<p><strong>ಹುಣಸೂರು</strong>: ಒಂದು ಗ್ರಾಮ ನರೇಗಾ ಯೋಜನೆಯನ್ನು ಸದ್ಬಳಕೆಯಾಗಿಸಿ ಸರ್ವತೋಮುಖ ಅಭಿವೃದ್ಧಿ ಮತ್ತು ಶೈಕ್ಷಣಿಕ ಪ್ರಗತಿ ಸಾಧ್ಯ ಎನ್ನಲು ತಾಲ್ಲೂಕಿನ ತಟ್ಟೆಕೆರೆ ಗ್ರಾಮ ಪಂಚಾಯಿತಿ ಉತ್ತಮ ಉದಾಹರಣೆಯಾಗಿದೆ.</p>.<p>ಈ ಸಾಲಿನ ‘ಗಾಂಧಿ ಗ್ರಾಮ’ ಪುರಸ್ಕಾರ ಪ್ರಶಸ್ತಿ ತನ್ನದಾಗಿಸಿಕೊಂಡ ತಟ್ಟೆಕೆರೆ ಗ್ರಾಮದಲ್ಲಿ ಒಂದು ಸುತ್ತು ಹಾಕಿದರೆ ಸಾಕು ಹಲವು ಅಭಿವೃದ್ಧಿ ಕಾಮಗಾರಿಗಳು ನೋಡಬಹುದಾಗಿದೆ.</p>.<p>ಗ್ರಾಮದ ಶಾಲೆಗೆ ಹೆಚ್ಚಿನ ಅನುದಾನ ಬಳಸಿಕೊಂಡ ಪಂಚಾಯಿತಿ ಶಿಕ್ಷಣ ಮುಖೇನ ಗ್ರಾಮ ಪ್ರಗತಿ ಎನ್ನುವ ಉದ್ದೇಶದೊಂದಿಗೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಿದ್ದು, ₹ 20 ಲಕ್ಷ ಅನುದಾನ ಬಳಸಿಕೊಂಡು 400 ಮೀಟರ್ ಓವಲ್ ಕ್ರೀಡಾ ಮೈದಾನ ನಿರ್ಮಿಸಿದೆ. ಈ ಮೈದಾನಕ್ಕೆ ಹೊಂದಿಕೊಂಡಂತೆ ಕೊಕ್ಕೊ, ಕಬಡ್ಡಿ, ಎತ್ತರ ಜಿಗಿತ, ಉದ್ದಜಿಗಿತ, ವಾಲಿಬಾಲ್ ಆಟಕ್ಕೆ ಪ್ರತ್ಯೇಕ ಕೋಟ್ ನಿರ್ಮಿಸಲಾಗಿದೆ.</p>.<p>‘₹ 13.5 ಲಕ್ಷ ಅನುದಾನವನ್ನು ಶಾಲೆಯ ಆಟದ ಮೈದಾನ ಸಿದ್ಧಗೊಳಿಸುವ ಉದ್ದೇಶಕ್ಕೆ ಕಾದಿಟ್ಟ ಪಂಚಾಯಿತಿ, ಅಚ್ಚುಕಟ್ಟಾಗಿ ನಿರ್ಮಿಸಿ ಗ್ರಾಮ ಮಟ್ಟದ ಶಾಲೆಗೆ ಹುಣಸೂರು ತಾಲ್ಲೂಕಿನಲ್ಲೇ ಪ್ರಥಮ ಬಾರಿಗೆ ಉತ್ತಮ ಆಟದ ಮೈದಾನ ಹೊಂದುವ ಅವಕಾಶ ಕಲ್ಪಿಸಿದ್ದೇವೆ. ಶಾಲೆಯಲ್ಲಿ ಭೋಜನಾಲಯ ನಿರ್ಮಾಣಕ್ಕೆ ₹ 13 ಲಕ್ಷ ಕಾದಿಟ್ಟಿದ್ದು, 2024–25ನೇ ಸಾಲಿನಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುತ್ತಿದ್ದೇವೆ. ಅಂಗವಿಕಲ ಮಕ್ಕಳಿಗೆ ಅನುಕೂಲವಾಗುವ ರೀತಿ ₹ 5 ಲಕ್ಷ ವೆಚ್ಚದಲ್ಲಿ ಶೌಚಾಲಯ ನಿರ್ಮಿಸಲಾಗಿದೆ. ಹೆಚ್ಚುವರಿ ಶೌಚಾಲಯ ನಿರ್ಮಾಣ ಕೈಗೆತ್ತಿಕೊಳ್ಳಲಿದ್ದೇವೆ. ಅಡುಗೆ ತ್ಯಾಜ್ಯ ನೀರು ನಿರ್ವಹಣೆ ಮತ್ತು ತ್ಯಾಜ್ಯದಿಂದ ಕಾಂಪೋಸ್ಟ್ ಗೊಬ್ಬರ ತಯಾರಿಸುವ ಘಟಕ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲೋಕೇಶ್ ಮಾಹಿತಿ ನೀಡಿದರು.