<p><strong>ರಾಯಚೂರು</strong>: ಸುಬುಧೇಂದ್ರ ತೀರ್ಥರ 13ನೇ ಚಾತುರ್ಮಾಸ್ಯ ಸಮಾರೋಪದ ಪ್ರಯುಕ್ತ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.</p>.<p>ಶ್ರೀಗಳು ಬೆಳಿಗ್ಗೆ ಬ್ರಹ್ಮ ಕರಾರ್ಚಿತ ಮೂಲ ರಾಮದೇವರ ಪೂಜೆ ನೆರವೇರಿಸಿದರು. ನಂತರ ಚಾತುರ್ಮಾಸ್ಯ ದೀಕ್ಷಾ ಸಮಾರೋಪದ ವಿಧಿ ವಿಧಾನಗಳನ್ನು ನೆರವೇರಿಸಿದರು. ಸೀಮೋಲ್ಲಂಘನ ಸಂಪ್ರದಾಯದ ಭಾಗವಾಗಿ ಪ್ರಾಣ ದೇವರು, ಮಂಚಾಲಮ್ಮ, ರಾಯರು, ವದೀಂದ್ರ ತೀರ್ಥರು ಮತ್ತು ಇತರ ಯತಿಗಳ ಬೃಂದಾವನಗಳಿಗೆ ಮಂಗಳಾರತಿ ಮಾಡಿದರು.</p>.<p>ಕೊಂಡಾಪುರ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ತೆರಳುವ ದಾರಿಯಲ್ಲಿ ನೂರಾರು ಭಕ್ತರು, ಮಂತ್ರಾಲಯದ ಸ್ಥಳೀಯರು ಸ್ವಾಮೀಜಿಗೆ ಹೂವಿನ ಮಳೆಗರೆಯುವ ಮೂಲಕ ಗೌರವ ಸಲ್ಲಿಸಿದರು. ನಂತರ ಸ್ವಾಮೀಜಿ ದೇವಾಲಯಕ್ಕೆ ಭೇಟಿ ನೀಡಿ ಮೆರವಣಿಗೆಯಲ್ಲಿ ಮಠಕ್ಕೆ ಮರಳಿದರು.</p>.<p>ಮಠದ ಸಿಬ್ಬಂದಿ, ಭಕ್ತರು, ಶಿಷ್ಯರು ಪುಷ್ಪವೃಷ್ಟಿ ಮತ್ತು ಮಾಲಾರ್ಪಣೆಯೊಂದಿಗೆ ಗುರುವಂದನೆ ಸಲ್ಲಿಸಿದರು. ಸ್ವಾಮೀಜಿ ಅನುಗ್ರಹ ಸಂದೇಶ ಮತ್ತು ಫಲಮಂತ್ರಾಕ್ಷತೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು</strong>: ಸುಬುಧೇಂದ್ರ ತೀರ್ಥರ 13ನೇ ಚಾತುರ್ಮಾಸ್ಯ ಸಮಾರೋಪದ ಪ್ರಯುಕ್ತ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.</p>.<p>ಶ್ರೀಗಳು ಬೆಳಿಗ್ಗೆ ಬ್ರಹ್ಮ ಕರಾರ್ಚಿತ ಮೂಲ ರಾಮದೇವರ ಪೂಜೆ ನೆರವೇರಿಸಿದರು. ನಂತರ ಚಾತುರ್ಮಾಸ್ಯ ದೀಕ್ಷಾ ಸಮಾರೋಪದ ವಿಧಿ ವಿಧಾನಗಳನ್ನು ನೆರವೇರಿಸಿದರು. ಸೀಮೋಲ್ಲಂಘನ ಸಂಪ್ರದಾಯದ ಭಾಗವಾಗಿ ಪ್ರಾಣ ದೇವರು, ಮಂಚಾಲಮ್ಮ, ರಾಯರು, ವದೀಂದ್ರ ತೀರ್ಥರು ಮತ್ತು ಇತರ ಯತಿಗಳ ಬೃಂದಾವನಗಳಿಗೆ ಮಂಗಳಾರತಿ ಮಾಡಿದರು.</p>.<p>ಕೊಂಡಾಪುರ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ತೆರಳುವ ದಾರಿಯಲ್ಲಿ ನೂರಾರು ಭಕ್ತರು, ಮಂತ್ರಾಲಯದ ಸ್ಥಳೀಯರು ಸ್ವಾಮೀಜಿಗೆ ಹೂವಿನ ಮಳೆಗರೆಯುವ ಮೂಲಕ ಗೌರವ ಸಲ್ಲಿಸಿದರು. ನಂತರ ಸ್ವಾಮೀಜಿ ದೇವಾಲಯಕ್ಕೆ ಭೇಟಿ ನೀಡಿ ಮೆರವಣಿಗೆಯಲ್ಲಿ ಮಠಕ್ಕೆ ಮರಳಿದರು.</p>.<p>ಮಠದ ಸಿಬ್ಬಂದಿ, ಭಕ್ತರು, ಶಿಷ್ಯರು ಪುಷ್ಪವೃಷ್ಟಿ ಮತ್ತು ಮಾಲಾರ್ಪಣೆಯೊಂದಿಗೆ ಗುರುವಂದನೆ ಸಲ್ಲಿಸಿದರು. ಸ್ವಾಮೀಜಿ ಅನುಗ್ರಹ ಸಂದೇಶ ಮತ್ತು ಫಲಮಂತ್ರಾಕ್ಷತೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>