<p><strong>ಹುಣಸೂರು:</strong> ವಾಣಿಜ್ಯ ಬೆಳೆ ತಂಬಾಕು ಹದಗೊಳಿಸುವ ಪ್ರಕ್ರಿಯೆ ಆರಂಭವಾಗಿದ್ದು, ಈ ಸಾಲಿನಲ್ಲಿ ಮಾರುಕಟ್ಟೆ ಲಾಭ ತರಲಿದೆ ಎಂಬ ನಿರೀಕ್ಷೆ ಅನ್ನದಾತರದ್ದು.</p>.<p>ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ನಾಟಿ ಮಾಡಿದ ತಂಬಾಕು ಹವಾಮಾನದ ವೈಪರೀತ್ಯಕ್ಕೆ ಸಿಲುಕಿ ಬೆಳವಣಿಗೆ ಕುಂಠಿತಗೊಂಡಿರುವುದು ಮತ್ತು ತೇವಾಂಶಕ್ಕೆ ನಾಶವಾಗಿತ್ತು. ಅದರ ನಡುವೆಯೂ ರೈತರು ಬೆಳೆ ಉಳಿಸಿಕೊಂಡಿದ್ದಾರೆ.</p>.<p>ತಂಬಾಕು ಇಳುವರಿ ಕುಂಠಿತವಾಗಿದ್ದರೂ ಗುಣಮಟ್ಟದ ಸೊಪ್ಪು ರೈತನ ಕೈ ಸೇರುತ್ತಿದ್ದು, ದುಪ್ಪಟ್ಟಾಗಿರುವ ಉತ್ಪಾದನಾ ವೆಚ್ಚಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ದರದ ನಿರೀಕ್ಷೆಯಲ್ಲಿ ರೈತರಿದ್ದಾರೆ.</p>.<p><strong>ಹದಗೊಳಿಸುವುದು ಹೀಗೆ:</strong></p>.<p>ಹಸಿರಿನಿಂದ ಹಳದಿ ಬಣ್ಣಕ್ಕೆ ತಿರುಗುತ್ತಿರುವ ಎಲೆಯನ್ನು 2 ಅಥವಾ 3 ಎಲೆಗಳನ್ನು ಗೊಂಚಲು ಮಾಡಿ ಕಡ್ಡಿಗೆ ಕಟ್ಟಬೇಕು. ಗೊಂಚಲು ಕಟ್ಟಿರುವ ಕಡ್ಡಿಯನ್ನು ಹದಗೊಳಿಸುವ ಬ್ಯಾರನ್ನಲ್ಲಿ ವೈಜ್ಞಾನಿಕವಾಗಿ ತೂಗು ಹಾಕುವುದರಿಂದ ಬೆಂಕಿ ಶಾಖಕ್ಕೆ ಸೊಪ್ಪು ಹದಗೊಳ್ಳುತ್ತದೆ ಎನ್ನುತ್ತಾರೆ ತಂಬಾಕು ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ. ರಾಮಕೃಷ್ಣ.</p>.<p><strong>ಗುಣಮಟ್ಟ</strong></p>.<p>ತಂಬಾಕು ಗುಣಮಟ್ಟ ಕಾಯದುಕೊಳ್ಳಲು ಹಸಿರಿನಿಂದ ಕೂಡಿದ ಎಲೆ ಕಠಾವು ಮಾಡಿದಲ್ಲಿ ಹದಗೊಳಿಸುವಾಗ ತರಗು ಅಥವಾ ಕಪ್ಪು ಬಣ್ಣಕ್ಕೆ ತಿರುಗಲಿದೆ. ಇದರಿಂದ ಆರ್ಥಿಕ ನಷ್ಟವಾಗುತ್ತದೆ. 2025-26ನೇ ಸಾಲಿನಲ್ಲಿ ಮಳೆ ಏರುಪೇರಿನಿಂದಾಗಿ ಇಳುವರಿ ಕುಂಠಿತವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ರೈತರು ಕಠಾವಿಗೆ ಬಂದಿರುವ ಎಲೆಯನ್ನು ಕಿತ್ತು, ಗೊಂಚಲು ಮಾಡಿ ಸೊಪ್ಪನ್ನು ಪ್ರತಿ ಕಡ್ಡಿಗೆ 20 ಗೊಂಚಲುಗಳನ್ನಷ್ಟೇ ಕಟ್ಟಬೇಕು ಎಂದು ಅವರು ಮಾಹಿತಿ ನೀಡಿದರು.</p>.<p><strong>ವಿಂಗಡಣೆ</strong></p>.<p>ತಂಬಾಕು ಹದಗೊಳಿಸುವಾಗ ಮೂರು ಹಂತದಲ್ಲಿ (ಹಸಿರು ಎಲೆ, ಹಸಿರು ಮತ್ತು ಹಳದಿ ಮಿಶ್ರಿತ ಸೊಪ್ಪು ಮತ್ತು ಹಣ್ಣಾದ ಎಲೆ) ವಿಂಗಡಿಸಿಕೊಂಡು ಬ್ಯಾರನ್ನಲ್ಲಿ ನೇತು ಹಾಕುವುದರಿಂದ ಬೆಂಕಿಯ ಶಾಖ ಸಮನಾಗಿ ಹರಡಿ ನಿರೀಕ್ಷೆಯಂತೆ ಹದಗೊಂಡು ಗುಣಮಟ್ಟದ ತಂಬಾಕು ಸಿಗಲಿದೆ.</p>.<p>ಸಿಂಗಲ್ ಬ್ಯಾರನ್ಗೆ 350ಕ್ಕೂ ಹೆಚ್ಚು ಕಡ್ಡಿಯನ್ನು ನೇತು ಹಾಕುವುದರಿಂದ ಶಾಖ ಹೆಚ್ಚಾಗಿ ಸೊಪ್ಪು ಸುಟ್ಟು ಹೋಗುವ ಸಾಧ್ಯತೆ ಇದೆ. ವೈಜ್ಞಾನಿಕವಾಗಿ ಹದಗೊಳಿಸುವುದರಿಂದ ಬೆಂಕಿ ಶಾಖ ಸಮನಾಗಿ ಎಲ್ಲಾ ಎಲೆಗಳಿಗೂ ಸಿಕ್ಕು ಪ್ರಥಮ ದರ್ಜೆ ಸೊಪ್ಪು ಪಡೆಯಬಹುದು ಎಂದು ರಾಮಕೃಷ್ಣ ತಿಳಿಸಿದರು.</p>.<p><strong>ಬೇಡಿಕೆ ಹೆಚ್ಚಳ ನಿರೀಕ್ಷೆ</strong></p><p>2024-25ನೇ ಸಾಲಿನಲ್ಲಿ ತಂಬಾಕು 85 ದಶಲಕ್ಷ ಕೆ.ಜಿ. ಮಾರಾಟವಾಗಿತ್ತು. ಈ ಸಾಲಿನಲ್ಲಿ 70 ದಶಲಕ್ಷ ಕೆ.ಜಿ. ಉತ್ಪಾದನೆಯಾಗುವ ನಿರೀಕ್ಷೆ ಇದ್ದು ಕಳೆದ ಸಾಲಿಗೆ ಶೇ 15ರಷ್ಟು ಇಳುವರಿ ಕುಸಿತವಾಗಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿ ದರ ಸಿಗುವ ನಿರೀಕ್ಷೆ ಇದೆ ಎಂದು ತಂಬಾಕು ಮಂಡಳಿ ಸದಸ್ಯ ವಿಕ್ರಂ ಗೌಡ ತಿಳಿಸಿದರು.</p><p>ಮಳೆಗೆ ಇಳುವರಿ ಕುಸಿತ ಅತಿಯಾದ ಮಳೆಗೆ ಇಳುವರಿ ಕುಸಿದಿದ್ದು ಸಿಕ್ಕಷ್ಟು ತಂಬಾಕು ವೈಜ್ಞಾನಿಕವಾಗಿ ಹದಗೊಳಿಸುವ ಪ್ರಕ್ರಿಯೆ ನಡೆದಿದೆ. ಗುಣಮಟ್ಟದ ಸೊಪ್ಪಿನ ನಿರೀಕ್ಷೆಯಲ್ಲಿದ್ದು ಕಳೆದ ಸಾಲಿನಲ್ಲಿ ಮಾರುಕಟ್ಟೆಯಲ್ಲಿ ಕೆ.ಜಿಗೆ ₹ 300 ಇತ್ತು. ಈ ಬಾರಿ ಉತ್ಪಾದನಾ ವೆಚ್ಚ ಹೆಚ್ಚಾಗಿದ್ದು ಪ್ರತಿ ಕೆ.ಜಿಗೆ ₹ 400 ನೀಡಿದರೆ ನಷ್ಟದಿಂದ ಪಾರಾಗಲು ಸಾಧ್ಯ ಎಂದು ಕಲ್ಕುಣಿಕೆ ಗ್ರಾಮದ ಪ್ರಗತಿಪರ ರೈತ ಕುಮಾರ್ ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸೂರು:</strong> ವಾಣಿಜ್ಯ ಬೆಳೆ ತಂಬಾಕು ಹದಗೊಳಿಸುವ ಪ್ರಕ್ರಿಯೆ ಆರಂಭವಾಗಿದ್ದು, ಈ ಸಾಲಿನಲ್ಲಿ ಮಾರುಕಟ್ಟೆ ಲಾಭ ತರಲಿದೆ ಎಂಬ ನಿರೀಕ್ಷೆ ಅನ್ನದಾತರದ್ದು.</p>.<p>ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ನಾಟಿ ಮಾಡಿದ ತಂಬಾಕು ಹವಾಮಾನದ ವೈಪರೀತ್ಯಕ್ಕೆ ಸಿಲುಕಿ ಬೆಳವಣಿಗೆ ಕುಂಠಿತಗೊಂಡಿರುವುದು ಮತ್ತು ತೇವಾಂಶಕ್ಕೆ ನಾಶವಾಗಿತ್ತು. ಅದರ ನಡುವೆಯೂ ರೈತರು ಬೆಳೆ ಉಳಿಸಿಕೊಂಡಿದ್ದಾರೆ.</p>.<p>ತಂಬಾಕು ಇಳುವರಿ ಕುಂಠಿತವಾಗಿದ್ದರೂ ಗುಣಮಟ್ಟದ ಸೊಪ್ಪು ರೈತನ ಕೈ ಸೇರುತ್ತಿದ್ದು, ದುಪ್ಪಟ್ಟಾಗಿರುವ ಉತ್ಪಾದನಾ ವೆಚ್ಚಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ದರದ ನಿರೀಕ್ಷೆಯಲ್ಲಿ ರೈತರಿದ್ದಾರೆ.</p>.<p><strong>ಹದಗೊಳಿಸುವುದು ಹೀಗೆ:</strong></p>.<p>ಹಸಿರಿನಿಂದ ಹಳದಿ ಬಣ್ಣಕ್ಕೆ ತಿರುಗುತ್ತಿರುವ ಎಲೆಯನ್ನು 2 ಅಥವಾ 3 ಎಲೆಗಳನ್ನು ಗೊಂಚಲು ಮಾಡಿ ಕಡ್ಡಿಗೆ ಕಟ್ಟಬೇಕು. ಗೊಂಚಲು ಕಟ್ಟಿರುವ ಕಡ್ಡಿಯನ್ನು ಹದಗೊಳಿಸುವ ಬ್ಯಾರನ್ನಲ್ಲಿ ವೈಜ್ಞಾನಿಕವಾಗಿ ತೂಗು ಹಾಕುವುದರಿಂದ ಬೆಂಕಿ ಶಾಖಕ್ಕೆ ಸೊಪ್ಪು ಹದಗೊಳ್ಳುತ್ತದೆ ಎನ್ನುತ್ತಾರೆ ತಂಬಾಕು ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ. ರಾಮಕೃಷ್ಣ.</p>.<p><strong>ಗುಣಮಟ್ಟ</strong></p>.<p>ತಂಬಾಕು ಗುಣಮಟ್ಟ ಕಾಯದುಕೊಳ್ಳಲು ಹಸಿರಿನಿಂದ ಕೂಡಿದ ಎಲೆ ಕಠಾವು ಮಾಡಿದಲ್ಲಿ ಹದಗೊಳಿಸುವಾಗ ತರಗು ಅಥವಾ ಕಪ್ಪು ಬಣ್ಣಕ್ಕೆ ತಿರುಗಲಿದೆ. ಇದರಿಂದ ಆರ್ಥಿಕ ನಷ್ಟವಾಗುತ್ತದೆ. 2025-26ನೇ ಸಾಲಿನಲ್ಲಿ ಮಳೆ ಏರುಪೇರಿನಿಂದಾಗಿ ಇಳುವರಿ ಕುಂಠಿತವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ರೈತರು ಕಠಾವಿಗೆ ಬಂದಿರುವ ಎಲೆಯನ್ನು ಕಿತ್ತು, ಗೊಂಚಲು ಮಾಡಿ ಸೊಪ್ಪನ್ನು ಪ್ರತಿ ಕಡ್ಡಿಗೆ 20 ಗೊಂಚಲುಗಳನ್ನಷ್ಟೇ ಕಟ್ಟಬೇಕು ಎಂದು ಅವರು ಮಾಹಿತಿ ನೀಡಿದರು.</p>.<p><strong>ವಿಂಗಡಣೆ</strong></p>.<p>ತಂಬಾಕು ಹದಗೊಳಿಸುವಾಗ ಮೂರು ಹಂತದಲ್ಲಿ (ಹಸಿರು ಎಲೆ, ಹಸಿರು ಮತ್ತು ಹಳದಿ ಮಿಶ್ರಿತ ಸೊಪ್ಪು ಮತ್ತು ಹಣ್ಣಾದ ಎಲೆ) ವಿಂಗಡಿಸಿಕೊಂಡು ಬ್ಯಾರನ್ನಲ್ಲಿ ನೇತು ಹಾಕುವುದರಿಂದ ಬೆಂಕಿಯ ಶಾಖ ಸಮನಾಗಿ ಹರಡಿ ನಿರೀಕ್ಷೆಯಂತೆ ಹದಗೊಂಡು ಗುಣಮಟ್ಟದ ತಂಬಾಕು ಸಿಗಲಿದೆ.</p>.<p>ಸಿಂಗಲ್ ಬ್ಯಾರನ್ಗೆ 350ಕ್ಕೂ ಹೆಚ್ಚು ಕಡ್ಡಿಯನ್ನು ನೇತು ಹಾಕುವುದರಿಂದ ಶಾಖ ಹೆಚ್ಚಾಗಿ ಸೊಪ್ಪು ಸುಟ್ಟು ಹೋಗುವ ಸಾಧ್ಯತೆ ಇದೆ. ವೈಜ್ಞಾನಿಕವಾಗಿ ಹದಗೊಳಿಸುವುದರಿಂದ ಬೆಂಕಿ ಶಾಖ ಸಮನಾಗಿ ಎಲ್ಲಾ ಎಲೆಗಳಿಗೂ ಸಿಕ್ಕು ಪ್ರಥಮ ದರ್ಜೆ ಸೊಪ್ಪು ಪಡೆಯಬಹುದು ಎಂದು ರಾಮಕೃಷ್ಣ ತಿಳಿಸಿದರು.</p>.<p><strong>ಬೇಡಿಕೆ ಹೆಚ್ಚಳ ನಿರೀಕ್ಷೆ</strong></p><p>2024-25ನೇ ಸಾಲಿನಲ್ಲಿ ತಂಬಾಕು 85 ದಶಲಕ್ಷ ಕೆ.ಜಿ. ಮಾರಾಟವಾಗಿತ್ತು. ಈ ಸಾಲಿನಲ್ಲಿ 70 ದಶಲಕ್ಷ ಕೆ.ಜಿ. ಉತ್ಪಾದನೆಯಾಗುವ ನಿರೀಕ್ಷೆ ಇದ್ದು ಕಳೆದ ಸಾಲಿಗೆ ಶೇ 15ರಷ್ಟು ಇಳುವರಿ ಕುಸಿತವಾಗಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿ ದರ ಸಿಗುವ ನಿರೀಕ್ಷೆ ಇದೆ ಎಂದು ತಂಬಾಕು ಮಂಡಳಿ ಸದಸ್ಯ ವಿಕ್ರಂ ಗೌಡ ತಿಳಿಸಿದರು.</p><p>ಮಳೆಗೆ ಇಳುವರಿ ಕುಸಿತ ಅತಿಯಾದ ಮಳೆಗೆ ಇಳುವರಿ ಕುಸಿದಿದ್ದು ಸಿಕ್ಕಷ್ಟು ತಂಬಾಕು ವೈಜ್ಞಾನಿಕವಾಗಿ ಹದಗೊಳಿಸುವ ಪ್ರಕ್ರಿಯೆ ನಡೆದಿದೆ. ಗುಣಮಟ್ಟದ ಸೊಪ್ಪಿನ ನಿರೀಕ್ಷೆಯಲ್ಲಿದ್ದು ಕಳೆದ ಸಾಲಿನಲ್ಲಿ ಮಾರುಕಟ್ಟೆಯಲ್ಲಿ ಕೆ.ಜಿಗೆ ₹ 300 ಇತ್ತು. ಈ ಬಾರಿ ಉತ್ಪಾದನಾ ವೆಚ್ಚ ಹೆಚ್ಚಾಗಿದ್ದು ಪ್ರತಿ ಕೆ.ಜಿಗೆ ₹ 400 ನೀಡಿದರೆ ನಷ್ಟದಿಂದ ಪಾರಾಗಲು ಸಾಧ್ಯ ಎಂದು ಕಲ್ಕುಣಿಕೆ ಗ್ರಾಮದ ಪ್ರಗತಿಪರ ರೈತ ಕುಮಾರ್ ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>