ಯರಗೇರಾ ರೈತ ಸಂಪರ್ಕ ಕೇಂದ್ರ ಮಾತ್ರ ಸ್ವಂತ ಕಟ್ಟಡದಲ್ಲಿದ್ದು, ಚಂದ್ರಬಂಡಾದ ರೈತ ಸಂಪರ್ಕ ಕೇಂದ್ರವು ಕೃಷಿ ಇಲಾಖೆಯ ಸರ್ಕಾರಿ ವಸತಿಗೃಹದಲ್ಲಿದೆ. ಇನ್ನುಳಿದ ನಾಲ್ಕು ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿವೆ. ಗಿಲ್ಲೇಸುಗೂರು, ಕುರ್ಡಿ ರೈತ ಸಂಪರ್ಕ ಕೇಂದ್ರಗಳಿಗೆ ಸ್ವಂತ ಕಟ್ಟಡಗಳು ನಿರ್ಮಾಣ ಹಂತದಲ್ಲಿವೆ. ಇನ್ನುಳಿದ ಕೇಂದ್ರಗಳಿಗೂ ಜಾಗ ಗುರುತಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆಯಾಗಿದೆ ಎಂದು ಕೃಷಿ ಸಚಿವರು ಉತ್ತರಿಸಿದರು.