ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು ನಗರಸಭೆ: ಈ ಸಲ ಉಳಿತಾಯದ ಬಜೆಟ್‌

2021–22ನೇ ಸಾಲಿನ ಬಜೆಟ್‌ ಮಂಡಿಸಿದ ಇ.ವಿನಯಕುಮಾರ್‌
Last Updated 2 ಜೂನ್ 2021, 15:05 IST
ಅಕ್ಷರ ಗಾತ್ರ

ರಾಯಚೂರು: ನಗರಸಭೆ ಅಧ್ಯಕ್ಷ ಇ.ವಿನಯಕುಮಾರ್‌ ಅವರು 2021–22ನೇ ಸಾಲಿನ ಬಜೆಟ್‌ ಅನ್ನು ಬುಧವಾರ ಮಂಡಿಸಿದ್ದು, ₹27.91 ಲಕ್ಷ ಬಜೆಟ್‌ ಉಳಿತಾಯ ಮಾಡುವುದಕ್ಕೆ ಯೋಜನೆ ಮಾಡಿರುವುದು ವಿಶೇಷ.

ಕೋವಿಡ್‌ ಕಾರಣದಿಂದಾಗಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬಜೆಟ್‌ ಮಂಡನೆಗೆ ವ್ಯವಸ್ಥೆ ಮಾಡಲಾಗಿತ್ತು.
2021–22ನೇ ಸಾಲಿನಲ್ಲಿ ₹59.76 ಕೋಟಿ ಆದಾಯ ಸಂಗ್ರಹವಾದರೆ ಹಾಗೂ ₹57.13 ಕೋಟಿ ವೆಚ್ಚವಾಗಲಿದೆ. ನಗರಸಭೆಯ ವಾಣಿಜ್ಯ ಸಂಕೀರ್ಣಗಳಿಂದ ಬಾಡಿಗೆ ಒಟ್ಟು ₹25 ಲಕ್ಷ ಸಂಗ್ರಹವಾದರೆ, ಕಟ್ಟಡ ಪರವಾನಿಗೆ ಶುಲ್ಕವು ₹20 ಕೋಟಿ ಸಂಗ್ರಹವಾಗಲಿದೆ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷದ ಬಜೆಟ್‌ನಲ್ಲಿ ₹22.50 ಕೋಟಿ ಸಂಗ್ರಹದ ಅಂದಾಜು ಮಾಡಲಾಗಿತ್ತು. ಆದರೆ ವಾಸ್ತವದಲ್ಲಿ ₹15.62 ಕೋಟಿ ಸಂಗ್ರಹವಾಗಿತ್ತು.

ಕಟ್ಟಡ ಅಭಿವೃದ್ಧಿ ಶುಲ್ಕ₹15 ಕೋಟಿ ಹಾಗೂ ಕೊಳಚೆ ಪ್ರದೇಶ ಅಭಿವೃದ್ಧಿ ಕರದ ಮೇಲಿನ ವಸೂಲಾತಿ ₹25 ಲಕ್ಷ ಎಂದು ಅಂದಾಜಿಸಲಾಗಿದೆ. ಉದ್ದಿಮೆಗಳ ಪರವಾನಿಗೆ ಶುಲ್ಕ ₹38 ಲಕ್ಷ, ಎಸ್ಎಫ್‌ಸಿ ಅನುದಾನ ₹1.15 ಕೋಟಿ, ಪ್ರಮಾಣಪತ್ರಗಳ ವಿತರಣೆಯಿಂದ ₹75 ಸಾವಿರ, ತ್ಯಾಜ್ಯ ನಿರ್ವಹಣೆ ಶುಲ್ಕ ₹7 ಲಕ್ಷ, ಕಸಾಯಿಖಾನೆಗಳಿಂದ ₹1.5 ಲಕ್ಷ, ಮಾರುಕಟ್ಟೆ ಬಾಡಿಗೆ ₹16 ಲಕ್ಷ, ನೀರಿನ ಶುಲ್ಕ ₹5 ಕೋಟಿ ಸಂಗ್ರಹವಾಗುವ ಅಂದಾಜು ಮಾಡಲಾಗಿದೆ ಹಾಗೂ ವಿವಿಧ ಪ್ರಕಾರದ ದಂಡದ ಮೂಲಗಳಿಂದ ₹37 ಲಕ್ಷ ಬರಲಿದೆ ಎಂದು ನಿರೀಕ್ಷಿಸಲಾಗಿದೆ.

