ಬಿಜೆಪಿ ಮುಖಂಡ ಪ್ರತಾಪಗೌಡ ಪಾಟೀಲ ಅವರು, ಕ್ಷೇತ್ರದಾದ್ಯಂತ ಇರುವ ಬೆಂಬಲಿಗರು, ಮುಖಂಡರುಗಳನ್ನು ಪಕ್ಷದ ಕಚೇರಿಗೆ ಆಹ್ವಾನಿಸಿ ಸಭೆ ನಡೆಸಿದ್ದಾರೆ. ಉಪಚುನಾವಣೆ ಎದುರಿಸುವುದಕ್ಕೆ ಪೂರ್ವ ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಕಚೇರಿಯಲ್ಲಿಯೂ ತಾಲ್ಲೂಕು ಪದಾಧಿಕಾರಿಗಳು ಸಭೆ ಸೇರಿ, ಪಕ್ಷದ ಸಂಘಟನೆಗಾಗಿ ಗ್ರಾಮಗಳತ್ತ ಹೆಜ್ಜೆ ಹಾಕುತ್ತಿರುವುದು ಗಮನ ಸೆಳೆಯುತ್ತಿದೆ.