ರಾಮನಗರ: ಟೊಮೆಟೊ ಬೆಲೆ ಕುಸಿತ ಖಂಡಿಸಿ ರೈತರು ಸೋಮವಾರ ಉತ್ಪನ್ನವನ್ನು ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದರು.
ನಗರದ ಎಪಿಎಂಸಿ ಮುಂಭಾಗ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸೇರಿದ ರೈತರು ಕ್ರೇಟ್ ಗಳಲ್ಲಿ ತಂದಿದ್ದ ಟೊಮೆಟೊವನ್ನು ರಸ್ತೆಗೆ ಚೆಲ್ಲಿದರು. ಪ್ರತಿ ಕೆ.ಜಿ.ಗೆ 2 ರೂಪಾಯಿಯಂತೆ ಖರೀದಿ ನಡೆದಿದೆ. ಇದರಿಂದ ಕೂಲಿ ವೆಚ್ಚವೂ ಸಿಗದಾಗಿದೆ. ಸರ್ಕಾರ ಬೆಳೆಗಾರರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಜಿಲ್ಲಾ ಅಧ್ಯಕ್ಷ ಚಂದ್ರಶೇಖರ್, ತಾಲ್ಲೂಕು ಅಧ್ಯಕ್ಷ ಸೀಬೆಕಟ್ಟೆ ಕೃಷ್ಣಪ್ಪ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ವಿಡಿಯೊ ನೋಡಿ:
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.