‘ವಿಶೇಷ ಮಕ್ಕಳ ತರಬೇತಿ ನೀಡುವ ಉಪಕ್ರಮ ಇದಾಗಿದೆ. ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಉದ್ಘಾಟನೆ ನೆರವೇರಿಸುವರು. ಒಮನ್ನ ಟೊವೆಲ್ ಎಂಜಿನಿಯರಿಂಗ್ ಸಮೂಹದ ಸಿಇಒ ಹಾಗೂ ಎಂಡಿ ಬಾಲಾಜಿ ಶ್ರೀನಿವಾಸನ್, ಎಕ್ಸೆಲ್ ಸಾಫ್ಟ್ ಟೆಕ್ನಾಲಜೀಸ್ ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕ ಡಿ.ಸುಧನ್ವ ಹಾಗೂ ರೋಟರಿ ಮಿಡ್ಟೌನ್ ಮಾನಸ ಕುಟೀರದ ಅಧ್ಯಕ್ಷ ಎಸ್.ರಾಘವೇಂದ್ರ ಪಾಲ್ಗೊಳ್ಳುವರು’ ಎಂದು ಕರುಣಾಮಯಿ ಫೌಂಡೇಶನ್ ಅಧ್ಯಕ್ಷ ಜಿ.ಸಿ.ಚಿರಣ್ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.