<p><strong>ರಾಯಚೂರು:</strong> ತೆಲಂಗಾಣದಿಂದ ರಾಯಚೂರಿಗೆ ರೈಲಿನ ಮೂಲಕ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಸಿ.ಎಚ್ ಪೌಡರ್ ಮಿಶ್ರಿತ 250 ಲೀಟರ್ ಸೇಂದಿಯನ್ನು ಭಾನುವಾರ ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.</p><p>ಖಚಿತ ಮಾಹಿತಿ ಮೇರೆಗೆ ಅಬಕಾರಿ ಇಲಾಖೆ ಹಾಗೂ ಆರ್ಪಿಎಫ್ ಅಧಿಕಾರಿಗಳ ತಂಡದೊಂದಿಗೆ ರೈಲ್ವೆ ನಿಲ್ದಾಣದಲ್ಲಿ ದಾಳಿ ನಡೆಸಿ ಅಪಾರ ಪ್ರಮಾಣದಲ್ಲಿ ಸಿಎಚ್ ಪೌಡರ್ ಮಿಶ್ರಿತ ಸೇಂದಿಯನ್ನು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.</p><p>ಕ್ಲೋರಲ್ ಹೈಡೇಡ್ ವಿಷಪೂರಿತ ರಾಸಾಯನಿಕ ಮಿಶ್ರಣ ಮಾಡಿ ಕಲಬೆರಿಕೆ ಸೇಂದಿಯನ್ನು ಮಾರಾಟಕ್ಕೆ ತಯಾರಿಸಿಕೊಂಡು ತೆಲಂಗಾಣದ ಕೃಷ್ಣ ಗ್ರಾಮದ ರೈಲ್ವೆ ನಿಲ್ದಾಣ ಮೂಲಕ ಆಗಮಿಸಿ ರಾಯಚೂರು ರೈಲ್ವೆ ನಿಲ್ದಾಣದಿಂದ ನಗರದ ವಿವಿಧ ಬಡಾವಣೆಯಲ್ಲಿ ಮಾರಾಟ ಮಾಡುತ್ತಿರುವು ಮಾಹಿತಿ ಬಂದಿತ್ತು.</p><p>ಅಧಿಕಾರಿಗಳು ದಾಳಿ ನಡೆಸಿ ಸೇಂದಿ ವಶಪಡಿಸಿಕೊಂಡು ನಾಶ ಪಡಿಸಿದರು. ದಾಳಿಯಲ್ಲಿ</p><p>ಅಬಕಾರಿ ಉಪ ಆಯುಕ್ತ, ಅಧೀಕ್ಷಕ, ನಿರೀಕ್ಷಕ, ಉಪ ನಿರೀಕ್ಷಕ, ರಾಯಚೂರು ವಿಭಾಗ ಹಾಗೂ ವಲಯ ವಿಭಾಗದ ಅಧಿಕಾರಿಗಳು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು:</strong> ತೆಲಂಗಾಣದಿಂದ ರಾಯಚೂರಿಗೆ ರೈಲಿನ ಮೂಲಕ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಸಿ.ಎಚ್ ಪೌಡರ್ ಮಿಶ್ರಿತ 250 ಲೀಟರ್ ಸೇಂದಿಯನ್ನು ಭಾನುವಾರ ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.</p><p>ಖಚಿತ ಮಾಹಿತಿ ಮೇರೆಗೆ ಅಬಕಾರಿ ಇಲಾಖೆ ಹಾಗೂ ಆರ್ಪಿಎಫ್ ಅಧಿಕಾರಿಗಳ ತಂಡದೊಂದಿಗೆ ರೈಲ್ವೆ ನಿಲ್ದಾಣದಲ್ಲಿ ದಾಳಿ ನಡೆಸಿ ಅಪಾರ ಪ್ರಮಾಣದಲ್ಲಿ ಸಿಎಚ್ ಪೌಡರ್ ಮಿಶ್ರಿತ ಸೇಂದಿಯನ್ನು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.</p><p>ಕ್ಲೋರಲ್ ಹೈಡೇಡ್ ವಿಷಪೂರಿತ ರಾಸಾಯನಿಕ ಮಿಶ್ರಣ ಮಾಡಿ ಕಲಬೆರಿಕೆ ಸೇಂದಿಯನ್ನು ಮಾರಾಟಕ್ಕೆ ತಯಾರಿಸಿಕೊಂಡು ತೆಲಂಗಾಣದ ಕೃಷ್ಣ ಗ್ರಾಮದ ರೈಲ್ವೆ ನಿಲ್ದಾಣ ಮೂಲಕ ಆಗಮಿಸಿ ರಾಯಚೂರು ರೈಲ್ವೆ ನಿಲ್ದಾಣದಿಂದ ನಗರದ ವಿವಿಧ ಬಡಾವಣೆಯಲ್ಲಿ ಮಾರಾಟ ಮಾಡುತ್ತಿರುವು ಮಾಹಿತಿ ಬಂದಿತ್ತು.</p><p>ಅಧಿಕಾರಿಗಳು ದಾಳಿ ನಡೆಸಿ ಸೇಂದಿ ವಶಪಡಿಸಿಕೊಂಡು ನಾಶ ಪಡಿಸಿದರು. ದಾಳಿಯಲ್ಲಿ</p><p>ಅಬಕಾರಿ ಉಪ ಆಯುಕ್ತ, ಅಧೀಕ್ಷಕ, ನಿರೀಕ್ಷಕ, ಉಪ ನಿರೀಕ್ಷಕ, ರಾಯಚೂರು ವಿಭಾಗ ಹಾಗೂ ವಲಯ ವಿಭಾಗದ ಅಧಿಕಾರಿಗಳು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>