<p><strong>ರಾಯಚೂರು: </strong>ಆನೇಕಾಲು ರೋಗ ನಿರ್ಮೂಲನೆಗೆ ಸಾರ್ವಜನಿಕರು ಆರೋಗ್ಯ ಇಲಾಖೆಗೆ ಸಹಕಾರ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಹೇಮಾವತಿ ಹೇಳಿದರು.</p>.<p>ತಾಲ್ಲೂಕು ಆರೋಗ್ಯ ಅಧಿಕಾರಿ ಕಚೇರಿ ಹತ್ತಿರ ಶನಿವಾರ ಆಯೋಜಿಸಿದ್ದ ಆನೇಕಾಲು ರೋಗಕ್ಕೆ ಡಿಇಸಿ ಮಾತ್ರೆ ನುಂಗಿಸುವ ತಾಲ್ಲೂಕುಮಟ್ಟದ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.</p>.<p>ಆನೆಕಾಲು ರೋಗದಿಂದ ಮುಕ್ತರಾಗಲು ಡಿಇಸಿ ಮತ್ತು ಅಲ್ಬೆಂಡಜೊಲ್ ಮಾತ್ರೆಯನ್ನು ತಪ್ಪದೇ ನುಂಗಬೇಕು ಎಂದರು.</p>.<p>ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಮಹಮ್ಮದ್ ಶಾಕೀರ್ ಮೊಯಿನುದ್ದೀನ್ ಮಾತನಾಡಿ, ಸೆ. 24ರಂದು ಆನೆಕಾಲು ರೋಗಕ್ಕೆ ಸಾಮೂಹಿಕವಾಗಿ ಡಿಇಸಿ ಮಾತ್ರೆ ನುಂಗಿಸುವ ಕಾರ್ಯಕ್ರಮ ನಡೆಯಲಿದ್ದು, 5,25,501 ಮಾತ್ರೆಗಳನ್ನು ನುಂಗಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.</p>.<p>571 ಔಷಧಿ ನುಂಗಿಸುವವರು ಹಾಗೂ 57 ಮೇಲ್ವಿಚಾರಕರನ್ನು ಈ ಕಾರ್ಯಕ್ಕೆ ಗುರುತಿಸಲಾಗಿದೆ. ಆಶಾ ಕಾರ್ಯಕರ್ತೆಯರು ಪ್ರತಿದಿನ 50 ಮನೆಗಳಿಗೆ ಭೇಟಿ ನೀಡಿ, ವಯಸ್ಸಿಗೆ ಅನುಗುಣವಾಗಿ ಮಾತ್ರೆ ನೀಡುತ್ತಾರೆ ಎಂದರು.</p>.<p>2 ವರ್ಷದೊಳಗಿನವರು, ಗರ್ಭಿಣಿಯರು ಹಾಗೂ ಗಂಭೀರ ರೋಗ ಇರುವವರು ಮಾತ್ರೆ ಸೇವಿಸಬಾರದು ಎಂದು ತಿಳಿಸಿದರು.</p>.<p>ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿಗಳು, ಆರ್ಬಿಎಸ್ಕೆ ವೈದ್ಯಾಧಿಕಾರಿಗಳು. ಜಿಲ್ಲಾ ಹಿರಿಯ ಆರೋಗ್ಯ ಸಹಾಯಕರು, ಔಷಧ ತಜ್ಞರು, ಪ್ರಯೋಗಶಾಲೆ ತಂತ್ರಜ್ಞರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು: </strong>ಆನೇಕಾಲು ರೋಗ ನಿರ್ಮೂಲನೆಗೆ ಸಾರ್ವಜನಿಕರು ಆರೋಗ್ಯ ಇಲಾಖೆಗೆ ಸಹಕಾರ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಹೇಮಾವತಿ ಹೇಳಿದರು.</p>.<p>ತಾಲ್ಲೂಕು ಆರೋಗ್ಯ ಅಧಿಕಾರಿ ಕಚೇರಿ ಹತ್ತಿರ ಶನಿವಾರ ಆಯೋಜಿಸಿದ್ದ ಆನೇಕಾಲು ರೋಗಕ್ಕೆ ಡಿಇಸಿ ಮಾತ್ರೆ ನುಂಗಿಸುವ ತಾಲ್ಲೂಕುಮಟ್ಟದ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.</p>.<p>ಆನೆಕಾಲು ರೋಗದಿಂದ ಮುಕ್ತರಾಗಲು ಡಿಇಸಿ ಮತ್ತು ಅಲ್ಬೆಂಡಜೊಲ್ ಮಾತ್ರೆಯನ್ನು ತಪ್ಪದೇ ನುಂಗಬೇಕು ಎಂದರು.</p>.<p>ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಮಹಮ್ಮದ್ ಶಾಕೀರ್ ಮೊಯಿನುದ್ದೀನ್ ಮಾತನಾಡಿ, ಸೆ. 24ರಂದು ಆನೆಕಾಲು ರೋಗಕ್ಕೆ ಸಾಮೂಹಿಕವಾಗಿ ಡಿಇಸಿ ಮಾತ್ರೆ ನುಂಗಿಸುವ ಕಾರ್ಯಕ್ರಮ ನಡೆಯಲಿದ್ದು, 5,25,501 ಮಾತ್ರೆಗಳನ್ನು ನುಂಗಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.</p>.<p>571 ಔಷಧಿ ನುಂಗಿಸುವವರು ಹಾಗೂ 57 ಮೇಲ್ವಿಚಾರಕರನ್ನು ಈ ಕಾರ್ಯಕ್ಕೆ ಗುರುತಿಸಲಾಗಿದೆ. ಆಶಾ ಕಾರ್ಯಕರ್ತೆಯರು ಪ್ರತಿದಿನ 50 ಮನೆಗಳಿಗೆ ಭೇಟಿ ನೀಡಿ, ವಯಸ್ಸಿಗೆ ಅನುಗುಣವಾಗಿ ಮಾತ್ರೆ ನೀಡುತ್ತಾರೆ ಎಂದರು.</p>.<p>2 ವರ್ಷದೊಳಗಿನವರು, ಗರ್ಭಿಣಿಯರು ಹಾಗೂ ಗಂಭೀರ ರೋಗ ಇರುವವರು ಮಾತ್ರೆ ಸೇವಿಸಬಾರದು ಎಂದು ತಿಳಿಸಿದರು.</p>.<p>ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿಗಳು, ಆರ್ಬಿಎಸ್ಕೆ ವೈದ್ಯಾಧಿಕಾರಿಗಳು. ಜಿಲ್ಲಾ ಹಿರಿಯ ಆರೋಗ್ಯ ಸಹಾಯಕರು, ಔಷಧ ತಜ್ಞರು, ಪ್ರಯೋಗಶಾಲೆ ತಂತ್ರಜ್ಞರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>