ದೊಡ್ಡ ಗಾತ್ರದ ಗಜಾನನ ಮೂರ್ತಿ ಪ್ರತಿಷ್ಠಾಪನೆಗೆ ಜಿಲ್ಲಾಡಳಿತವು ತಡೆ ಒಡ್ಡಿದೆ. ಹೀಗಾಗಿ ದೊಡ್ಡ ಮೂರ್ತಿಗಳು ಈ ಬಾರಿ ಎಲ್ಲೂ ಕಾಣಲಿಲ್ಲ. ನಾಲ್ಕೈದು ಅಡಿಯ ಮೂರ್ತಿಗಳಷ್ಟೇ ಕಂಡವು. ಸರಳ ಹಾಗೂ ಸಾಂಪ್ರದಾಯಿಕ ಗಣೇಶೋತ್ಸವಕ್ಕೆ ಈ ಬಾರಿ ಹೆಚ್ಚು ಒತ್ತು ನೀಡಲಾಗಿತ್ತು. ಎಲ್ಲಿಯೂ ಅದ್ದೂರಿತನ ಇರಲಿಲ್ಲ. ಶನಿವಾರವೂ ನಗರದ ಮಾರುಕಟ್ಟೆಗಳಲ್ಲಿ ಮೂರ್ತಿಗಳ ಖರೀದಿ ನಡೆದಿತ್ತು. ಜನರು ಚೌತಿ ಮೂರ್ತಿ ಪ್ರತಿಷ್ಠಾಪನೆಗಾಗಿ ಕುಟುಂಬಸ್ಥರು ಮಾರುಕಟ್ಟೆಗೆ ಧಾವಿಸಿದ್ದರು. ನಂತರದಲ್ಲಿ ಚಿಕ್ಕ, ಪರಿಸರ ಸ್ನೇಹಿ ಮೂರ್ತಿಗಳನ್ನು ಮನೆಗಳ ಒಳ ಹಾಗೂ ಹೊರಗಿನ ಅಂಗಳದಲ್ಲಿ ಪ್ರತಿಷ್ಟಾಪಿಸಿದರು. ಕೆಲವರು ಶನಿವಾರವೇ ಅವುಗಳನ್ನು ವಿಸರ್ಜನೆ ಮಾಡಿದರೆ, ಇನ್ನೂ ಕೆಲವರು ಮೂರು ದಿನಗಳವರೆಗೂ ಹಬ್ಬ ಆಚರಣೆಗೆ ಮುಂದಾಗಿದ್ದರು.