ಬಿಟಿ ರಸ್ತೆಗೆ ನಿರ್ಮಾಣಕ್ಕೆ ₹ 45 ಲಕ್ಷ ಶಾಸಕರ ಅನುದಾನದ ಎಸ್ಟಿಮೇಟ್ ಆಗಿತ್ತು. ಟೆಂಡರ್ ನೀಡುವ ಹಂತದಲ್ಲಿರುವಾಗ ಶಾಸಕರು ಮನ್ಸಲಾಪುರ ರಸ್ತೆಗೆ ಸ್ಥಳಾಂತರ ಮಾಡಿಕೊಂಡಿದ್ದಾರೆ. ಅವರು ಕೊಟ್ಟ ಅನುದಾನ ಅವರೇ ವಾಪಸ್ ಪಡೆದಿದ್ದಾರೆ. ನಗರಸಭೆ ಅಧ್ಯಕ್ಷರು, ಪೌರಾಯುಕ್ತರು ಸಮಸ್ಯೆಗಳ ಬಗ್ಗೆ ಸ್ಪಂದಿಸುತ್ತಿಲ್ಲ. ಶೀಘ್ರವೇ ಮೋರಂ ಹಾಕಿ ದುರಸ್ತಿಗೊಳಿಸಲಾಗಿವುದು ಎಂದು ನಗರಸಭೆ ಸದಸ್ಯ ರಮೇಶ .ಬಿ ಅವರು ತಿಳಿಸಿದರು.