ಮುದ ನೀಡಿದ ಹಾಸ್ಯ ಕವಿಗೋಷ್ಠಿ
ಹಾಸ್ಯಗೋಷ್ಠಿಯು ವರ್ತಮಾನದ ತಲ್ಲಣಗಳಿಗೆ ನಗೆಯ ಔಷಧವನ್ನು ನೀಡಿತು. ಕಾವ್ಯಾಸಕ್ತರಿಂದ ಚಪ್ಪಾಳೆ ದೊರೆಯಿತು. ಅಸಾದುಲ್ಲಾ ಬೇಗ್ ಎಲ್.ಎಸ್.ಶಾಸ್ತ್ರಿ ಇಂದಿರಾ ಎಚ್.ಪಾಟೀಲ ಹೊ.ಮ.ಪಂಡಿತಾರಾಧ್ಯ ಜೆ.ನರಸಿಂಹಮೂರ್ತಿ ಮ.ಗು.ಬಸವಣ್ಣ ನಾ.ನಾಗಚಂದ್ರ ಮಹಿಪಾಲರೆಡ್ಡಿ ಮುನ್ನೂರ್ ಪ್ರೇಮಾ ಮಂಜುನಾಥ್ ಗೀತಾ ಮಂಜು ಪ್ರವೀಣ್ಕುಮಾರ್ ಎಸ್. ಪ್ರಕಾಶ್ ನಾಡಿಗ ಖುಷ್ವಂತ್ ಕೋಳಿಬೈಲು ಚುಟುಕು ವಾಚಿಸಿದರು. ಕವಿ ಕೆ.ಸಿ.ಶಿವಪ್ಪ ಮಾತನಾಡಿ ‘90 ನಿಮಿಷ ತಡವಾಗಿ ಕವಿಗೋಷ್ಠಿ ಆರಂಭವಾಗಿದೆ. ಕವಿತಾ ವಾಚನಕ್ಕೆ ಸಮಯವನ್ನೂ ಕೊಡಲಾಗುತ್ತಿಲ್ಲ. ಇದು ದೌರ್ಭಾಗ್ಯ’ ಎಂದು ಬೇಸರ ವ್ಯಕ್ತಪಡಿಸಿದರು. ಲೇಖಕ ಬಸವರಾಜ ಸಾದರ ಅಧ್ಯಕ್ಷತೆ ವಹಿಸಿದ್ದರು.