ಶುಕ್ರವಾರ, 25 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಗಡಿ | ಗೋಡೆಯಲ್ಲಿ ಜಿನುಗುವ ನೀರು; ಉದುರುವ ಸಿಮೆಂಟ್ ಚಾವಣಿ

ವರ್ಷಗಳಿಂದ ದುರಸ್ತಿ ಕಾಣದ ವಡ್ಡರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ; ಖಾಸಗಿ ಶಾಲೆಗೆ ಮಕ್ಕಳ ವಲಸೆ
ಸುಧೀಂದ್ರ ಸಿ.ಕೆ.
Published : 21 ಜೂನ್ 2024, 5:56 IST
Last Updated : 21 ಜೂನ್ 2024, 5:56 IST
ಫಾಲೋ ಮಾಡಿ
Comments
ಶಿಥಿಲಾವಸ್ಥೆ ತಲುಪಿ ಬೀಳುವ ಹಂತದಲ್ಲಿರುವ ಮಾಗಡಿ ತಾಲ್ಲೂಕಿನ ಹುಲಿಯೂರು ದುರ್ಗ ಮುಖ್ಯರಸ್ತೆಯಲ್ಲಿರುವ ವಡ್ಡರಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಜಮಖಾನದಲ್ಲಿ ಕುಳಿತು ಪಾಠ ಕೇಳಬೇಕಾದ ಸ್ಥಿತಿ ಇದೆ
ಶಿಥಿಲಾವಸ್ಥೆ ತಲುಪಿ ಬೀಳುವ ಹಂತದಲ್ಲಿರುವ ಮಾಗಡಿ ತಾಲ್ಲೂಕಿನ ಹುಲಿಯೂರು ದುರ್ಗ ಮುಖ್ಯರಸ್ತೆಯಲ್ಲಿರುವ ವಡ್ಡರಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಜಮಖಾನದಲ್ಲಿ ಕುಳಿತು ಪಾಠ ಕೇಳಬೇಕಾದ ಸ್ಥಿತಿ ಇದೆ
ಶಾಲಾ ಕೊಠಡಿಯೊಳಗೆ ಅಲ್ಲಲ್ಲಿ ಕಿತ್ತು ಹೋಗಿರುವ ಚಾವಣಿ
ಶಾಲಾ ಕೊಠಡಿಯೊಳಗೆ ಅಲ್ಲಲ್ಲಿ ಕಿತ್ತು ಹೋಗಿರುವ ಚಾವಣಿ
ಮಾಗಡಿ ತಾಲ್ಲೂಕಿನ ಹುಲಿಯೂರು ದುರ್ಗ ಮುಖ್ಯರಸ್ತೆಯಲ್ಲಿರುವ ವಡ್ಡರಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಛಾವಣಿ ಶಿಥಿಲಗೊಂಡು ಉದುರಿದ್ದು ಕಬ್ಬಿಣಗಳು ಗೋಚರಿಸುತ್ತಿವೆ
ಮಾಗಡಿ ತಾಲ್ಲೂಕಿನ ಹುಲಿಯೂರು ದುರ್ಗ ಮುಖ್ಯರಸ್ತೆಯಲ್ಲಿರುವ ವಡ್ಡರಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಛಾವಣಿ ಶಿಥಿಲಗೊಂಡು ಉದುರಿದ್ದು ಕಬ್ಬಿಣಗಳು ಗೋಚರಿಸುತ್ತಿವೆ
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಿಎಸ್‌ಆರ್‌ ಅನುದಾನದಡಿ ವಡ್ಡರಹಳ್ಳಿ ಶಾಲೆ ಸೇರಿದಂತೆ ತಾಲ್ಲೂಕಿನ 20 ಶಾಲೆಗಳು ಅಭಿವೃದ್ಧಿಗೆ ಆಯ್ಕೆಯಾಗಿದ್ದವು. ನಂತರ ಅನುದಾನ ಏಕಾಏಕಿ ರದ್ದಾಯಿತು. ಈಗ ಹೊಸ ಕಟ್ಟಡ ನಿರ್ಮಾಣ ಅಥವಾ ದುರಸ್ತಿಗೆ ಅನುದಾನ ಕೋರಿ ಇಲಾಖೆಗೆ ವರದಿ ಸಲ್ಲಿಸಲಾಗಿದೆ
– ಶಿವಕುಮಾರ್ ಸಿಆರ್‌ಪಿ ಶಿಕ್ಷಣ ಇಲಾಖೆ ಮಾಗಡಿ
ಶಾಲಾ ಕಟ್ಟಡ ಸುಸ್ಥಿತಿಯಲ್ಲಿಲ್ಲ ಎಂಬ ಕಾರಣಕ್ಕೆ ಬಾಡಿಗೆ ಕಟ್ಟಡಕ್ಕೆ ಶಾಲೆ ಸ್ಥಳಾಂತರಿಸಲಾಗಿತ್ತು. ಆದರೆ ಅಲ್ಲಿಯೂ ಮೂಲಸೌಕರ್ಯ ಕೊರತೆ ಇದ್ದಿದ್ದರಿಂದ ಮತ್ತೆ ಹಳೆ ಕಟ್ಟಡದಲ್ಲೇ ತರಗತಿ ಶುರುವಾಗಿದ್ದು ಮಕ್ಕಳು ಆತಂಕದಲ್ಲೇ ಪಾಠ ಕೇಳಬೇಕಿದೆ
– ವಿದ್ಯಾರ್ಥಿಗಳ ಪೋಷಕರು ವಡೇರಹಳ್ಳಿ
16ರಿಂದ 6ಕ್ಕೆ ಕುಸಿದ ಮಕ್ಕಳ ಸಂಖ್ಯೆ
ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿದ್ದರೂ ದುರಸ್ತಿ ಕಾಣದ ಶಾಲೆಗೆ ಸ್ಥಳೀಯ ಪೋಷಕರು ತಮ್ಮ ಮಕ್ಕಳನ್ನು ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ. ‘ತಮ್ಮ ಮಕ್ಕಳ ಜೀವಕ್ಕೆ ಗ್ಯಾರಂಟಿ ಇಲ್ಲದ ಶಾಲೆಗೆ ನಾವ್ಯಾಕೆ ಮಕ್ಕಳನ್ನು ಕಳಿಸಬೇಕು’ ಎಂದು ಒಬ್ಬೊಬ್ಬರೇ ಪೋಷಕರು ತಮ್ಮ ಮಕ್ಕಳನ್ನು ಅಕ್ಕಪಕ್ಕದ ಖಾಸಗಿ ಮತ್ತು ಸರ್ಕಾರಿ ಶಾಲೆಗಳಿಗೆ ಸೇರಿಸಲಾರಂಭಿಸಿದ್ದಾರೆ. ‘ಒಂದರಿಂದ 5ನೇ ತರಗತಿವರೆಗಿನ ಈ ಶಾಲೆಯಲ್ಲಿ ಕಳೆದ ವರ್ಷ 16 ವಿದ್ಯಾರ್ಥಿಗಳಿದ್ದರು. ಬೀಳುವ ಸ್ಥಿತಿಯಲ್ಲಿರುವ ಕಟ್ಟಡದಿಂದಾಗಿ ಕೆಲ ಪೋಷಕರು ತಮ್ಮ ಮಕ್ಕಳ ವರ್ಗಾವಣೆ ಪತ್ರ ತೆಗೆದುಕೊಂಡು ಬೇರೆಡೆಗೆ ಸೇರಿಸಿದ್ದರಿಂದ ಈ ವರ್ಷ ಕೇವಲ 6 ಮಕ್ಕಳಷ್ಟೇ ಶಾಲೆಯಲ್ಲಿ ಉಳಿದಿದ್ದಾರೆ’ ಎಂದು ಶಾಲೆಯ ಶಿಕ್ಷಕರು ಹೇಳಿದರು.
ಕೈ ಚೆಲ್ಲಿದ ಶಾಸಕರು ಅಧಿಕಾರಿಗಳು
ಶಾಲಾ ಕಟ್ಟಡವನ್ನು ದುರಸ್ತಿ ಮಾಡುವ ಅಥವಾ ಹೊಸ ಕಟ್ಟಡ ನಿರ್ಮಿಸುವ ಕುರಿತು ಸ್ಥಳೀಯ ಶಾಸಕ ಎಚ್‌.ಸಿ. ಬಾಲಕೃಷ್ಣ ಅವರ ಗಮನಕ್ಕೆ ತರಲಾಗಿತ್ತು. ಆದರೆ ಪಂಚಾಯಿತಿಗೊಂದು ಮಾದರಿ ಶಾಲೆ ಆರಂಭ ಮಾಡಲಾಗುತ್ತಿದೆ. ಹಾಗಾಗಿ ಈ ಶಾಲೆ ಸಹ ಮಾದರಿ ಶಾಲೆ ವ್ಯಾಪ್ತಿಗೆ ಬರುವುದರಿಂದ ಹಳೆಯ ಕಟ್ಟಡವನ್ನು ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ ಎಂದು ಶಾಸಕರು ಹೇಳಿದರು. ಕಡೆಗೆ ಗ್ರಾಮ ಪಂಚಾಯಿತಿಯ ಅನುದಾನದಿಂದಾದರೂ ಶಾಲೆ ರಿಪೇರಿಯಾಗಲಿ ಎಂದು ಅನುದಾನಕ್ಕಾಗಿ ಅಧಿಕಾರಿಗಳಿಗೆ ಮನವಿ ಮಾಡಿದೆವು. ಶಾಲೆಗಳಿಗೆ ಅನುದಾನ ಕೊಡಲು ಬರುವುದಿಲ್ಲ ಎಂದು ಅವರೂ ಕೈ ಚೆಲ್ಲಿದರು’ ಎಂದು ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ್ ‘ಪ್ರಜಾವಾಣಿ’ಯೊಂದಿಗೆ ಬೇಸರ ತೋಡಿಕೊಂಡರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT