ಜಗ್ಗೇಶ್ರಿಗೆ ದರ್ಶನ್ ಅಭಿಮಾನಿಗಳಿಂದ ಘೇರಾವ್ ಕುರಿತು ಮಾತನಾಡಿದ ಸುದೀಪ್ ‘ಒಬ್ಬ ಕಲಾವಿದನಿಗೆ ನಾಡಿನಾದ್ಯಂತ ಸಾವಿರಾರು ಅಭಿಮಾನಿಗಳು ಇದ್ದಾರೆ. ನೀವು ಆ ಕಲಾವಿದನಿಗೆ ಬಯ್ಯಲು ಬಂದಾಗ ಅವನೊಬ್ಬನೇ ಇರಬಹುದು. ಯಾವುದೇ ವ್ಯಕ್ತಿಯಿಂದ ತಪ್ಪಾದರೂ ಅದರ ವಿರುದ್ಧ ಭಾವೋದ್ವೇಗಕ್ಕೆ ಒಳಗಾಗಿ ಪ್ರತಿಕ್ರಿಯಿಸಬೇಡಿ. ಸಮಾಧಾನವಾಗಿ ಕುಳಿತು ಆ ಬಗ್ಗೆ ವಿಚಾರ ಮಾಡಿ ನಂತರ ತೀರ್ಮಾನಕ್ಕೆ ಬನ್ನಿ’ ಎಂದು ಸಂಘಟನೆಗಳ ಸದಸ್ಯರಿಗೆ ಸಲಹೆ ನೀಡಿದರು.