</p>.<p><strong>ಪೋಷಕರ ಸಹಕಾರ ನಿರೀಕ್ಷೆ:</strong> ‘ಪೋಷಕರು ಖಾಸಗಿ ಶಾಲೆ ನೋಡಿ ಆಕರ್ಷಿತರಾಗಿದ್ದರಿಂದ ಗ್ರಾಮದ ಶಾಲೆ ಮುಚ್ಚುವ ಹಂತಕ್ಕೆ ತಲುಪಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿ, ಸರ್ಕಾರಿ ಶಾಲೆ ಉಳಿಸಿ ಬೆಳೆಸುವ ಸಂಕಲ್ಪ ತೊಟ್ಟು ನರೇಗಾ ಯೋಜನೆ ಬಳಸಿ ಸರ್ವತೋಮುಖ ಅಭಿವೃದ್ಧಿ ಕಾಮಗಾರಿ ಕೈಗೊಂಡು 6 ತಿಂಗಳಲ್ಲಿ ಪೂರ್ಣಗೊಳಿಸಿದ್ದೇವೆ. ಈ ಕಾಮಗಾರಿಗೆ 6 ಸಾವಿರ ಮಾನವ ದಿನಗಳನ್ನು ಬಳಸಿ ಉದ್ಯೋಗ ಸೃಷ್ಟಿಸುವದೊಂದಿಗೆ ಸರ್ಕಾರಿ ಶಾಲೆ ಸರ್ವ ರೀತಿಯಲ್ಲೂ ಸಜ್ಜಾಗಿದ್ದು ದಾಖಲಾತಿ ಹೆಚ್ಚಾಗಲು ಪೋಷಕರ ಸಹಕಾರ ನಿರೀಕ್ಷೆಯಲ್ಲಿದ್ದೇವೆ’ ಎನ್ನುತ್ತಾರೆ ಪಂಚಾಯಿತಿ ಅಧ್ಯಕ್ಷೆ ಪಾರ್ವತಿ.</p>.<div><blockquote>ನರೇಗಾ ಯೋಜನೆ ಬಳಸಿ ಸರ್ಕಾರಿ ಶಾಲೆ ಹೀಗೂ ಅಭಿವೃದ್ಧಿಪಡಿಸಲು ಸಾಧ್ಯ ಎಂಬ ಸಂದೇಶವನ್ನು ತಟ್ಟೆಕೆರೆ ಗ್ರಾಮ ಪಂಚಾಯಿತಿ ಕಲಿಸಿದ್ದು ದಾಖಲಾತಿಗೆ ಪೋಷಕರು ಸಾಥ್ ನೀಡಿ ಮಾದರಿಯಾಗಿರಿ. </blockquote><span class="attribution">ರೇವಣ್ಣ, ಬಿಇಒ, ಹುಣಸೂರು</span></div>.<div><blockquote>ಸರ್ಕಾರಿ ಶಾಲೆ ಉಳಿವಿಗೆ ತಟ್ಟೆಕೆರೆ ಪಂಚಾಯಿತಿ ಕೈಗೊಂಡ ಅಭಿವೃದ್ಧಿ ಕಾರ್ಯ ಶ್ಲಾಘನೀಯಶಾಲೆ ಬೆಳವಣಿಗೆಗೆ ಗ್ರಾಮಸ್ಥರ ಸ್ಪಂದನೆ ಬೇಕಾಗಿದೆ. </blockquote><span class="attribution">ಬಿ.ಕೆ.ಮನು, ತಾ.ಪಂ. ಇಒ</span></div>.<div><blockquote>ಸರ್ಕಾರಿ ಶಾಲೆ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಕಂಡಿದ್ದು ಮುಂದಿನ ಸಾಲಿನಲ್ಲಿ ಉತ್ತಮ ದಾಖಲೆ ನಿರೀಕ್ಷೆಯಲ್ಲಿದ್ದೇವೆ. ದಾಖಲಾತಿ ಪರಿಗಣಿಸಿ ಇಲಾಖೆ ಶಿಕ್ಷಕರನ್ನು ನಿಯೋಜಿಸಬೇಕು. </blockquote><span class="attribution">ಜಯಶಂಕರ್, ಮುಖ್ಯಶಿಕ್ಷಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸೂರು</strong>: ಒಂದು ಗ್ರಾಮ ನರೇಗಾ ಯೋಜನೆಯನ್ನು ಸದ್ಬಳಕೆಯಾಗಿಸಿ ಸರ್ವತೋಮುಖ ಅಭಿವೃದ್ಧಿ ಮತ್ತು ಶೈಕ್ಷಣಿಕ ಪ್ರಗತಿ ಸಾಧ್ಯ ಎನ್ನಲು ತಾಲ್ಲೂಕಿನ ತಟ್ಟೆಕೆರೆ ಗ್ರಾಮ ಪಂಚಾಯಿತಿ ಉತ್ತಮ ಉದಾಹರಣೆಯಾಗಿದೆ.</p>.<p>ಈ ಸಾಲಿನ ‘ಗಾಂಧಿ ಗ್ರಾಮ’ ಪುರಸ್ಕಾರ ಪ್ರಶಸ್ತಿ ತನ್ನದಾಗಿಸಿಕೊಂಡ ತಟ್ಟೆಕೆರೆ ಗ್ರಾಮದಲ್ಲಿ ಒಂದು ಸುತ್ತು ಹಾಕಿದರೆ ಸಾಕು ಹಲವು ಅಭಿವೃದ್ಧಿ ಕಾಮಗಾರಿಗಳು ನೋಡಬಹುದಾಗಿದೆ.</p>.<p>ಗ್ರಾಮದ ಶಾಲೆಗೆ ಹೆಚ್ಚಿನ ಅನುದಾನ ಬಳಸಿಕೊಂಡ ಪಂಚಾಯಿತಿ ಶಿಕ್ಷಣ ಮುಖೇನ ಗ್ರಾಮ ಪ್ರಗತಿ ಎನ್ನುವ ಉದ್ದೇಶದೊಂದಿಗೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಿದ್ದು, ₹ 20 ಲಕ್ಷ ಅನುದಾನ ಬಳಸಿಕೊಂಡು 400 ಮೀಟರ್ ಓವಲ್ ಕ್ರೀಡಾ ಮೈದಾನ ನಿರ್ಮಿಸಿದೆ. ಈ ಮೈದಾನಕ್ಕೆ ಹೊಂದಿಕೊಂಡಂತೆ ಕೊಕ್ಕೊ, ಕಬಡ್ಡಿ, ಎತ್ತರ ಜಿಗಿತ, ಉದ್ದಜಿಗಿತ, ವಾಲಿಬಾಲ್ ಆಟಕ್ಕೆ ಪ್ರತ್ಯೇಕ ಕೋಟ್ ನಿರ್ಮಿಸಲಾಗಿದೆ.</p>.<p>‘₹ 13.5 ಲಕ್ಷ ಅನುದಾನವನ್ನು ಶಾಲೆಯ ಆಟದ ಮೈದಾನ ಸಿದ್ಧಗೊಳಿಸುವ ಉದ್ದೇಶಕ್ಕೆ ಕಾದಿಟ್ಟ ಪಂಚಾಯಿತಿ, ಅಚ್ಚುಕಟ್ಟಾಗಿ ನಿರ್ಮಿಸಿ ಗ್ರಾಮ ಮಟ್ಟದ ಶಾಲೆಗೆ ಹುಣಸೂರು ತಾಲ್ಲೂಕಿನಲ್ಲೇ ಪ್ರಥಮ ಬಾರಿಗೆ ಉತ್ತಮ ಆಟದ ಮೈದಾನ ಹೊಂದುವ ಅವಕಾಶ ಕಲ್ಪಿಸಿದ್ದೇವೆ. ಶಾಲೆಯಲ್ಲಿ ಭೋಜನಾಲಯ ನಿರ್ಮಾಣಕ್ಕೆ ₹ 13 ಲಕ್ಷ ಕಾದಿಟ್ಟಿದ್ದು, 2024–25ನೇ ಸಾಲಿನಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುತ್ತಿದ್ದೇವೆ. ಅಂಗವಿಕಲ ಮಕ್ಕಳಿಗೆ ಅನುಕೂಲವಾಗುವ ರೀತಿ ₹ 5 ಲಕ್ಷ ವೆಚ್ಚದಲ್ಲಿ ಶೌಚಾಲಯ ನಿರ್ಮಿಸಲಾಗಿದೆ. ಹೆಚ್ಚುವರಿ ಶೌಚಾಲಯ ನಿರ್ಮಾಣ ಕೈಗೆತ್ತಿಕೊಳ್ಳಲಿದ್ದೇವೆ. ಅಡುಗೆ ತ್ಯಾಜ್ಯ ನೀರು ನಿರ್ವಹಣೆ ಮತ್ತು ತ್ಯಾಜ್ಯದಿಂದ ಕಾಂಪೋಸ್ಟ್ ಗೊಬ್ಬರ ತಯಾರಿಸುವ ಘಟಕ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲೋಕೇಶ್ ಮಾಹಿತಿ ನೀಡಿದರು.</p>.<p><strong>ಪೋಷಕರ ಸಹಕಾರ ನಿರೀಕ್ಷೆ:</strong> ‘ಪೋಷಕರು ಖಾಸಗಿ ಶಾಲೆ ನೋಡಿ ಆಕರ್ಷಿತರಾಗಿದ್ದರಿಂದ ಗ್ರಾಮದ ಶಾಲೆ ಮುಚ್ಚುವ ಹಂತಕ್ಕೆ ತಲುಪಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿ, ಸರ್ಕಾರಿ ಶಾಲೆ ಉಳಿಸಿ ಬೆಳೆಸುವ ಸಂಕಲ್ಪ ತೊಟ್ಟು ನರೇಗಾ ಯೋಜನೆ ಬಳಸಿ ಸರ್ವತೋಮುಖ ಅಭಿವೃದ್ಧಿ ಕಾಮಗಾರಿ ಕೈಗೊಂಡು 6 ತಿಂಗಳಲ್ಲಿ ಪೂರ್ಣಗೊಳಿಸಿದ್ದೇವೆ. ಈ ಕಾಮಗಾರಿಗೆ 6 ಸಾವಿರ ಮಾನವ ದಿನಗಳನ್ನು ಬಳಸಿ ಉದ್ಯೋಗ ಸೃಷ್ಟಿಸುವದೊಂದಿಗೆ ಸರ್ಕಾರಿ ಶಾಲೆ ಸರ್ವ ರೀತಿಯಲ್ಲೂ ಸಜ್ಜಾಗಿದ್ದು ದಾಖಲಾತಿ ಹೆಚ್ಚಾಗಲು ಪೋಷಕರ ಸಹಕಾರ ನಿರೀಕ್ಷೆಯಲ್ಲಿದ್ದೇವೆ’ ಎನ್ನುತ್ತಾರೆ ಪಂಚಾಯಿತಿ ಅಧ್ಯಕ್ಷೆ ಪಾರ್ವತಿ.</p>.<div><blockquote>ನರೇಗಾ ಯೋಜನೆ ಬಳಸಿ ಸರ್ಕಾರಿ ಶಾಲೆ ಹೀಗೂ ಅಭಿವೃದ್ಧಿಪಡಿಸಲು ಸಾಧ್ಯ ಎಂಬ ಸಂದೇಶವನ್ನು ತಟ್ಟೆಕೆರೆ ಗ್ರಾಮ ಪಂಚಾಯಿತಿ ಕಲಿಸಿದ್ದು ದಾಖಲಾತಿಗೆ ಪೋಷಕರು ಸಾಥ್ ನೀಡಿ ಮಾದರಿಯಾಗಿರಿ. </blockquote><span class="attribution">ರೇವಣ್ಣ, ಬಿಇಒ, ಹುಣಸೂರು</span></div>.<div><blockquote>ಸರ್ಕಾರಿ ಶಾಲೆ ಉಳಿವಿಗೆ ತಟ್ಟೆಕೆರೆ ಪಂಚಾಯಿತಿ ಕೈಗೊಂಡ ಅಭಿವೃದ್ಧಿ ಕಾರ್ಯ ಶ್ಲಾಘನೀಯಶಾಲೆ ಬೆಳವಣಿಗೆಗೆ ಗ್ರಾಮಸ್ಥರ ಸ್ಪಂದನೆ ಬೇಕಾಗಿದೆ. </blockquote><span class="attribution">ಬಿ.ಕೆ.ಮನು, ತಾ.ಪಂ. ಇಒ</span></div>.<div><blockquote>ಸರ್ಕಾರಿ ಶಾಲೆ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಕಂಡಿದ್ದು ಮುಂದಿನ ಸಾಲಿನಲ್ಲಿ ಉತ್ತಮ ದಾಖಲೆ ನಿರೀಕ್ಷೆಯಲ್ಲಿದ್ದೇವೆ. ದಾಖಲಾತಿ ಪರಿಗಣಿಸಿ ಇಲಾಖೆ ಶಿಕ್ಷಕರನ್ನು ನಿಯೋಜಿಸಬೇಕು. </blockquote><span class="attribution">ಜಯಶಂಕರ್, ಮುಖ್ಯಶಿಕ್ಷಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>