ಬ್ಯಾಂಕುಗಳಿಂದ ಬಡ್ಡಿ ₹55 ಲಕ್ಷ, ಆಸ್ತಿ ತೆರಿಗೆಯು ₹11.08 ಕೋಟಿ, ಖಾತಾ ಬದಲಾವಣೆಯಿಂದ ₹2.25 ಕೋಟಿ, ಬಡಾವಣೆಗಳ ಆಡಳಿತಾತ್ಮಕ ಅನುಮೋದನೆ ಶುಲ್ಕ ₹25 ಲಕ್ಷ ಹಾಗೂ ಜಾಹೀರಾತುಗಳಿಂದ ₹2.50 ಲಕ್ಷ ಆದಾಯ ಬರಲಿದೆ ಎಂದು ಉಲ್ಲೇಖಿಸಲಾಗಿದೆ.

ವೆಚ್ಚಗಳು: ವೇತನ ಭತ್ಯೆಗಳಿಗಾಗಿ ₹4.93 ಕೋಟಿ, ದಿನಗೂಲಿ ನೌಕರರಿಗೆ ₹8.60 ಕೋಟಿ, ಶವಸಂಸ್ಕಾರಕ್ಕೆ ₹10 ಲಕ್ಷ, ಲೇಖನ ಸಾಮಗ್ರಿಗಳಿಗೆ ₹10 ಲಕ್ಷ, ಪ್ರಯಾಣ ವೆಚ್ಚ ₹5 ಲಕ್ಷ, ಜಾಹೀರಾತು ಪ್ರಸರಣಕ್ಕೆ ₹15 ಲಕ್ಷ, ಕಚೇರಿ ವೆಚ್ಚಗಳು ₹35 ಲಕ್ಷ, ಕಟ್ಟಡಗಳ ನಿರ್ವಹಣೆ ₹1.15 ಕೋಟಿ, ಉದ್ಯಾನವನಗಳ ದುರಸ್ತಿ, ನಿರ್ವಹಣೆಗೆ ₹10 ಲಕ್ಷ, ಸಾರ್ವಜನಿಕ ಶೌಚಾಲಯ ನಿರ್ವಹಣೆ ಮತ್ತು ದುರಸ್ತಿಗೆ ₹10 ಲಕ್ಷ, ಕಂಪ್ಯೂಟರ್‌ ಹೊರಗುತ್ತಿಗೆ ಸಿಬ್ಬಂದಿಗೆ ₹42 ಲಕ್ಷ, ಬ್ಯಾಂಕ್‌ ಶುಲ್ಕ ₹2 ಲಕ್ಷ, ಲೆಕ್ಕಪತ್ರ ಶುಲ್ಕ ₹30 ಲಕ್ಷ, ಸದಸ್ಯರಿಗೆ ಸಭಾ ಭತ್ಯ ₹25 ಲಕ್ಷ, ರಸ್ತೆ ಮತ್ತು ಪಾದಚಾರಿ ಮಾರ್ಗ ದುರಸ್ತಿಗೆ ₹75 ಲಕ್ಷ, ಚರಂಡಿ, ಒಳಚರಂಡಿ ದುರಸ್ತಿ ₹1.15 ಕೋಟಿ, ಔಷಧ ಖರೀದಿ ₹15 ಲಕ್ಷ, ವಿವಿಧ ಕಾರ್ಯಕ್ರಮಗಳ ವೆಚ್ಚ ₹5 ಲಕ್ಷ, ಘನತ್ಯಾಜ್ಯ ನಿರ್ವಹಣೆಗೆ ₹95 ಲಕ್ಷ, ವಾಹನಗಳ ದುರಸ್ತಿಗೆ ₹15 ಲಕ್ಷ, ಸ್ವಚ್ಛ ಭಾರತ ಮಿಷನ್‌ ಯೋಜನೆಯಡಿ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ₹1 ಕೋಟಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಂಗವಿಕಲರ ಕಲ್ಯಾಣಕ್ಕಾಗಿ ₹19 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ನಗರಸಭೆ ಉಪಾಧ್ಯಕ್ಷೆ ನರಸಮ್ಮ ಮಾಡಗಿರಿ, ಪೌರಾಯುಕ್ತ ವೆಂಕಟೇಶಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT