ವಿಶ್ವಬ್ಯಾಂಕ್ ಹಣಕಾಸು ನೆರವಿನ ಯೋಜನೆಯಡಿ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿತ್ತು. 2004ರವರೆಗೆ ಈ ಕಟ್ಟಡದಲ್ಲಿ ಮೊಟ್ಟೆ ಉತ್ಪಾದನೆ ಕಾರ್ಯ ನಡೆದಿತ್ತು. ಆಂಧ್ರ ಪ್ರದೇಶ, ತಮಿಳುನಾಡು ಮತ್ತು ರಾಜ್ಯದ ವಿವಿಧ ಭಾಗದ ರೈತರಿಗೆ ಬಿತ್ತನೆ ಗೂಡು ಸರಬರಾಜು ಮಾಡಲಾಗುತ್ತಿತ್ತು. ಕ್ರಮೇಣ, ಆಂಧ್ರ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳು ಅಲ್ಲಿಯೇ ರೇಷ್ಮೆ ಬಿತ್ತನೆ ಗೂಡು ಉತ್ಪಾದನೆ ಮಾಡಿಕೊಳ್ಳಲಾರಂಭಿಸಿದ್ದರಿಂದ ಇಲ್ಲಿನ ಬಿತ್ತನೆ ಗೂಡಿಗೆ ಬೇಡಿಕೆ ಕಡಿಮೆಯಾಯಿತು. ಇದೀಗ ರೇಷ್ಮೆ ಬೆಳೆಯುವ ರೈತರ ಸಂಖ್ಯೆಯು ಕಡಿಮೆಯಾಗಿದೆ. ಈಗ ಎಲ್ಲೆಡೆ ಬೈವೋಲ್ಟೆನ್ ಗೂಡು ಬೆಳೆಯುತ್ತಿದ್ದಾರೆ ಎಂದು ತಿಳಿಸಿದರು.