1971 ರಲ್ಲಿ ಶಂಕರಗೌಡ ಪೊಲೀಸ್ ಪಾಟೀಲ್, ಅಮರೇಗೌಡ ಪಾಟೀಲ್, ಕೊಟ್ರಯ್ಯ ಸ್ವಾಮಿ, ಜೊತಾನ್ ಕಳಕಪ್ಪ, ಸೇರಿದಂತೆ ಹಲವು ಮುಖಂಡರು ಮಲ್ಲಿಕಾರ್ಜುನ ಬೆಟ್ಟದ ಕೆಳಗಡೆ ಇರುವ ಚಿಕ್ಕದಾದ ಭ್ರಮರಾಂಬಾ ದೇವಸ್ಥಾನದಲ್ಲಿ ಮೊದಲಿಗೆ ಪುರಾಣ ಪ್ರಾರಂಭಿಸಿದ್ದರು. ನಂತರ ಭಕ್ತರ ಸಂಖ್ಯೆ ಹೆಚ್ಚಾಯಿತು. ಭಕ್ತರು ಸೇರಿಕೊಂಡು ಕಟ್ಟಿಗೆಯಲ್ಲಿದ್ದ ಭ್ರಮರಾಂಬಾ ದೇವಿಯ ವಿಗ್ರಹವನ್ನು ಕಲ್ಲಿನ ಶಿಲೆಯಲ್ಲಿ ಮಾಡಿಸಿ ಪ್ರತಿಷ್ಠಾಪಿಸಿದರು.