<p><strong>ರಾಯಚೂರು:</strong> ‘ರಾಯಚೂರು ಜಿಲ್ಲೆಯಲ್ಲಿ ಬಜ್ ಇಂಡಿಯಾ ಟ್ರಸ್ಟ್ ಜೊತೆಗೆ ಸೇರಿ ಮಾಡಿದ ಕೆಲಸ ಸಂತೋಷ ತಂದಿದೆ. ಬಜ್ ತರಬೇತಿಗಳಿಂದ ಮಹಿಳೆಯರಲ್ಲಿ ತುಂಬಾ ಮಹತ್ವಪೂರ್ಣ ಬೆಳವಣಿಗೆಗೆಳು ಆಗಿದ್ದು, ಅವರ ಭವಿಷ್ಯ ಇನ್ನೂ ಉತ್ತಮವಾಗಲಿ’ ಎಂದು ಬಜ್ ಸಂಸ್ಥೆಯ ಸಿಇಒ ಉತ್ತರ ನಾರಾಯಣ ಹಾರೈಸಿದರು.</p>.<p>ಬಜ್ ಇಂಡಿಯಾ ಟ್ರಸ್ಟ್ , ಕ್ರೆಡಿಟ್ ಎಕ್ಸೆಸ್ ಇಂಡಿಯಾ ಫೌಂಡೇಶನ್, ಗ್ರಾಮೀಣ ಕೂಟ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿ ಸಭಾಂಗಣದಲ್ಲಿ ನಡೆದ ಬಜ್ ಗೆಳತಿ ಸಮಾಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಸಾಲ ಮಾಡುವುದು ತಪ್ಪಲ್ಲ. ಆದರೆ ಮಾಡಿದ ಸಾಲವನ್ನು ಅಭಿವೃದ್ಧಿಗಾಗಿ ಬಳಸದೇ, ಮರುಪಾವತಿ ಮಾಡದೇ ಇರುವುದು ಬಹುದೊಡ್ಡ ತಪ್ಪು. ಮಹಿಳೆಯರು ತಮ್ಮ ಸಾಮರ್ಥ್ಯ ಅರ್ಥ ಮಾಡಿಕೊಳ್ಳಬೇಕು. ಕಲಿತು ಮುಂದೆ ಬರಬೇಕು’ ಎಂದು ತಿಳಿಸಿದರು.</p>.<p>ಕ್ರೆಡಿಟ್ ಎಕ್ಸೆಸ್ ಇಂಡಿಯಾ ಫೌಂಡೇಶನ್ ಪ್ರಧಾನ ನಿರ್ವಹಣಾ ಅಧಿಕಾರಿ ಸತೀಶ್ ರಾವ್ ಮಾತನಾಡಿ, ‘ಮಹಿಳೆಯರು ಸಿಎಐಎಫ್ ನೀಡುವ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.</p>.<p>ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಶರಣಮ್ಮ ಮಾತನಾಡಿದರು.</p>.<p>ಬಜ್ ಗೆಳತಿಯರಾದ ರೇಖಾ, ಬಾಲಜ್ಯೋತಿ, ಲಲಿತಾ, ಲಕ್ಷ್ಮಿ ಅನಿಸಿಕೆಗಳನ್ನು ಹಂಚಿಕೊಂಡರು. ಅತಿಥಿಗಳು ಮಹಿಳೆಯರು ಸಿದ್ಧಪಡಿಸಿದ ಉತ್ಪನ್ನಗಳ ಪ್ರದರ್ಶನ ವೀಕ್ಷಿಸಿದರು.</p>.<p>ಶಿವಲಿಂಗಪ್ಪ, ಗ್ರಾಮೀಣ ಕೂಟದ ವಲಯ ವ್ಯವಸ್ಥಾಪಕ ಶರಣಪ್ಪ, ರಿಜನಲ್ ಮ್ಯಾನೇಜರ್, ಸುರೇಶ, ಎಲ್ ಮತ್ತು ಡಿ ಮ್ಯಾನೇಜರ್ , ಅಜ್ಜೇನಗೌಡ, ನರೆನ್, ಭುವನೇಶ್ವರಿ ಮತ್ತು ಶಹನಾಜ್ ಉಪಸ್ಥಿತರಿದ್ದರು. ಭಾರತಿ ಬಿಜಾಪುರ ಸ್ವಾಗತಿಸಿದರು. ಅಜೇಯ್ ಕೊರಡೂರ ನಿರೂಪಿಸಿದರು. ಮುತ್ತಪ್ಪ ಬಾಗೇವಾಡಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು:</strong> ‘ರಾಯಚೂರು