ರಾಯಚೂರು: ಐಪಿಎಲ್ ಪಂದ್ಯಗಳಿಗೆ ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗ್ರಾಮಗಳಲ್ಲಿ ಬೆಟ್ಟಿಂಗ್ ಪಡೆಯುತ್ತಿದ್ದ ಇಬ್ಬರು ಬುಕ್ಕಿಗಳನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ದೇವದುರ್ಗದ ರಾಷ್ಟ್ರಪತಿ ಬಡಾವಣೆಯಲ್ಲಿ ಪಾನ್ಶಾಪ್ ನಡೆಸುತ್ತಿರುವ ಶ್ರೀನಿವಾಸ ಚಂದಣ್ಣ ಹಾಗೂ ದೇವದುರ್ಗ ತಾಲ್ಲೂಕು ಹೇಮನೂರ ಗ್ರಾಮದಲ್ಲಿ ಕ್ಷೌರಿಕ ವೃತ್ತಿ ಮಾಡುತ್ತಿದ್ದ ರಮೇಶ ಸುಭಾಷ್ ಬಂಧಿತ ಆರೋಪಿಗಳು.
ಆರೋಪಿಗಳಿಂದ ₹5,300 ನಗದು ಹಾಗೂ ಎರಡು ಮೊಬೈಲ್ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ದೇವದುರ್ಗ ಠಾಣೆಯ ಪಿಎಸ್ಐ ಅಗ್ನಿ ಅವರು ತಿಳಿಸಿದ್ದಾರೆ.