‘ಮಧ್ಯಾಹ್ನ ಮದುವೆಯಲ್ಲಿ ಅವರೆಕಾಳು, ಪಾಯಸ, ಅನ್ನ, ಸಾಂಬಾರು ಊಟ ಬಡಿಸಲಾಗಿತ್ತು. ಊಟ ಮಾಡಿದ ಕೆಲವರು ಪಾಯಸವನ್ನು ಮನೆಗೆ ತೆಗೆದುಕೊಂಡು ಹೋಗಿ ಕೆಲ ತಾಸಿನ ಬಳಿಕ ಸೇವಿಸಿದ್ದಾರೆ. ಸಂಜೆಯ 6 ಗಂಟೆ ಸುಮಾರಿಗೆ ಕೆಲವರಲ್ಲಿ ವಾಂತಿ ಮತ್ತು ಬೇಧಿ ಕಾಣಿಸಿಕೊಂಡಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಉಮಾ ‘ಪ್ರಜಾವಾಣಿ’ಗೆ ತಿಳಿಸಿದರು.