<p><strong>ಹಟ್ಟಿ ಚಿನ್ನದ ಗಣಿ:</strong> ಇಲ್ಲಿಗೆ ಸಮೀಪದ ಗುಂಡಲಬಂಡ ಜಲಪಾತ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.</p>.<p>ಈ ಜಲಪಾತ ಗೋಲಪಲ್ಲಿ ಬಳಿ ಪ್ರಕೃತಿಯ ಮಡಿಲಿನಲ್ಲಿದೆ. 15 ಅಡಿ ಎತ್ತರದಿಂದ ಬೀಳುವ ರಮಣೀಯ ಜಲಧಾರೆ ಕಣ್ಮನ ಸೆಳೆಯುತ್ತದೆ.</p>.<p>ಗುರುಗುಂಟಾ ಗ್ರಾಮದಿಂದ 3 ಕಿ.ಮೀ ದೂರವಿರುವ ಈ ಜಲಪಾತದ ಕುರಿತು ರಸ್ತೆ ಪಕ್ಕದಲ್ಲಿ ನಾಮಫಲಕ ಹಾಕಿಲ್ಲ. ಕಲ್ಲುಗಳ ಮಧ್ಯೆ ಇರುವ ಕಿರಿದಾದ ಮಣ್ಣಿನ ರಸ್ತೆಯಲ್ಲಿ ಸಾಗಬೇಕು. </p>.<p>ಪ್ರತಿವರ್ಷ ಮಳೆಗಾಲದಲ್ಲಿ ಧುಮ್ಮಿಕ್ಕುವ ಗುಂಡಲಬಂಡ ಜಲಪಾತಕ್ಕೆ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಸ್ನಾನ ಮಾಡಿ ಪಕ್ಕದಲ್ಲಿಯೇ ಇರುವ ಮಹರ್ಷಿ ವಾಲ್ಮೀಕಿ ಗುರುಕುಲಕ್ಕೆ ಭೇಟಿ ನೀಡುತ್ತಾರೆ.</p>.<p>25 ದಿನಗಳಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಈಗ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದೆ.</p>.<p>‘ಜಲಪಾತ ನೋಡಿ ಸಂತಸವಾಗಿದೆ. ಪ್ರಕೃತಿ ಮಡಿಲಿನ ಈ ತಾಣ ಕಣ್ಮನ ಸೆಳೆಯುತ್ತಿದೆ’ ಎಂದು ಪ್ರವಾಸಿಗ ಪುನೀತ್ ಸಂತಸ ವ್ಯಕ್ತಪಡಿಸಿದರು.</p>.<p>ಪ್ರಕೃತಿ ಮಡಿಲಿನ ಜಲಪಾತ ಭಕ್ತರನ್ನು ಕೈಬೀಸಿ ಕರೆಯುತ್ತಿದೆ ಎಂದು ಇಲ್ಲಿನ ಗೋಲಪಲ್ಲಿಯ ವಾಲ್ಮೀಕಿ ಮಠದ ವರದಾನೇಶ್ವರ ಸ್ವಾಮೀಜಿ ತಿಳಿಸಿದರು.</p>.<div><blockquote>ಜಲಪಾತಕ್ಕೆ ತೆರಳಲು ಸರಿಯಾದ ರಸ್ತೆ ಇಲ್ಲ. ನಾಮಫಲಕವನ್ನೂ ಅಳವಡಿಸಿಲ್ಲ. ಸಂಬಂಧಿಸಿದ ಅಧಿಕಾರಿಗಳು ರಸ್ತೆ ಪಕ್ಕದಲ್ಲಿ ನಾಮಫಲಕ ಅಳವಡಿಸಿದರೆ ಪ್ರವಾಸಿಗರಿಗೆ ಅನುಕೂಲವಾಗಲಿದೆ.</blockquote><span class="attribution">– ರಾಜಾ ಸೋಮನಾಥ ನಾಯಕ, ಗುರುಗುಂಟಾ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಟ್ಟಿ ಚಿನ್ನದ ಗಣಿ:</strong> ಇಲ್ಲಿಗೆ ಸಮೀಪದ ಗುಂಡಲಬಂಡ ಜಲಪಾತ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.