ನಗರದ ಎಲ್ಲ ಸರ್ಕಾರಿ ಶಾಲೆಗಳಿಂದ 150ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬಂಡಿ ನಾಗರಾಜು ಕಾರ್ಯಕ್ರಮದ ಜವಾಬ್ದಾರಿ ಹೊತ್ತು ಜೋಡಿ ಎತ್ತುಗಳನ್ನು ಮೆರವಣಿಗೆಗೆ ಕರೆ ತಂದಿದ್ದರು. ಮಲ್ಲೇಶ ಎಂಬುವರು ಮಹಿಷಿ ವೇಷ ಧರಿಸಿದ್ದರು. ಸಿಆರ್ಪಿ ಎಸ್.ರಾಘವೇಂದ್ರಸ್ವಾಮಿ, ಬಾಣಂತಮಾರಮ್ಮ ಸರ್ಕಾರಿ ಶಾಲೆ ಮುಖ್ಯಶಿಕ್ಷಕ ರಾಮು, ಇತರ ಶಿಕ್ಷಕರು ಪಾಲ್ಗೊಂಡಿದ್ದರು.