ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಮೈಸೂರಿನಲ್ಲಿ ಕಲಿತ ವೈದ್ಯರಿಂದ ಸೇನೆಯಲ್ಲಿ ಸೇವೆ

ಎಂಎಂಸಿಆರ್‌ಐನ 150ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿ
Published : 1 ಜುಲೈ 2024, 7:34 IST
Last Updated : 1 ಜುಲೈ 2024, 7:34 IST
ಫಾಲೋ ಮಾಡಿ
Comments
ಮೈಸೂರು ವೈದ್ಯಕೀಯ ಮತ್ತು ಸಂಶೋಧನಾ ಕಾಲೇಜು
ಮೈಸೂರು ವೈದ್ಯಕೀಯ ಮತ್ತು ಸಂಶೋಧನಾ ಕಾಲೇಜು
ಶತಮಾನೋತ್ಸವದ ಕಾರ್ಯಕ್ರಮದಲ್ಲಿ 60 ನಿವೃತ್ತ ಯೋಧರು ಭಾಗಿ ಬಾಂಗ್ಲಾದೇಶ, ಪಾಕ್‌ ವಿರುದ್ಧದ ಯುದ್ಧಗಳಲ್ಲಿ ಭಾಗಿ 1924ರಲ್ಲಿ ಆರಂಭವಾದ ಕಾಲೇಜು
ಎಂಬಿಬಿಎಸ್‌ ಮಾಡಿ ದೇಶ ಸೇವೆಗೆ ತೆರಳಿರುವುದು ಕಾಲೇಜಿಗೆ ಹೆಮ್ಮೆ ತರುವ ವಿಚಾರ. ಶತಮಾನೋತ್ಸವ ಸಮಯದಲ್ಲಿ ಅವರನ್ನು ಕರೆಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದೆ
ಡಾ.ಕೆ.ಆರ್‌.ದಾಕ್ಷಾಯಿಣಿ ನಿರ್ದೇಶಕಿ ಎಂಎಂಸಿಆರ್‌ಐ
ಮೊದಲ ಮಹಿಳಾ ಪ್ಯಾರಾಟ್ರೂಪರ್ ಫರಿದಾ ರೆಹಾನಾ
ಮೈಸೂರು ವೈದ್ಯಕೀಯ ಕಾಲೇಜಿನ 1965ನೇ ಬ್ಯಾಚ್‌ನಲ್ಲಿ ವ್ಯಾಸಂಗ ಮಾಡಿದ ಫರಿದಾ ರೆಹನಾ ಸೇನೆಯ ಮೊದಲ ಮಹಿಳಾ ಪ್ಯಾರಾಟ್ರೂಪರ್‌ ಆಗಿದ್ದರು. ಅವರು 1971ರಲ್ಲಿ ಸೇನೆಗೆ ಪ್ರಥಮ ಮಹಿಳಾ ಶಸ್ತ್ರ ಚಿಕಿತ್ಸಕಿಯಾಗಿ ಸೇರ್ಪಡೆಗೊಂಡಿದ್ದರು. ಮುಖ್ಯವಾಗಿ ಬಾಂಗ್ಲಾದೇಶದ ವಿರುದ್ಧದ ಯುದ್ಧದಲ್ಲಿ ಭಾಗವಹಿಸಿದ್ದಾರೆ. ಸೇನೆಯಲ್ಲಿ ಮಹಿಳಾ ಪ್ಯಾರಾಟ್ರೂಪರ್‌ಳು ಹೋಗದೇ ಇದ್ದ ಕಾಲದಲ್ಲಿ ತರಬೇತಿಯಲ್ಲಿ ಅಸಾಧಾರಣ ಸಾಹಸ ತೋರಿ ಆಯ್ಕೆಯಾಗಿದ್ದರು. ಸಾವಿರಕ್ಕಿಂತಲೂ ಅಧಿಕ ಬಾರಿ ಪ್ಯಾರಾಟ್ರೂಪ್‌ ಮೂಲಕ ಶತ್ರುಗಳ ನೆಲಕ್ಕೆ ತೆರಳಿ ಅಲ್ಲಿನ ಮಾಹಿತಿ ಪಡೆದಿದ್ದರು. ನಂತರ ಶಾಂತಾ ಎಂಬುವವರೂ ಇದೇ ಕಾರ್ಯಕ್ಕೆ ತೆರಳಿದ್ದರು.
ಕೊಡಗಿನ ವೀರನ ಕಾರ್ಗಿಲ್‌ ನೆನಪು ಲೆ.ಜನರಲ್‌ ಮಹಾವೀರ ಪ್ರಸಾದ್‌
1978–79ರಲ್ಲಿ ಕಾರ್ಗಿಲ್‌ನಲ್ಲಿ ಫೀಲ್ಡ್‌ ಆಂಬುಲೆನ್ಸ್ ಹಾಗೂ ಎಂಐ ಕೊಠಡಿಯಲ್ಲಿ ಕೆಲಸ ಮಾಡಿದ್ದರು. ಅವರು ಕಾರ್ಗಿಲ್‌ನ ತೆರಾಜ್‌ನ ಶೀತಲ ಪ್ರದೇಶದಲ್ಲಿದ್ದಾಗ ಹಿಮಪಾತವಾಗಿತ್ತು. ಅದರಲ್ಲಿ ಇವರು ಮುನ್ನುಗ್ಗಿ 10 ಜನ ಸಿಕ್ಕಿಹಾಕಿಕೊಂಡಿದ್ದರು. ಹವಾಮಾನ ವೈಪರೀತ್ಯದಿಂದಾಗಿ ಗಾಯಾಳುಗಳನ್ನು ಕರೆದೊಯ್ಯಲು ಚಾಪರ್‌ (ಸೇನಾ ಹೆಲಿಕಾಪ್ಟರ್‌) ಬರಲೂ ಸಾಧ್ಯವಾಗಿರಲಿಲ್ಲ. ಈ ಸಂಕಷ್ಟದ ಸಮಯದಲ್ಲೂ ಎರಡು ದಿನ ಅಲ್ಲಿಯೇ ಚಿಕಿತ್ಸೆ ನೀಡಿ ವಾತಾವರಣ ಸರಿಯಾದ ಬಳಿಕ ಬೇರೆಡೆ ಸ್ಥಳಾಂತರ ಮಾಡಿ 7 ಜನರನ್ನು ಬದುಕಿಸಿದ್ದರು. ಇದಕ್ಕಾಗಿ ಅವರಿಗೆ ಸೇನೆಯು ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿತ್ತು.
ಸೇನೆಯಲ್ಲಿ ಸೇವೆ ಸಲ್ಲಿಸಿದ ದಂಪತಿ
ಬಿ.ಎನ್‌.ರಾಜೀವ್‌ ಹಾಗೂ ಕಲಾ ಆರ್‌. ಸ್ವಾಮಿ ದಂಪತಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರಿಬ್ಬರೂ ಕ್ರಮವಾಗಿ ಮೈಸೂರು ವೈದ್ಯಕೀಯ ಕಾಲೇಜಿನ 1980 ಹಾಗೂ 1982 ಬ್ಯಾಚ್‌ನ ವಿದ್ಯಾರ್ಥಿಗಳಾಗಿದ್ದರು. ರಾಜೀವ್ ನೌಕಾಪಡೆಯಲ್ಲಿ 1986ರಿಂದ 2008ರವರೆಗೆ ವಿಂಗ್‌ ಕಮಾಂಡರ್‌ ಆಗಿ ಕರ್ತವ್ಯ ನಿರ್ವಹಿಸಿದ್ದರು. ಕಲಾ ಅವರು ಶಾರ್ಟ್‌ ಸರ್ವೀಸ್‌ ಕಮಿಷನ್‌ ಮೂಲಕ 6 ವರ್ಷ ಸೇವೆ ಸಲ್ಲಿಸಿದ್ದರು. ‘ಯುದ್ಧ ಭೂಮಿಯಲ್ಲಿ ಸೈನಿಕರಿಗೆ ಚಿಕಿತ್ಸೆ ನೀಡಿದಾಗ ಅವರಿಗಾಗುವ ಆನಂದ ವಿಶಿಷ್ಟವಾದುದು. ಲಡಾಕ್‌ನಂಥ ಕಡೆ ಕೆಲಸ ಮಾಡುವಾಗ ಸಂಪರ್ಕವೇ ಸಾಧ್ಯವಿರಲಿಲ್ಲ. ಕಾರ್ಗಿಲ್‌ ಯುದ್ಧದ ಸಮಯದಲ್ಲಿ ಸೈನಿಕರಲ್ಲಿದ್ದ ಜೋಶ್‌ ವಿಶೇಷ ಅನುಭವ ಮಾಡಿದೆ. ಈ ಅನುಭವವನ್ನು ಎಲ್ಲರೂ ಪಡೆಯಬೇಕು’ ಎಂದು ರಾಜೀವ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT