯಾಧ್ಯಕ್ಷ ಎಂ.ಪಿ. ವರ್ಷ ಎಂಬುವರು ಅಸಮಾಧಾನ ವ್ಯಕ್ತಪಡಿಸಿದರು.</p>.<p>ಮಧ್ಯಾಹ್ನ ಮೂರು ಗಂಟೆಯವರೆಗೂ ಪ್ರವೇಶ ದ್ವಾರದಲ್ಲಿಯೇ ಟಿಕೆಟ್ ಹಿಡಿದು ಆಸೆಗಣ್ಣಿನಿಂದ ಕಾದವರು ನಿರಾಸೆಯಿಂದ ಮರಳಿದರು. ಇನ್ನೂ ಕೆಲವರು ಜಂಬೂಸವಾರಿ ಅರಮನೆಯಿಂದ ಹೊರಹೋಗುವವರೆಗೂ ಅಲ್ಲಿಯೇ ಕಾದಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ಅರಮನೆ ಆವರಣದಲ್ಲಿ ಜಂಬೂಸವಾರಿ ವೀಕ್ಷಣೆಗೆ ಗೋಲ್ಡ್ ಕಾರ್ಡ್, ವಿಐಪಿ ಟಿಕೆಟ್ ಇದ್ದರೂ ಒಳಗೆ ಪ್ರವೇಶ ಸಿಗದೇ ನೂರಾರು ಜನ ಪರದಾಡಿದರು.</p>.<p>ಮಧ್ಯಾಹ್ನ 12ರ ವೇಳೆಗೆ ಅರಮನೆ ಆವರಣ ಭರ್ತಿಯಾಗಿದ್ದರಿಂದ ನಂತರ ಬಂದವರಿಗೆ ಪೊಲೀಸರು ಪ್ರವೇಶ ನಿರಾಕರಿಸಿದರು. ಪಾಸ್ ಹಿಡಿದು ಸಾಲಿನಲ್ಲಿ ನಿಂತರೂ ಪ್ರವೇಶ ಸಿಗದ ಕಾರಣ ಬೇಸತ್ತ ಪ್ರವಾಸಿಗರು– ಸ್ಥಳೀಯರು ಪೊಲೀಸರೊಂದಿಗೆ ವಾಗ್ದಾದ ನಡೆಸಿದರು. ಗಂಟೆಗಟ್ಟಲೆ ಕಾದು ನಿಂತರೂ ಪ್ರಯೋಜನವಾಗಲಿಲ್ಲ.</p>.<p>‘₹6,500 ಕೊಟ್ಟು ಗೋಲ್ಡ್ ಕಾರ್ಡ್ ಪಡೆದಿದ್ದೇವೆ. ದಸರಾ ಮೆರವಣಿಗೆ ಆರಂಭದ ಒಂದು ಗಂಟೆ ಮುನ್ನವೇ ಬಂದು ಸಾಲಿನಲ್ಲಿ ನಿಂತಿದ್ದೆವು. ಹೀಗಿದ್ದೂ ಒಳಗೆ ಬಿಡದೆ ಸತಾಯಿಸಲಾಗುತ್ತಿದೆ’ ಎಂದು ಪ್ರವಾಸಿಗರು ಬೇಸರ ವ್ಯಕ್ತಪಡಿಸಿದರು.</p>.<p>‘ಟಿಕೆಟ್ ಪಡೆದಿರುವವರಿಗೇ ಜಾಗವಿಲ್ಲ ಎಂತಾದರೆ ಆ ಆಸನಗಳು ಏನಾದವು? ಜಿಲ್ಲಾಡಳಿತವು ಹೆಚ್ಚುವರಿಯಾಗಿ ಟಿಕೆಟ್, ಪಾಸ್ ಹಂಚಿದೆಯೇ’ ಎಂದು ಅಖಿಲ ಭಾರತ ಗ್ರಾಹಕರ ಕಲ್ಯಾಣ ಪರಿಷತ್ ಕಾರ್ಯಾಧ್ಯಕ್ಷ ಎಂ.ಪಿ. ವರ್ಷ ಎಂಬುವರು ಅಸಮಾಧಾನ ವ್ಯಕ್ತಪಡಿಸಿದರು.</p>.<p>ಮಧ್ಯಾಹ್ನ ಮೂರು ಗಂಟೆಯವರೆಗೂ ಪ್ರವೇಶ ದ್ವಾರದಲ್ಲಿಯೇ ಟಿಕೆಟ್ ಹಿಡಿದು ಆಸೆಗಣ್ಣಿನಿಂದ ಕಾದವರು ನಿರಾಸೆಯಿಂದ ಮರಳಿದರು. ಇನ್ನೂ ಕೆಲವರು ಜಂಬೂಸವಾರಿ ಅರಮನೆಯಿಂದ ಹೊರಹೋಗುವವರೆಗೂ ಅಲ್ಲಿಯೇ ಕಾದಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>