<p><strong>ರಾಮನಗರ</strong>: ತನ್ನ ವಾಟ್ಸ್ಆ್ಯಪ್ಗೆ ಬಂದ ಎಪಿಕೆ ಫೈಲ್ ಸಂದೇಶ ಕ್ಲಿಕ್ಕಿಸಿ ತನ್ನ ಬ್ಯಾಂಕ್ ಹಾಗೂ ಇತರ ಮಾಹಿತಿಗಳನ್ನು ತುಂಬಿದ ಶಿಕ್ಷಕರೊಬ್ಬರು, ತಮ್ಮ ಬ್ಯಾಂಕ್ ಖಾತೆಯಲ್ಲಿದ್ದ ₹1.91 ಲಕ್ಷ ಕಳೆದುಕೊಂಡಿದ್ದಾರೆ. ಕನಕಪುರ ತಾಲ್ಲೂಕಿನ ಶಾಲೆಯೊಂದರ ಶಿಕ್ಷಕ ಮಹದೇವಸ್ವಾಮಿ ಹಣ ಕಳೆದುಕೊಂಡವರು.</p>.<p>ಭಾರತೀಯ ಸ್ಟೇಟ್ ಬ್ಯಾಂಕ್ನಲ್ಲಿ ಖಾತೆ ಹೊಂದಿರುವ ಮಹದೇವಸ್ವಾಮಿ ವಾಟ್ಸ್ಆ್ಯಪ್ಗೆ ಅವರ ಸಹೋದ್ಯೋಗಿ ಅವರಿಂದ ಎಪಿಕೆ ಫೈಲ್ ಸಂದೇಶ ಬಂದಿತ್ತು. ಅದನ್ನು ತೆರೆದು ನೋಡಿದಾಗ ಎಂಪಿಎನ್, ಡೆಬಿಟ್ ಕಾರ್ಡ್, ಸಿವಿವಿ ನಂಬರ್ ಸೇರಿದಂತೆ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಮಾಹಿತಿಗಳು ತೆರೆದುಕೊಂಡಿವೆ.</p>.<p>ಅಲ್ಲಿರುವ ಮಾಹಿತಿಯನ್ನು ಮಹದೇವಸ್ವಾಮಿ ಅವರು ಭರ್ತಿ ಮಾಡುತ್ತಿದ್ದಂತೆ, ಅವರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ₹1.91 ಲಕ್ಷ ಕಡಿತಗೊಂಡಿದೆ. ಆಗ ಅವರಿಗೆ ತಾನು ಆನ್ಲೈನ್ ವಂಚಕರ ಜಾಲಕ್ಕೆ ಸಿಲುಕಿರುವುದು ಗೊತ್ತಾಗಿದೆ. ಈ ಕುರಿತು, ಮಹದೇವಸ್ವಾಮಿ ಅವರು ರಾಮನಗರ ಸಿಇಎನ್ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.</p>.<p class="Briefhead">ಕಾಪರ್ ವೈರ್ ಕಳ್ಳತನ</p>.<p>ಜಿಲ್ಲೆಯ ಕಗ್ಗಲಿಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪಟ್ಟರೆಡ್ಡಿಪಾಳ್ಯ ಗ್ರಾಮದಲ್ಲಿರುವ ಹಿನಾಯತ್ ಷರೀಪ್ ಎಂಬುವರ ಗುಜರಿ ಅಂಗಡಿಗೆ ನುಗ್ಗಿರುವ ಕಳ್ಳರು, ಸುಮಾರು ₹3.50 ಲಕ್ಷ ಮೌಲ್ಯದ 500 ಕೆ.ಜಿ ಕಾಪರ್ ವೈರ್ ಅನ್ನು ಇತ್ತೀಚೆಗೆ ಕಳ್ಳತನ ಮಾಡಿದ್ದಾರೆ. ರಾತ್ರಿ 9.30ರ ಸುಮಾರಿಗೆ ಅಂಗಡಿಗೆ ಬಂದಿರುವ ಕಳ್ಳರು, ಕೃತ್ಯ ಎಸಗಿದ್ದಾರೆ. ಘಟನೆ ಕುರಿತು ಕಗ್ಗಲಿಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಗರ</strong>: ತನ್ನ ವಾಟ್ಸ್ಆ್ಯಪ್ಗೆ ಬಂದ ಎಪಿಕೆ ಫೈಲ್ ಸಂದೇಶ ಕ್ಲಿಕ್ಕಿಸಿ ತನ್ನ ಬ್ಯಾಂಕ್ ಹಾಗೂ ಇತರ ಮಾಹಿತಿಗಳನ್ನು ತುಂಬಿದ ಶಿಕ್ಷಕರೊಬ್ಬರು, ತಮ್ಮ ಬ್ಯಾಂಕ್ ಖಾತೆಯಲ್ಲಿದ್ದ ₹1.91 ಲಕ್ಷ ಕಳೆದುಕೊಂಡಿದ್ದಾರೆ. ಕನಕಪುರ ತಾಲ್ಲೂಕಿನ ಶಾಲೆಯೊಂದರ ಶಿಕ್ಷಕ ಮಹದೇವಸ್ವಾಮಿ ಹಣ ಕಳೆದುಕೊಂಡವರು.</p>.<p>ಭಾರತೀಯ ಸ್ಟೇಟ್ ಬ್ಯಾಂಕ್ನಲ್ಲಿ ಖಾತೆ ಹೊಂದಿರುವ ಮಹದೇವಸ್ವಾಮಿ ವಾಟ್ಸ್ಆ್ಯಪ್ಗೆ ಅವರ ಸಹೋದ್ಯೋಗಿ ಅವರಿಂದ ಎಪಿಕೆ ಫೈಲ್ ಸಂದೇಶ ಬಂದಿತ್ತು. ಅದನ್ನು ತೆರೆದು ನೋಡಿದಾಗ ಎಂಪಿಎನ್, ಡೆಬಿಟ್ ಕಾರ್ಡ್, ಸಿವಿವಿ ನಂಬರ್ ಸೇರಿದಂತೆ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಮಾಹಿತಿಗಳು ತೆರೆದುಕೊಂಡಿವೆ.</p>.<p>ಅಲ್ಲಿರುವ ಮಾಹಿತಿಯನ್ನು ಮಹದೇವಸ್ವಾಮಿ ಅವರು ಭರ್ತಿ ಮಾಡುತ್ತಿದ್ದಂತೆ, ಅವರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ₹1.91 ಲಕ್ಷ ಕಡಿತಗೊಂಡಿದೆ. ಆಗ ಅವರಿಗೆ ತಾನು ಆನ್ಲೈನ್ ವಂಚಕರ ಜಾಲಕ್ಕೆ ಸಿಲುಕಿರುವುದು ಗೊತ್ತಾಗಿದೆ. ಈ ಕುರಿತು, ಮಹದೇವಸ್ವಾಮಿ ಅವರು ರಾಮನಗರ ಸಿಇಎನ್ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.</p>.<p class="Briefhead">ಕಾಪರ್ ವೈರ್ ಕಳ್ಳತನ</p>.<p>ಜಿಲ್ಲೆಯ ಕಗ್ಗಲಿಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪಟ್ಟರೆಡ್ಡಿಪಾಳ್ಯ ಗ್ರಾಮದಲ್ಲಿರುವ ಹಿನಾಯತ್ ಷರೀಪ್ ಎಂಬುವರ ಗುಜರಿ ಅಂಗಡಿಗೆ ನುಗ್ಗಿರುವ ಕಳ್ಳರು, ಸುಮಾರು ₹3.50 ಲಕ್ಷ ಮೌಲ್ಯದ 500 ಕೆ.ಜಿ ಕಾಪರ್ ವೈರ್ ಅನ್ನು ಇತ್ತೀಚೆಗೆ ಕಳ್ಳತನ ಮಾಡಿದ್ದಾರೆ. ರಾತ್ರಿ 9.30ರ ಸುಮಾರಿಗೆ ಅಂಗಡಿಗೆ ಬಂದಿರುವ ಕಳ್ಳರು, ಕೃತ್ಯ ಎಸಗಿದ್ದಾರೆ. ಘಟನೆ ಕುರಿತು ಕಗ್ಗಲಿಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>