‘ಅತಿಯಾದ ತಾಪಮಾನದಿಂದ ಮೈಯಲ್ಲಿ ಬೆವರು ಸುರಿಯುವುದು ಸಾಮಾನ್ಯವಾಗಿ ಹೆಚ್ಚಾಗುತ್ತಿದೆ. ಇದರಿಂದ ತಲೆಯಲ್ಲಿ, ಕೈಕಾಲುಗಳ ಸಂದಿಗಳಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಅತಿಯಾದ ಬಿಸಿಲಿನಿಂದ ಚರ್ಮರೋಗ ಕಾಯಿಲೆಗಳಿಗೆ ಜನರು ತುತ್ತಾಗುತ್ತಿದ್ದಾರೆ. ಮಕ್ಕಳಲ್ಲಿ ವಾಂತಿಭೇದಿ ಪ್ರಕರಣಗಳು ಕಂಡು ಬರುತ್ತಿವೆ ಹಾಗೂ ಕಿಡ್ನಿಗಳಲ್ಲಿ ಹರಳು ಇರುವವರು ಬೇಸಿಗೆಯಲ್ಲಿ ಅತಿಯಾದ ನೋವು ಸಹಿಸಿಕೊಳ್ಳಲು ಸಾಧ್ಯವಾಗದೆ ಆಸ್ಪತ್ರೆಗೆ ಬರುತ್ತಿದ್ದಾರೆ. ಬರೀ ನಿರ್ಜಲೀಕರಣ ಸಮಸ್ಯೆಯಿದ್ದರೆ, ಸಲಾಯಿನ್ ಮೂಲಕ ಕೂಡಲೇ ನಿಯಂತ್ರಣಕ್ಕೆ ತರಬಹುದು. ಆದರೆ, ಚರ್ಮರೋಗ ಉಲ್ಭಣಿಸಿದರೆ ಬೇಗನೆ ಗುಣಮುಖ ಆಗುವುದಿಲ್ಲ. ನಿರಂತರ ಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ. ರಿಮ್ಸ್ನಲ್ಲಿ ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ರಿಮ್ಸ್ ವೈದ್ಯರು ‘ಪ್ರಜಾವಾಣಿ’ಗೆ ತಿಳಿಸಿದರು.