<p><strong>ಹಾರೋಹಳ್ಳಿ</strong>: ತಾಲ್ಲೂಕಿನ ಹೊನ್ನಾಲಗನದೊಡ್ಡಿ ಹಾಲು ಉತ್ಪಾದಕ ಸಹಕಾರ ಸಂಘದ ಆವರಣದಲ್ಲಿ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ನಡೆಯಿತು.</p>.<p>‘ನಮ್ಮ ರಾಜ್ಯದ ಹಾಲಿಗೆ ಹೆಚ್ಚು ಬೇಡಿಕೆಯಿದೆ. ಇಲ್ಲಿನ ಹಸುಗಳು ಹೆಚ್ಚು ಹಾಲು ಉತ್ಪಾದನೆ ಮಾಡುತ್ತಿದ್ದು, ಈ ಹಸುಗಳನ್ನು ಬೇರೆ ರಾಜ್ಯಗಳಿಗೆ ಸಾಗಾಣೆ ಮಾಡಲಾಗುತ್ತಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಹಸುಗಳನ್ನು ಮಾರಾಟ ಮಾಡಬೇಡಿ’ ಎಂದು ಬಮೂಲ್ ನಿರ್ದೇಶಕ ಎಚ್.ಎಸ್.ಹರೀಶ್ ಕುಮಾರ್ ತಿಳಿಸಿದರು.</p>.<p>ಗುಣಮಟ್ಟದ ಹಾಲು ಪೂರೈಸುವ ಮೂಲಕ ಎಲ್ಲರೂ ಸಂಘದ ಏಳಿಗೆಗೆ ಸಹಕರಿಸಿ. ಹಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಬೇಕು. ಜೊತೆಗೆ ಹೈನುಗಾರಿಕೆಯತ್ತ ಹೆಚ್ಚು ಗಮನಹರಿಸಿ ಎಂದರು.</p>.<p>ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾಗರಾಜು ಮಾತನಾಡಿ, ಸಂಘವು 7ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಮಾಹಿತಿ ನೀಡಿದರು.</p>.<p>ವಿವಿಧ ಗ್ರಾಮಗಳಲ್ಲಿ ಮೃತಪಟ್ಟ ರಾಸುಗಳಿಗೆ ಸುಮಾರು ₹10 ಲಕ್ಷ ಪರಿಹಾರ ಧನ ವಿತರಿಸಲಾಯಿತು.</p>.<p>ಉಪ ವ್ಯವಸ್ಥಾಪಕ ರಾಕೇಶ್ ಅಗಡಿ, ವಿಸ್ತರಣಾಧಿಕಾರಿ ಕುಮಾರ್, ಬಸವರಾಜು.ಎಂ, ಶೋಕ್ ರಾಜೇ ಅರಸ್, ಪುಟ್ಟಸ್ವಾಮಿ, ಮೋಟಯ್ಯ, ಎಚ್.ಕೆ.ರಾಮಯ್ಯ, ಎಚ್.ಎಸ್.ರಾಜು, ಮಹಾಲಿಂಗಯ್ಯ, ಕೆಂಪಮ್ಮ, ಸುಜಾತ, ನೇತ್ರ, ಹನುಮಮ್ಮ ಸೇರಿದಂತೆ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾರೋಹಳ್ಳಿ</strong>: ತಾಲ್ಲೂಕಿನ ಹೊನ್ನಾಲಗನದೊಡ್ಡಿ ಹಾಲು ಉತ್ಪಾದಕ ಸಹಕಾರ ಸಂಘದ ಆವರಣದಲ್ಲಿ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ನಡೆಯಿತು.</p>.<p>‘ನಮ್ಮ ರಾಜ್ಯದ ಹಾಲಿಗೆ ಹೆಚ್ಚು ಬೇಡಿಕೆಯಿದೆ. ಇಲ್ಲಿನ ಹಸುಗಳು ಹೆಚ್ಚು ಹಾಲು ಉತ್ಪಾದನೆ ಮಾಡುತ್ತಿದ್ದು, ಈ ಹಸುಗಳನ್ನು ಬೇರೆ ರಾಜ್ಯಗಳಿಗೆ ಸಾಗಾಣೆ ಮಾಡಲಾಗುತ್ತಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಹಸುಗಳನ್ನು ಮಾರಾಟ ಮಾಡಬೇಡಿ’ ಎಂದು ಬಮೂಲ್ ನಿರ್ದೇಶಕ ಎಚ್.ಎಸ್.ಹರೀಶ್ ಕುಮಾರ್ ತಿಳಿಸಿದರು.</p>.<p>ಗುಣಮಟ್ಟದ ಹಾಲು ಪೂರೈಸುವ ಮೂಲಕ ಎಲ್ಲರೂ ಸಂಘದ ಏಳಿಗೆಗೆ ಸಹಕರಿಸಿ. ಹಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಬೇಕು. ಜೊತೆಗೆ ಹೈನುಗಾರಿಕೆಯತ್ತ ಹೆಚ್ಚು ಗಮನಹರಿಸಿ ಎಂದರು.</p>.<p>ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾಗರಾಜು ಮಾತನಾಡಿ, ಸಂಘವು 7ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಮಾಹಿತಿ ನೀಡಿದರು.</p>.<p>ವಿವಿಧ ಗ್ರಾಮಗಳಲ್ಲಿ ಮೃತಪಟ್ಟ ರಾಸುಗಳಿಗೆ ಸುಮಾರು ₹10 ಲಕ್ಷ ಪರಿಹಾರ ಧನ ವಿತರಿಸಲಾಯಿತು.</p>.<p>ಉಪ ವ್ಯವಸ್ಥಾಪಕ ರಾಕೇಶ್ ಅಗಡಿ, ವಿಸ್ತರಣಾಧಿಕಾರಿ ಕುಮಾರ್, ಬಸವರಾಜು.ಎಂ, ಶೋಕ್ ರಾಜೇ ಅರಸ್, ಪುಟ್ಟಸ್ವಾಮಿ, ಮೋಟಯ್ಯ, ಎಚ್.ಕೆ.ರಾಮಯ್ಯ, ಎಚ್.ಎಸ್.ರಾಜು, ಮಹಾಲಿಂಗಯ್ಯ, ಕೆಂಪಮ್ಮ, ಸುಜಾತ, ನೇತ್ರ, ಹನುಮಮ್ಮ ಸೇರಿದಂತೆ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>