ಜಿಲ್ಲೆಯಲ್ಲಿ ಬಜ್ ಇಂಡಿಯಾ ಟ್ರಸ್ಟ್ ಜೊತೆಗೆ ಸೇರಿ ಮಾಡಿದ ಕೆಲಸ ಸಂತೋಷ ತಂದಿದೆ. ಬಜ್ ತರಬೇತಿಗಳಿಂದ ಮಹಿಳೆಯರಲ್ಲಿ ತುಂಬಾ ಮಹತ್ವಪೂರ್ಣ ಬೆಳವಣಿಗೆಗೆಳು ಆಗಿದ್ದು, ಅವರ ಭವಿಷ್ಯ ಇನ್ನೂ ಉತ್ತಮವಾಗಲಿ’ ಎಂದು ಬಜ್ ಸಂಸ್ಥೆಯ ಸಿಇಒ ಉತ್ತರ ನಾರಾಯಣ ಹಾರೈಸಿದರು.</p>.<p>ಬಜ್ ಇಂಡಿಯಾ ಟ್ರಸ್ಟ್ , ಕ್ರೆಡಿಟ್ ಎಕ್ಸೆಸ್ ಇಂಡಿಯಾ ಫೌಂಡೇಶನ್, ಗ್ರಾಮೀಣ ಕೂಟ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿ ಸಭಾಂಗಣದಲ್ಲಿ ನಡೆದ ಬಜ್ ಗೆಳತಿ ಸಮಾಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಸಾಲ ಮಾಡುವುದು ತಪ್ಪಲ್ಲ. ಆದರೆ ಮಾಡಿದ ಸಾಲವನ್ನು ಅಭಿವೃದ್ಧಿಗಾಗಿ ಬಳಸದೇ, ಮರುಪಾವತಿ ಮಾಡದೇ ಇರುವುದು ಬಹುದೊಡ್ಡ ತಪ್ಪು. ಮಹಿಳೆಯರು ತಮ್ಮ ಸಾಮರ್ಥ್ಯ ಅರ್ಥ ಮಾಡಿಕೊಳ್ಳಬೇಕು. ಕಲಿತು ಮುಂದೆ ಬರಬೇಕು’ ಎಂದು ತಿಳಿಸಿದರು.</p>.<p>ಕ್ರೆಡಿಟ್ ಎಕ್ಸೆಸ್ ಇಂಡಿಯಾ ಫೌಂಡೇಶನ್ ಪ್ರಧಾನ ನಿರ್ವಹಣಾ ಅಧಿಕಾರಿ ಸತೀಶ್ ರಾವ್ ಮಾತನಾಡಿ, ‘ಮಹಿಳೆಯರು ಸಿಎಐಎಫ್ ನೀಡುವ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.</p>.<p>ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಶರಣಮ್ಮ ಮಾತನಾಡಿದರು.</p>.<p>ಬಜ್ ಗೆಳತಿಯರಾದ ರೇಖಾ, ಬಾಲಜ್ಯೋತಿ, ಲಲಿತಾ, ಲಕ್ಷ್ಮಿ ಅನಿಸಿಕೆಗಳನ್ನು ಹಂಚಿಕೊಂಡರು. ಅತಿಥಿಗಳು ಮಹಿಳೆಯರು ಸಿದ್ಧಪಡಿಸಿದ ಉತ್ಪನ್ನಗಳ ಪ್ರದರ್ಶನ ವೀಕ್ಷಿಸಿದರು.</p>.<p>ಶಿವಲಿಂಗಪ್ಪ, ಗ್ರಾಮೀಣ ಕೂಟದ ವಲಯ ವ್ಯವಸ್ಥಾಪಕ ಶರಣಪ್ಪ, ರಿಜನಲ್ ಮ್ಯಾನೇಜರ್, ಸುರೇಶ, ಎಲ್ ಮತ್ತು ಡಿ ಮ್ಯಾನೇಜರ್ , ಅಜ್ಜೇನಗೌಡ, ನರೆನ್, ಭುವನೇಶ್ವರಿ ಮತ್ತು ಶಹನಾಜ್ ಉಪಸ್ಥಿತರಿದ್ದರು. ಭಾರತಿ ಬಿಜಾಪುರ ಸ್ವಾಗತಿಸಿದರು. ಅಜೇಯ್ ಕೊರಡೂರ ನಿರೂಪಿಸಿದರು. ಮುತ್ತಪ್ಪ ಬಾಗೇವಾಡಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>