<p><strong>ಕುದೂರು</strong>: ಹಳೆ ದ್ವೇಷದ ಹಿನ್ನೆಲೆಯಲ್ಲಿ ಇಲ್ಲಿಯ ಆದಿತ್ಯ ಟಾಕೀಸ್ ಸಮೀಪ ಬುಧವಾರ ರಾತ್ರಿ ಸ್ಥಳೀಯ ನಿವಾಸಿ ಸಾದಿಕ್ ಅಲಿಯಾಸ್ ಚೋಟು ಮೇಲೆ ಮಾರಕಾಸ್ತ್ರಗಳಿಂದ ಭೀಕರವಾಗಿ ಹಲ್ಲೆ ನಡೆಸಲಾಗಿದೆ.</p>.<p>ರಿಯಲ್ ಎಸ್ಟೇಟ್ ಕೆಲಸ ಮಾಡಿಕೊಂಡಿದ್ದ ಸಾದಿಕ್ ಕೆಲ ವರ್ಷದ ಹಿಂದೆ ವ್ಯವಹಾರ ಪಾಲುದಾರ ಹಂಚಿಬಸವನಪಾಳ್ಯದ ಆಲೀಮ್ ಅಲಿಯಾಸ್ ಮೂಸ ಎಂಬುವರೊಂದಿಗೆ ಗಲಾಟೆ ಮಾಡಿಕೊಂಡಿದ್ದರು.</p>.<p>ಬುಧವಾರ ರಾತ್ರಿ ಟಾಕೀಸ್ ಹತ್ತಿರ ಸೈಯದ್ ಇಬ್ರಾಹಿಂ (ಆಡೂಲ್) ಜೊತೆ ಕುಳಿತಿದ್ದ ಸಾದಿಕ್ ಮೇಲೆ ಕಾರಿನಲ್ಲಿ ಬಂದ ಆಲೀಮ್, ಆಸೀಫ್ ಮತ್ತು ತಂಡ ಮಾರಕಾಸ್ತ್ರಗಳಿಂದ ದಾಳಿ ನಡೆಸಿದರು. </p>.<p>ಆಡೂಲ್ ಸ್ಥಳದಿಂದ ಓಡಿ ಹೋಗಿದ್ದಾನೆ. ಹರ್ಷದ್ ಮತ್ತು ಸಾಹಿಲ್ ಎಂಬುವರು ಜೋರಾಗಿ ಕೂಗಿಕೊಂಡಾಗ ಜನ ಸೇರಿಸಿದರು. ಆಲಿಮ್ ಮತ್ತು ತಂಡ ಸ್ಥಳದಿಂದ ಪರಾರಿಯಾದರು.</p>.<p>ತೀವ್ರವಾಗಿ ಗಾಯಗೊಂಡ ಸಾದಿಕ್ ಅವರನ್ನು ಸ್ಥಳೀಯರು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಕುದೂರು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ. ಕುದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುದೂರು</strong>: ಹಳೆ ದ್ವೇಷದ ಹಿನ್ನೆಲೆಯಲ್ಲಿ ಇಲ್ಲಿಯ ಆದಿತ್ಯ ಟಾಕೀಸ್ ಸಮೀಪ ಬುಧವಾರ ರಾತ್ರಿ ಸ್ಥಳೀಯ ನಿವಾಸಿ ಸಾದಿಕ್ ಅಲಿಯಾಸ್ ಚೋಟು ಮೇಲೆ ಮಾರಕಾಸ್ತ್ರಗಳಿಂದ ಭೀಕರವಾಗಿ ಹಲ್ಲೆ ನಡೆಸಲಾಗಿದೆ.</p>.<p>ರಿಯಲ್ ಎಸ್ಟೇಟ್ ಕೆಲಸ ಮಾಡಿಕೊಂಡಿದ್ದ ಸಾದಿಕ್ ಕೆಲ ವರ್ಷದ ಹಿಂದೆ ವ್ಯವಹಾರ ಪಾಲುದಾರ ಹಂಚಿಬಸವನಪಾಳ್ಯದ ಆಲೀಮ್ ಅಲಿಯಾಸ್ ಮೂಸ ಎಂಬುವರೊಂದಿಗೆ ಗಲಾಟೆ ಮಾಡಿಕೊಂಡಿದ್ದರು.</p>.<p>ಬುಧವಾರ ರಾತ್ರಿ ಟಾಕೀಸ್ ಹತ್ತಿರ ಸೈಯದ್ ಇಬ್ರಾಹಿಂ (ಆಡೂಲ್) ಜೊತೆ ಕುಳಿತಿದ್ದ ಸಾದಿಕ್ ಮೇಲೆ ಕಾರಿನಲ್ಲಿ ಬಂದ ಆಲೀಮ್, ಆಸೀಫ್ ಮತ್ತು ತಂಡ ಮಾರಕಾಸ್ತ್ರಗಳಿಂದ ದಾಳಿ ನಡೆಸಿದರು. </p>.<p>ಆಡೂಲ್ ಸ್ಥಳದಿಂದ ಓಡಿ ಹೋಗಿದ್ದಾನೆ. ಹರ್ಷದ್ ಮತ್ತು ಸಾಹಿಲ್ ಎಂಬುವರು ಜೋರಾಗಿ ಕೂಗಿಕೊಂಡಾಗ ಜನ ಸೇರಿಸಿದರು. ಆಲಿಮ್ ಮತ್ತು ತಂಡ ಸ್ಥಳದಿಂದ ಪರಾರಿಯಾದರು.</p>.<p>ತೀವ್ರವಾಗಿ ಗಾಯಗೊಂಡ ಸಾದಿಕ್ ಅವರನ್ನು ಸ್ಥಳೀಯರು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಕುದೂರು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ. ಕುದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>