<p><strong>ರಾಮನಗರ</strong>:‘ಗ್ಯಾರಂಟಿ ಯೋಜನೆಯಡಿ ಸರ್ಕಾರ ₹2ಸಾವಿರ ಕೊಟ್ಟರೂ ಜನ ಯಾಕೆ ಮೈಕ್ರೊ ಫೈನಾನ್ಸ್ನಲ್ಲಿ ಸಾಲ ಮಾಡುತ್ತಿದ್ದಾರೆ? ನಾನು ಮುಖ್ಯಮಂತ್ರಿಯಾಗಿದ್ದಾಗ ಫೈನಾನ್ಸ್ ಹಾವಳಿ ತಡೆಗೆ ಒಂದು ಕಾನೂನು ತಂದಿದ್ದೆ. ಅದು ಏನಾಯಿತು?’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದರು.</p>.<p>ತಾಲ್ಲೂಕಿನ ದಾಸೇಗೌಡನದೊಡ್ಡಿಯಲ್ಲಿ ಶುಕ್ರವಾರ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜಿಲ್ಲೆಯಲ್ಲಿರುವ ಮೈಕ್ರೊ ಫೈನಾನ್ಸ್ ಹಾವಳಿ ವಿಷಯವನ್ನು ಸರ್ಕಾರ ಗಮನಿಸಬೇಕಲ್ಲವೇ? ಉಸ್ತುವಾರಿ ಸಚಿವರು ನೋಡಬೇಕಲ್ವಾ? ಈ ಹಾವಳಿ ಕೇವಲ ರಾಮನಗರವಷ್ಟೇ ಅಲ್ಲದೆ, ರಾಜ್ಯದ ಹಲವೆಡೆ ವ್ಯಾಪಿಸಿದೆ ಎಂದರು.</p>.<p>‘ನಾನು ಮುಖ್ಯಮಂತ್ರಿಯಾಗಿದ್ದಾಗ ಮೈಕ್ರೊ ಫೈನಾನ್ಸ್ಗೆ ಕಡಿವಾಣ ಹಾಕಲು ಮಸೂದೆ ಪಾಸ್ ಮಾಡಿ ಕಾನೂನು ಸಹ ಜಾರಿಗೆ ತಂದಿದ್ದೆ. ಅಂದಿನ ಸಹಕಾರ ಸಚಿವರನ್ನು ಕೇರಳಕ್ಕೆ ಕಳುಹಿಸಿ ಈ ಬಗ್ಗೆ ಅಧ್ಯಯನ ಮಾಡಿಸಿದ್ದೆ. ಅಲ್ಲಿ ಮೈಕ್ರೊ ಫೈನಾನ್ಸ್ ನಿಯಂತ್ರಣಕ್ಕೆ ಒಂದು ಆಯೋಗವಿದೆ. ಅಂತಹ ಒಂದು ಆಯೋಗವನ್ನು ಇಲ್ಲೂ ಸ್ಥಾಪಿಸಿ ಸಾಲ ಮರುಪಾವತಿ ಮಾಡಲಾಗದವರಿಗೆ ಕಿರುಕುಳ ತಪ್ಪಿಸಿ ಅನುಕೂಲ ಮಾಡಿಕೊಡಲು ಪ್ರಯತ್ನಿಸಿದ್ದೆ’ ಎಂದು ಹೇಳಿದರು.</p>.<p>ಮೈಕ್ರೊ ಫೈನಾನ್ಸ್ ಕಿರುಕುಳ ಕಾರಣಕ್ಕೆ ಈಗಾಗಲೇ ರಾಮನಗರದಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಮನಗರ ಉದ್ಧಾರ ಮಾಡ್ತೀವಿ ಎನ್ನುತ್ತಿದ್ದವರು ಯಾರಾದರೂ ಹೋಗಿ ಅವರ ಸಮಸ್ಯೆ ಕೇಳಿದ್ದೀರಾ? ಯಾವ ಮಂತ್ರಿಯಾದ್ರೂ ಬಂದಿದ್ದಾರಾ. ಇದನ್ನ ಜನ ಅರ್ಥ ಮಾಡಿಕೊಳ್ಳಬೇಕು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಗರ</strong>:‘ಗ್ಯಾರಂಟಿ ಯೋಜನೆಯಡಿ ಸರ್ಕಾರ ₹2ಸಾವಿರ ಕೊಟ್ಟರೂ ಜನ ಯಾಕೆ ಮೈಕ್ರೊ ಫೈನಾನ್ಸ್ನಲ್ಲಿ ಸಾಲ ಮಾಡುತ್ತಿದ್ದಾರೆ? ನಾನು ಮುಖ್ಯಮಂತ್ರಿಯಾಗಿದ್ದಾಗ ಫೈನಾನ್ಸ್ ಹಾವಳಿ ತಡೆಗೆ ಒಂದು ಕಾನೂನು ತಂದಿದ್ದೆ. ಅದು ಏನಾಯಿತು?’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದರು.</p>.<p>ತಾಲ್ಲೂಕಿನ ದಾಸೇಗೌಡನದೊಡ್ಡಿಯಲ್ಲಿ ಶುಕ್ರವಾರ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜಿಲ್ಲೆಯಲ್ಲಿರುವ ಮೈಕ್ರೊ ಫೈನಾನ್ಸ್ ಹಾವಳಿ ವಿಷಯವನ್ನು ಸರ್ಕಾರ ಗಮನಿಸಬೇಕಲ್ಲವೇ? ಉಸ್ತುವಾರಿ ಸಚಿವರು ನೋಡಬೇಕಲ್ವಾ? ಈ ಹಾವಳಿ ಕೇವಲ ರಾಮನಗರವಷ್ಟೇ ಅಲ್ಲದೆ, ರಾಜ್ಯದ ಹಲವೆಡೆ ವ್ಯಾಪಿಸಿದೆ ಎಂದರು.</p>.<p>‘ನಾನು ಮುಖ್ಯಮಂತ್ರಿಯಾಗಿದ್ದಾಗ ಮೈಕ್ರೊ ಫೈನಾನ್ಸ್ಗೆ ಕಡಿವಾಣ ಹಾಕಲು ಮಸೂದೆ ಪಾಸ್ ಮಾಡಿ ಕಾನೂನು ಸಹ ಜಾರಿಗೆ ತಂದಿದ್ದೆ. ಅಂದಿನ ಸಹಕಾರ ಸಚಿವರನ್ನು ಕೇರಳಕ್ಕೆ ಕಳುಹಿಸಿ ಈ ಬಗ್ಗೆ ಅಧ್ಯಯನ ಮಾಡಿಸಿದ್ದೆ. ಅಲ್ಲಿ ಮೈಕ್ರೊ ಫೈನಾನ್ಸ್ ನಿಯಂತ್ರಣಕ್ಕೆ ಒಂದು ಆಯೋಗವಿದೆ. ಅಂತಹ ಒಂದು ಆಯೋಗವನ್ನು ಇಲ್ಲೂ ಸ್ಥಾಪಿಸಿ ಸಾಲ ಮರುಪಾವತಿ ಮಾಡಲಾಗದವರಿಗೆ ಕಿರುಕುಳ ತಪ್ಪಿಸಿ ಅನುಕೂಲ ಮಾಡಿಕೊಡಲು ಪ್ರಯತ್ನಿಸಿದ್ದೆ’ ಎಂದು ಹೇಳಿದರು.</p>.<p>ಮೈಕ್ರೊ ಫೈನಾನ್ಸ್ ಕಿರುಕುಳ ಕಾರಣಕ್ಕೆ ಈಗಾಗಲೇ ರಾಮನಗರದಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಮನಗರ ಉದ್ಧಾರ ಮಾಡ್ತೀವಿ ಎನ್ನುತ್ತಿದ್ದವರು ಯಾರಾದರೂ ಹೋಗಿ ಅವರ ಸಮಸ್ಯೆ ಕೇಳಿದ್ದೀರಾ? ಯಾವ ಮಂತ್ರಿಯಾದ್ರೂ ಬಂದಿದ್ದಾರಾ. ಇದನ್ನ ಜನ ಅರ್ಥ ಮಾಡಿಕೊಳ್ಳಬೇಕು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>