<p><strong>ರಾಯಚೂರು</strong>: ತಾಲ್ಲೂಕಿನ ರಾಯಚೂರು–ಜಂಬಲದಿನ್ನಿ ಮಾರ್ಗದಲ್ಲಿರುವ ಬಿಜನಗೇರಾ ಗ್ರಾಮದ ಹಳೆಯ ಆಂಜನೇಯ ದೇಗುಲದ ಜೀರ್ಣೋದ್ಧಾರಕ್ಕೆ 60 ವರ್ಷದ ಭಿಕ್ಷುಕಿ ರಂಗಮ್ಮ ಅವರು ₹1.83 ಲಕ್ಷ ದೇಣಿಗೆ ನೀಡಿದ್ದಾರೆ.</p>.<p>35 ವರ್ಷದ ಹಿಂದೆ ಆಂಧ್ರಪ್ರದೇಶದಿಂದ ಗ್ರಾಮಕ್ಕೆ ಬಂದಿರುವ ರಂಗಮ್ಮ ಅವರಿಗೆ ತೆಲುಗು ಬಿಟ್ಟರೆ ಬೇರೆ ಭಾಷೆ ಬರುವುದಿಲ್ಲ. ಮೊದಲು ವಾಸವಿದ್ದ ಹಳೆಯ ಮನೆ ತೆರವುಗೊಳಿಸುವಾಗ ಗೋಣಿ ಚೀಲದಲ್ಲಿ ಹಣ ಇದ್ದುದು ಕಂಡುಬಂದಿತ್ತು. ವಿಚಾರಿಸಿದಾಗ ದೇವಸ್ಥಾನಕ್ಕೆ ಕೊಡುವುದಾಗಿ ಹೇಳಿದ್ದರು ಎನ್ನಲಾಗಿದೆ.</p>.<p>‘ಗ್ರಾಮದ ಮುಖಂಡರೆಲ್ಲ ಸೇರಿ ರಂಗಮ್ಮ ಚೀಲದಲ್ಲಿ ಇಟ್ಟಿದ್ದ ಹಣ ಎಣಿಕೆ ಮಾಡಿದಾಗ ₹1.83 ಲಕ್ಷ ಇರುವುದು ಗೊತ್ತಾಗಿದೆ. ಗ್ರಾಮಸ್ಥರು ಭಿಕ್ಷುಕಿಗಾಗಿ ಚಿಕ್ಕದಾದ ಟಿನ್ಶೀಟ್ ಶೆಡ್ ಕಟ್ಟಿಸಿಕೊಟ್ಟಿದ್ದಾರೆ. ಅವರ ಒಪ್ಪಿಗೆಯಂತೆ ಉಳಿದ ಹಣವನ್ನು ದೇವಸ್ಥಾನದ ಜೀರ್ಣೋದ್ಧಾರಕ್ಕೆ ಬಳಸಿದ್ದೇವೆ’ ಎಂದು ಆಂಜನೇಯಸ್ವಾಮಿ ದೇವಸ್ಥಾನ ಸೇವಾ ಸಮಿತಿ ಕಾರ್ಯದರ್ಶಿ ಬಸವರಾಜ ಯಾದವ ತಿಳಿಸಿದರು.</p>.<p>‘ರಂಗಮ್ಮ ಭಿಕ್ಷೆ ಸಿಕ್ಕ ಹಣವನ್ನು ಗೋಣಿ ಚೀಲದಲ್ಲಿ ಇಡುತ್ತಿದ್ದರು. ಹೀಗಾಗಿ ₹6 ಸಾವಿರ ಮೊತ್ತದ ನೋಟು ಹಾಳಾಗಿದ್ದವು. ಗ್ರಾಮಸ್ಥರು ಅವಳ ಕೈಬಿಟ್ಟಿಲ್ಲ. ನಿತ್ಯ ಉಪಾಹಾರ, ಊಟ ಕೊಡುತ್ತಿದ್ದಾರೆ. ಆದರೆ, ಅವಳು ಭಿಕ್ಷೆ ಬೇಡುವ ಕಾಯಕವನ್ನು ನಿಲ್ಲಿಸಿಲ್ಲ’ ಎಂದು ಹೇಳಿದರು.</p>.<p>‘ದೈವದ ಕಾರ್ಯಕ್ಕೆ ಕೈಜೋಡಿಸಿದ್ದ ರಂಗಮ್ಮನಿಗೆ ಗ್ರಾಮಸ್ಥರು ಸನ್ಮಾನಿಸಿದ್ದಾರೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು</strong>: ತಾಲ್ಲೂಕಿನ ರಾಯಚೂರು–ಜಂಬಲದಿನ್ನಿ ಮಾರ್ಗದಲ್ಲಿರುವ ಬಿಜನಗೇರಾ ಗ್ರಾಮದ ಹಳೆಯ ಆಂಜನೇಯ ದೇಗುಲದ ಜೀರ್ಣೋದ್ಧಾರಕ್ಕೆ 60 ವರ್ಷದ ಭಿಕ್ಷುಕಿ ರಂಗಮ್ಮ ಅವರು ₹1.83 ಲಕ್ಷ ದೇಣಿಗೆ ನೀಡಿದ್ದಾರೆ.</p>.<p>35 ವರ್ಷದ ಹಿಂದೆ ಆಂಧ್ರಪ್ರದೇಶದಿಂದ ಗ್ರಾಮಕ್ಕೆ ಬಂದಿರುವ ರಂಗಮ್ಮ ಅವರಿಗೆ ತೆಲುಗು ಬಿಟ್ಟರೆ ಬೇರೆ ಭಾಷೆ ಬರುವುದಿಲ್ಲ. ಮೊದಲು ವಾಸವಿದ್ದ ಹಳೆಯ ಮನೆ ತೆರವುಗೊಳಿಸುವಾಗ ಗೋಣಿ ಚೀಲದಲ್ಲಿ ಹಣ ಇದ್ದುದು ಕಂಡುಬಂದಿತ್ತು. ವಿಚಾರಿಸಿದಾಗ ದೇವಸ್ಥಾನಕ್ಕೆ ಕೊಡುವುದಾಗಿ ಹೇಳಿದ್ದರು ಎನ್ನಲಾಗಿದೆ.</p>.<p>‘ಗ್ರಾಮದ ಮುಖಂಡರೆಲ್ಲ ಸೇರಿ ರಂಗಮ್ಮ ಚೀಲದಲ್ಲಿ ಇಟ್ಟಿದ್ದ ಹಣ ಎಣಿಕೆ ಮಾಡಿದಾಗ ₹1.83 ಲಕ್ಷ ಇರುವುದು ಗೊತ್ತಾಗಿದೆ. ಗ್ರಾಮಸ್ಥರು ಭಿಕ್ಷುಕಿಗಾಗಿ ಚಿಕ್ಕದಾದ ಟಿನ್ಶೀಟ್ ಶೆಡ್ ಕಟ್ಟಿಸಿಕೊಟ್ಟಿದ್ದಾರೆ. ಅವರ ಒಪ್ಪಿಗೆಯಂತೆ ಉಳಿದ ಹಣವನ್ನು ದೇವಸ್ಥಾನದ ಜೀರ್ಣೋದ್ಧಾರಕ್ಕೆ ಬಳಸಿದ್ದೇವೆ’ ಎಂದು ಆಂಜನೇಯಸ್ವಾಮಿ ದೇವಸ್ಥಾನ ಸೇವಾ ಸಮಿತಿ ಕಾರ್ಯದರ್ಶಿ ಬಸವರಾಜ ಯಾದವ ತಿಳಿಸಿದರು.</p>.<p>‘ರಂಗಮ್ಮ ಭಿಕ್ಷೆ ಸಿಕ್ಕ ಹಣವನ್ನು ಗೋಣಿ ಚೀಲದಲ್ಲಿ ಇಡುತ್ತಿದ್ದರು. ಹೀಗಾಗಿ ₹6 ಸಾವಿರ ಮೊತ್ತದ ನೋಟು ಹಾಳಾಗಿದ್ದವು. ಗ್ರಾಮಸ್ಥರು ಅವಳ ಕೈಬಿಟ್ಟಿಲ್ಲ. ನಿತ್ಯ ಉಪಾಹಾರ, ಊಟ ಕೊಡುತ್ತಿದ್ದಾರೆ. ಆದರೆ, ಅವಳು ಭಿಕ್ಷೆ ಬೇಡುವ ಕಾಯಕವನ್ನು ನಿಲ್ಲಿಸಿಲ್ಲ’ ಎಂದು ಹೇಳಿದರು.</p>.<p>‘ದೈವದ ಕಾರ್ಯಕ್ಕೆ ಕೈಜೋಡಿಸಿದ್ದ ರಂಗಮ್ಮನಿಗೆ ಗ್ರಾಮಸ್ಥರು ಸನ್ಮಾನಿಸಿದ್ದಾರೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>