<p><strong>ಲಿಂಗಸುಗೂರು (ರಾಯಚೂರು ಜಿಲ್ಲೆ):</strong> ದಡೋರೆಕೋರರ ತಂಡವೊಂದು ತಮ್ಮನ್ನು ಬಂಧಿಸಲು ಬಂದಿದ್ದ ಪೊಲೀಸರ ಮೇಲೆಯೇ ವಾಹನ ಹಾಯಿಸಿ ಕೊಲೆ ಮಾಡಲು ಯತ್ನಿಸಿದ ಘಟನೆ ಪಟ್ಟಣದ ಕಲಬುರ್ಗಿರಸ್ತೆಯಲ್ಲಿ ನಡೆದಿದೆ.</p><p>ಶುಕ್ರವಾರ ರಾತ್ರಿ ತಿಂಥಣಿ ಬ್ರಿಡ್ಜ್ ದಿಂದ ಲಿಂಗಸುಗೂರು ಕಡೆಗೆ ದರೋಡೆಕೋರರ ತಂಡವೊಂದು ಸ್ಕಾರ್ಪಿಯೊ ವಾಹನದಲ್ಲಿ ತೆರಳುತ್ತಿರುವ ಮಾಹಿತಿ ದೊರೆತ ತಕ್ಷಣ ಪೊಲೀಸ್ ಇನ್ಸ್ಪೆಕ್ಟರ್ ಪುಂಡಲಿಕ ಪಟತ್ತರ ನೇತೃತ್ವದ ಪೊಲೀಸರು ದರೋಡೆಕೋರರ ಬಂಧನಕ್ಕೆ ಬಲೆ ಬೀಸಿದ್ದರು.</p>.ಅಪಘಾತ: ತಾಯಿ, ಇಬ್ಬರು ಮಕ್ಕಳ ಸಾವು .<p>ಆದರೆ, ಮಾಣಿಕೇಶ್ವರಿ ಮಠದ ಬಳಿ ಆರೋಪಿತರು ಪೊಲೀಸ್ ಸಿಬ್ಬಂದಿ ವಾಹನದ ಮೇಲೆ ಹಾಯಿಸಿ ಪರಾರಿಯಾಗಲು ಯತ್ನಿಸಿದರು. ನಂತರ ಬಸವಸಾಗರ ವೃತ್ತದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.</p><p>ದರೋಡೆಕೋರರಿದ್ದ ವಾಹನವು ಪೊಲೀಸ್ ಜೀಪ್ ಗೆ ಬಲವಾಗಿ ಡಿಕ್ಕಿ ಹೊಡೆದಿದೆ. ವಾಹನದಲ್ಲಿದ್ದವರು ಖಾರದಪುಡಿ, ರಾಡ್, ಮಚ್ಚುಗಳಿಂದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದರು. ಎರಡೂ ತಂಡಗಳ ಮಧ್ಯೆ ನಡೆದ ಜಟಾಪಟಿಯಲ್ಲಿ ಪೊಲೀಸರು ಪ್ರಯಾಸಪಟ್ಟು ಮೂವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇಬ್ಬರು ಪರಾರಿ ಆಗಿದ್ದಾರೆ.</p><p>ಬಂಧಿತರನ್ನು ಗುರುರಾಜ ಸುರೇಶ ಚವ್ಹಾಣ ಯಾದಗಿರಿ, ಕುಮಾರ ಯಮನಪ್ಪ ಚವ್ಹಾಣ ಕನ್ಯಾಕೋಳೂರುತಾಂಡಾ, ಸುರೇಶ ಪೂಲಸಿಂಗ್ ರಾಠೋಡ ಜಿನಕೇರಿತಾಂಡಾ ಎಂದು ಗುರುತಿಸಲಾಗಿದೆ. ತಿಪ್ಪಣ್ಣ ಚಂದಪ್ಪ ರಾಠೋಡ ಮತ್ತು ಮಾನಪ್ಪ ಓಂ ರಾಠೋಡ ಕನ್ಯಾಕೋಳೂರುತಾಂಡ ಪರಾರಿಯಾಗಿದ್ದು, ಪೊಲೀಸರು ಶೋಧ ತೀವ್ರಗೊಳಿಸಿದ್ದಾರೆ.</p>.ಚಿಂತಾಮಣಿ | ಶಾಲಾ ವಾಹನ ಅಪಘಾತ: 7 ವಿದ್ಯಾರ್ಥಿಗಳಿಗೆ ಗಾಯ.<p>ದರೋಡೆಕೋರರಿಂದ ಹಲ್ಲೆಗೊಳಗಾದ, ಪೊಲೀಸರಿಗೆ ಸಹಕಾರ ನೀಡಿದ ಸ್ಥಳೀಯರಾದ ವೀರೇಶ ಮುದಿಯಪ್ಪ ಭಜಂತ್ರಿ, ನಾರಾಯಣ ಹನುಮಂತ ಕ್ಷತ್ರೀಯ, ಪೊಲೀಸ್ ಕಾನ್ಸ್ಟೆಬಲ್ಗಳಾದ ರಂಗನಾಥ ಹೊನ್ನಪ್ಪ, ಸಿದ್ದಪ್ಪ ಮಾನಪ್ಪ, ಶರಣಬಸವ ಸಾಬಣ್ಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.</p><p>ಪೊಲೀಸ್ ಇನ್ಸ್ಪೆಕ್ಟರ್ ಪುಂಡಲಿಕ್ ಪಟತ್ತರ ನೀಡಿದ ದೂರಿನ ಅನ್ವಯ ಪಿಎಸ್ಐ ರತ್ನಮ್ಮ ಪ್ರಕರಣ ದಾಖಲಿಸಿಕೊಂಡಿದ್ದಾರೆ. </p><p>ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹರೀಶ ಬಾಬು, ಡಿವೈಎಸ್ಪಿ ದತ್ತಾತ್ರೇಯ ಕಾರ್ನಾಡ, ಸಿಪಿಐಗಳಾದ ಹೊಸಕೇರಪ್ಪ ಹಟ್ಟಿ, ಬಾಲಚಂದ್ರ ಡಿ. ಲಕ್ಕಂ ಮಸ್ಕಿ, ಪಿಎಸ್ಐ ವೆಂಕಟೇಶ ಮುದಗಲ್ಲ ಅವರು ಪರಾರಿಯಾದ ಆರೋಪಿತರ ಶೋಧ ಕಾರ್ಯ ನಡೆಸಿದ್ದಾರೆ.</p> .Haveri Accident | ಅಪಘಾತ: ಪರಿಹಾರ ಹಾಗೂ ಸೂಕ್ತ ಚಿಕಿತ್ಸೆಗೆ ಸಂಸದ ಆಗ್ರಹ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಿಂಗಸುಗೂರು (ರಾಯಚೂರು ಜಿಲ್ಲೆ):</strong> ದಡೋರೆಕೋರರ ತಂಡವೊಂದು ತಮ್ಮನ್ನು ಬಂಧಿಸಲು ಬಂದಿದ್ದ ಪೊಲೀಸರ ಮೇಲೆಯೇ ವಾಹನ ಹಾಯಿಸಿ ಕೊಲೆ ಮಾಡಲು ಯತ್ನಿಸಿದ ಘಟನೆ ಪಟ್ಟಣದ ಕಲಬುರ್ಗಿರಸ್ತೆಯಲ್ಲಿ ನಡೆದಿದೆ.</p><p>ಶುಕ್ರವಾರ ರಾತ್ರಿ ತಿಂಥಣಿ ಬ್ರಿಡ್ಜ್ ದಿಂದ ಲಿಂಗಸುಗೂರು ಕಡೆಗೆ ದರೋಡೆಕೋರರ ತಂಡವೊಂದು ಸ್ಕಾರ್ಪಿಯೊ ವಾಹನದಲ್ಲಿ ತೆರಳುತ್ತಿರುವ ಮಾಹಿತಿ ದೊರೆತ ತಕ್ಷಣ ಪೊಲೀಸ್ ಇನ್ಸ್ಪೆಕ್ಟರ್ ಪುಂಡಲಿಕ ಪಟತ್ತರ ನೇತೃತ್ವದ ಪೊಲೀಸರು ದರೋಡೆಕೋರರ ಬಂಧನಕ್ಕೆ ಬಲೆ ಬೀಸಿದ್ದರು.</p>.ಅಪಘಾತ: ತಾಯಿ, ಇಬ್ಬರು ಮಕ್ಕಳ ಸಾವು .<p>ಆದರೆ, ಮಾಣಿಕೇಶ್ವರಿ ಮಠದ ಬಳಿ ಆರೋಪಿತರು ಪೊಲೀಸ್ ಸಿಬ್ಬಂದಿ ವಾಹನದ ಮೇಲೆ ಹಾಯಿಸಿ ಪರಾರಿಯಾಗಲು ಯತ್ನಿಸಿದರು. ನಂತರ ಬಸವಸಾಗರ ವೃತ್ತದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.</p><p>ದರೋಡೆಕೋರರಿದ್ದ ವಾಹನವು ಪೊಲೀಸ್ ಜೀಪ್ ಗೆ ಬಲವಾಗಿ ಡಿಕ್ಕಿ ಹೊಡೆದಿದೆ. ವಾಹನದಲ್ಲಿದ್ದವರು ಖಾರದಪುಡಿ, ರಾಡ್, ಮಚ್ಚುಗಳಿಂದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದರು. ಎರಡೂ ತಂಡಗಳ ಮಧ್ಯೆ ನಡೆದ ಜಟಾಪಟಿಯಲ್ಲಿ ಪೊಲೀಸರು ಪ್ರಯಾಸಪಟ್ಟು ಮೂವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇಬ್ಬರು ಪರಾರಿ ಆಗಿದ್ದಾರೆ.</p><p>ಬಂಧಿತರನ್ನು ಗುರುರಾಜ ಸುರೇಶ ಚವ್ಹಾಣ ಯಾದಗಿರಿ, ಕುಮಾರ ಯಮನಪ್ಪ ಚವ್ಹಾಣ ಕನ್ಯಾಕೋಳೂರುತಾಂಡಾ, ಸುರೇಶ ಪೂಲಸಿಂಗ್ ರಾಠೋಡ ಜಿನಕೇರಿತಾಂಡಾ ಎಂದು ಗುರುತಿಸಲಾಗಿದೆ. ತಿಪ್ಪಣ್ಣ ಚಂದಪ್ಪ ರಾಠೋಡ ಮತ್ತು ಮಾನಪ್ಪ ಓಂ ರಾಠೋಡ ಕನ್ಯಾಕೋಳೂರುತಾಂಡ ಪರಾರಿಯಾಗಿದ್ದು, ಪೊಲೀಸರು ಶೋಧ ತೀವ್ರಗೊಳಿಸಿದ್ದಾರೆ.</p>.ಚಿಂತಾಮಣಿ | ಶಾಲಾ ವಾಹನ ಅಪಘಾತ: 7 ವಿದ್ಯಾರ್ಥಿಗಳಿಗೆ ಗಾಯ.<p>ದರೋಡೆಕೋರರಿಂದ ಹಲ್ಲೆಗೊಳಗಾದ, ಪೊಲೀಸರಿಗೆ ಸಹಕಾರ ನೀಡಿದ ಸ್ಥಳೀಯರಾದ ವೀರೇಶ ಮುದಿಯಪ್ಪ ಭಜಂತ್ರಿ, ನಾರಾಯಣ ಹನುಮಂತ ಕ್ಷತ್ರೀಯ, ಪೊಲೀಸ್ ಕಾನ್ಸ್ಟೆಬಲ್ಗಳಾದ ರಂಗನಾಥ ಹೊನ್ನಪ್ಪ, ಸಿದ್ದಪ್ಪ ಮಾನಪ್ಪ, ಶರಣಬಸವ ಸಾಬಣ್ಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.</p><p>ಪೊಲೀಸ್ ಇನ್ಸ್ಪೆಕ್ಟರ್ ಪುಂಡಲಿಕ್ ಪಟತ್ತರ ನೀಡಿದ ದೂರಿನ ಅನ್ವಯ ಪಿಎಸ್ಐ ರತ್ನಮ್ಮ ಪ್ರಕರಣ ದಾಖಲಿಸಿಕೊಂಡಿದ್ದಾರೆ. </p><p>ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹರೀಶ ಬಾಬು, ಡಿವೈಎಸ್ಪಿ ದತ್ತಾತ್ರೇಯ ಕಾರ್ನಾಡ, ಸಿಪಿಐಗಳಾದ ಹೊಸಕೇರಪ್ಪ ಹಟ್ಟಿ, ಬಾಲಚಂದ್ರ ಡಿ. ಲಕ್ಕಂ ಮಸ್ಕಿ, ಪಿಎಸ್ಐ ವೆಂಕಟೇಶ ಮುದಗಲ್ಲ ಅವರು ಪರಾರಿಯಾದ ಆರೋಪಿತರ ಶೋಧ ಕಾರ್ಯ ನಡೆಸಿದ್ದಾರೆ.</p> .Haveri Accident | ಅಪಘಾತ: ಪರಿಹಾರ ಹಾಗೂ ಸೂಕ್ತ ಚಿಕಿತ್ಸೆಗೆ ಸಂಸದ ಆಗ್ರಹ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>