</p>.<p>ಈ ಜಲಪಾತ ಗೋಲಪಲ್ಲಿ ಬಳಿ ಪ್ರಕೃತಿಯ ಮಡಿಲಿನಲ್ಲಿದೆ. 15 ಅಡಿ ಎತ್ತರದಿಂದ ಬೀಳುವ ರಮಣೀಯ ಜಲಧಾರೆ ಕಣ್ಮನ ಸೆಳೆಯುತ್ತದೆ.</p>.<p>ಗುರುಗುಂಟಾ ಗ್ರಾಮದಿಂದ 3 ಕಿ.ಮೀ ದೂರವಿರುವ ಈ ಜಲಪಾತದ ಕುರಿತು ರಸ್ತೆ ಪಕ್ಕದಲ್ಲಿ ನಾಮಫಲಕ ಹಾಕಿಲ್ಲ. ಕಲ್ಲುಗಳ ಮಧ್ಯೆ ಇರುವ ಕಿರಿದಾದ ಮಣ್ಣಿನ ರಸ್ತೆಯಲ್ಲಿ ಸಾಗಬೇಕು. </p>.<p>ಪ್ರತಿವರ್ಷ ಮಳೆಗಾಲದಲ್ಲಿ ಧುಮ್ಮಿಕ್ಕುವ ಗುಂಡಲಬಂಡ ಜಲಪಾತಕ್ಕೆ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಸ್ನಾನ ಮಾಡಿ ಪಕ್ಕದಲ್ಲಿಯೇ ಇರುವ ಮಹರ್ಷಿ ವಾಲ್ಮೀಕಿ ಗುರುಕುಲಕ್ಕೆ ಭೇಟಿ ನೀಡುತ್ತಾರೆ.</p>.<p>25 ದಿನಗಳಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಈಗ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದೆ.</p>.<p>‘ಜಲಪಾತ ನೋಡಿ ಸಂತಸವಾಗಿದೆ. ಪ್ರಕೃತಿ ಮಡಿಲಿನ ಈ ತಾಣ ಕಣ್ಮನ ಸೆಳೆಯುತ್ತಿದೆ’ ಎಂದು ಪ್ರವಾಸಿಗ ಪುನೀತ್ ಸಂತಸ ವ್ಯಕ್ತಪಡಿಸಿದರು.</p>.<p>ಪ್ರಕೃತಿ ಮಡಿಲಿನ ಜಲಪಾತ ಭಕ್ತರನ್ನು ಕೈಬೀಸಿ ಕರೆಯುತ್ತಿದೆ ಎಂದು ಇಲ್ಲಿನ ಗೋಲಪಲ್ಲಿಯ ವಾಲ್ಮೀಕಿ ಮಠದ ವರದಾನೇಶ್ವರ ಸ್ವಾಮೀಜಿ ತಿಳಿಸಿದರು.</p>.<div><blockquote>ಜಲಪಾತಕ್ಕೆ ತೆರಳಲು ಸರಿಯಾದ ರಸ್ತೆ ಇಲ್ಲ. ನಾಮಫಲಕವನ್ನೂ ಅಳವಡಿಸಿಲ್ಲ. ಸಂಬಂಧಿಸಿದ ಅಧಿಕಾರಿಗಳು ರಸ್ತೆ ಪಕ್ಕದಲ್ಲಿ ನಾಮಫಲಕ ಅಳವಡಿಸಿದರೆ ಪ್ರವಾಸಿಗರಿಗೆ ಅನುಕೂಲವಾಗಲಿದೆ.</blockquote><span class="attribution">– ರಾಜಾ ಸೋಮನಾಥ ನಾಯಕ, ಗುರುಗುಂಟಾ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>