ಶನಿವಾರ, 28 ಫೆಬ್ರುವರಿ 2026
×
ADVERTISEMENT

Dasara 2023 | ನೆಟ್‌ವರ್ಕ್‌ ಇಲ್ಲದೆಡೆ ಹುಟ್ಟುವುದೇ ಕಾವ್ಯ: ಜಯಂತ ಕಾಯ್ಕಿಣಿ

Published : 17 ಅಕ್ಟೋಬರ್ 2023, 14:00 IST
Last Updated : 17 ಅಕ್ಟೋಬರ್ 2023, 14:00 IST
ADVERTISEMENT
ಫಾಲೋ ಮಾಡಿ
Comments
‘ಸಂವಿಧಾನ ಸಮರ್ಥಿಸಿ’
‘ಕವಿ ಲೇಖಕರು ಸಂವಿಧಾನವನ್ನು ಸಮರ್ಥಿಸುವ ಕೆಲಸ ಮಾಡಬೇಕು. ಏಕೆಂದರೆ ಅಭಿವ್ಯಕ್ತಿಸುವ ಹಕ್ಕನ್ನು ಸ್ವಾತಂತ್ರ್ಯವನ್ನು ನೀಡಿದೆ’ ಎಂದು ಸಾಹಿತಿ ಕುಂ.ವೀರಭದ್ರಪ್ಪ ಹೇಳಿದರು. ‘ಅಂದಿನ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ ಕೊರಳ ಪಟ್ಟಿ ಹಿಡಿದ ಪಂಜಾಬಿನ ರೈತ ಮಹಿಳೆಯೊಬ್ಬರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು ನಮಗೇನು ಮಾಡಿದ್ದೀಯೆಂದು ಕೇಳಿದ್ದರು. ಆಗ ನೆಹರೂ ‘ಪ್ರಧಾನಿಯ ಕೊರಳಪಟ್ಟಿ ಹಿಡಿದು ಪ್ರಶ್ನಿಸುವ ಧೈರ್ಯವನ್ನು ದೇಶದ ಸಂವಿಧಾನ ನೀಡಿದೆ ಎಂದು ಉತ್ತರಿಸಿದ್ದರು’ ಎಂದು ಸ್ಮರಿಸಿದರು. ‘ಸಂವಿಧಾನವು ಟೀ ಮಾರುವ ಹುಡುಗನನ್ನು ಪ್ರಧಾನಿ ಮಾಡಿತು. ಕುರಿಕಾಯುವ ಹುಡುಗನನ್ನು ಮುಖ್ಯಮಂತ್ರಿ ಮಾಡಿತು. ಟೀ ಮಾರಿದ ಹುಡುಗನ ಗಡ್ಡ ಬೆಳ್ಳಗಾದಾಗ ದೇಶದ ಕೆಲವೇ ಕೆಲವು ಶ್ರೀಮಂತರನ್ನು ಪ್ರಪಂಚದ ಅತಿದೊಡ್ಡ ಶ್ರೀಮಂತರನ್ನಾಗಿಸಿದರು. ನೊಂದವರಿಗೆ ಮಾತ್ರ ನೋವು ಗೊತ್ತಿರುತ್ತದೆ. ಹೀಗಾಗಿಯೇ ಮುಖ್ಯಮಂತ್ರಿ ಅನ್ನಭಾಗ್ಯ ಶಕ್ತಿ ಯೋಜನೆ ತಂದಿದ್ದಾರೆ. ದಸರೆಗೆ ಸಾವಿರಾರು ಮಹಿಳೆಯರು ಬಂದಿದ್ದಾರೆ’ ಎಂದರು.
ಮುದ ನೀಡಿದ ಹಾಸ್ಯ ಕವಿಗೋಷ್ಠಿ
ಹಾಸ್ಯಗೋಷ್ಠಿಯು ವರ್ತಮಾನದ ತಲ್ಲಣಗಳಿಗೆ ನಗೆಯ ಔಷಧವನ್ನು ನೀಡಿತು. ಕಾವ್ಯಾಸಕ್ತರಿಂದ ಚಪ್ಪಾಳೆ ದೊರೆಯಿತು. ಅಸಾದುಲ್ಲಾ ಬೇಗ್‌ ಎಲ್‌.ಎಸ್‌‍.ಶಾಸ್ತ್ರಿ ಇಂದಿರಾ ಎಚ್‌.ಪಾಟೀಲ ಹೊ.ಮ.ಪಂಡಿತಾರಾಧ್ಯ ಜೆ.ನರಸಿಂಹಮೂರ್ತಿ ಮ.ಗು.ಬಸವಣ್ಣ ನಾ.ನಾಗಚಂದ್ರ ಮಹಿಪಾಲರೆಡ್ಡಿ ಮುನ್ನೂರ್‌ ಪ್ರೇಮಾ ಮಂಜುನಾಥ್‌ ಗೀತಾ ಮಂಜು ಪ್ರವೀಣ್‌ಕುಮಾರ್‌ ಎಸ್‌. ಪ್ರಕಾಶ್‌ ನಾಡಿಗ ಖುಷ್ವಂತ್‌ ಕೋಳಿಬೈಲು ಚುಟುಕು ವಾಚಿಸಿದರು. ಕವಿ ಕೆ.ಸಿ.ಶಿವಪ್ಪ ಮಾತನಾಡಿ ‘90 ನಿಮಿಷ ತಡವಾಗಿ ಕವಿಗೋಷ್ಠಿ ಆರಂಭವಾಗಿದೆ. ಕವಿತಾ ವಾಚನಕ್ಕೆ ಸಮಯವನ್ನೂ ಕೊಡಲಾಗುತ್ತಿಲ್ಲ. ಇದು ದೌರ್ಭಾಗ್ಯ’ ಎಂದು ಬೇಸರ ವ್ಯಕ್ತಪಡಿಸಿದರು. ಲೇಖಕ ಬಸವರಾಜ ಸಾದರ ಅಧ್ಯಕ್ಷತೆ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT