<p><strong>ಚನ್ನಪಟ್ಟಣ:</strong> ಮಾನವೀಯ ಮೌಲ್ಯಗಳ ಮಹಾಪರ್ವವಾಗಿರುವ ‘ಕುಮಾರವ್ಯಾಸ ಭಾರತ’ ಕಾವ್ಯವನ್ನು ಗಮಕ ವಾಚನದ ಮೂಲಕ ಸಾಮಾನ್ಯ ಜನರಿಗೆ ತಲುಪಿಸಬೇಕಿದೆ ಎಂದು ಸಂಸ್ಕೃತಿ ಚಿಂತಕಿ ವಿನೋದಮ್ಮ ಅಭಿಪ್ರಾಯಪಟ್ಟರು.</p>.<p>ನಗರದ ಕುವೆಂಪುನಗರದಲ್ಲಿ ಬೊಂಬೆನಾಡು ಗಮಕ ಪರಂಪರಾ ಸಂಸ್ಕೃತಿ ಟ್ರಸ್ಟ್ನಿಂದ ಈಚೆಗೆ ನಡೆದ ಕುಮಾರವ್ಯಾಸ ಭಾರತದ ‘ವಿರಾಟ ಪರ್ವ’ ಸಂಧಿ ಭಾಗದ ಗಮಕವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.</p>.<p>ಕುಮಾರವ್ಯಾಸನ ‘ಕರ್ಣಾಟ ಭಾರತ ಕಥಾಮಂಜರಿ’ ಹಾಡುಗಬ್ಬ ಹಾಗೂ ಕೇಳುಗಬ್ಬದಲ್ಲಿ ರಚನೆಯಾಗಿದೆ. ಮಾನವ ಸಹಜ ಗುಣದೋಷಗಳಿಂದ ಕೂಡಿದ ಪಾತ್ರಗಳು ಜನಸಾಮಾನ್ಯರಿಗೆ ಹತ್ತಿರವಾಗಿವೆ. ಇಂತಹ ಕೃತಿಗಳ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸುವುದು ಅವಶ್ಯಕ ಎಂದರು.</p>.<p>ಟ್ರಸ್ಟ್ ಅಧ್ಯಕ್ಷ ಪುಟ್ಟಸ್ವಾಮಿಗೌಡ ಮಾತನಾಡಿ, ಕುಮಾರವ್ಯಾಸನ ಕಾವ್ಯ ಕಲಿತವರ ಪಾಲಿಗೆ ಕಲ್ಪತರು. ಕಲಿಯದವರ ಪಾಲಿಗೆ ಕಾಮಧೇನು. ಗಮಕವಾಚನ ಮತ್ತು ವ್ಯಾಖ್ಯಾನವಾದ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುವ ಮೂಲಕ ಪ್ರತಿ ಮನೆಗೆ ಕುಮಾರವ್ಯಾಸಭಾರತವನ್ನು ಕೊಂಡೊಯ್ಯಲಾಗುವುದು ಎಂದರು.</p>.<p>ಟ್ರಸ್ಟ್ ಕಾರ್ಯದರ್ಶಿ ವಸಂತ ಕುಮಾರ್ ಮಾತನಾಡಿದರು. ನಿವೃತ್ತ ಉಪನ್ಯಾಸಕ ಪುಟ್ಟಸ್ವಾಮಿಗೌಡ ವಿರಾಟಪರ್ವ ಸಂಧಿಯ ಪದ್ಯಭಾಗಗಳನ್ನು ವಾಚಿಸಿದರು. ಶಿಕ್ಷಣ ಸಂಯೋಜಕ ಯೋಗೇಶ್ ಚಕ್ಕೆರೆ ವ್ಯಾಖ್ಯಾನ ನೀಡಿದರು.</p>.<p>ಟ್ರಸ್ಟ್ ಸಂಚಾಲಕ ಸಿ.ಕೆ. ಯೋಗಾನಂದ, ಮಮತಾ, ಕರಿಯಪ್ಪ, ರವಿಕುಮಾರ್ ಗೌಡ, ವಿ.ಟಿ.ರಮೇಶ್, ಬಸವರಾಜು, ಆಶಾಲತಾ, ನಿವೃತ್ತ ಸಿಡಿಪಿಒ ಪುಟ್ಟಸ್ವಾಮಿ, ಟಿ.ಎನ್. ದೇವರಾಜ್, ಎಂ.ಎನ್. ಕೃಷ್ಣಕುಮಾರ್, ಗುರುಮಾದಯ್ಯ, ಕೂರಣಗೆರೆ ಕೃಷ್ಣಪ್ಪ, ಬೆಸ್ಕಾಂ ಶಿವಲಿಂಗಯ್ಯ, ಧರಣೀಶ್ ರಾಂಪುರ, ಪದ್ಮಾವತಿ ವೆಂಕಟಾಚಲ, ಧನಂಜಯ, ರಾಮಚಂದ್ರ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನಪಟ್ಟಣ:</strong> ಮಾನವೀಯ ಮೌಲ್ಯಗಳ ಮಹಾಪರ್ವವಾಗಿರುವ ‘ಕುಮಾರವ್ಯಾಸ ಭಾರತ’ ಕಾವ್ಯವನ್ನು ಗಮಕ ವಾಚನದ ಮೂಲಕ ಸಾಮಾನ್ಯ ಜನರಿಗೆ ತಲುಪಿಸಬೇಕಿದೆ ಎಂದು ಸಂಸ್ಕೃತಿ ಚಿಂತಕಿ ವಿನೋದಮ್ಮ ಅಭಿಪ್ರಾಯಪಟ್ಟರು.</p>.<p>ನಗರದ ಕುವೆಂಪುನಗರದಲ್ಲಿ ಬೊಂಬೆನಾಡು ಗಮಕ ಪರಂಪರಾ ಸಂಸ್ಕೃತಿ ಟ್ರಸ್ಟ್ನಿಂದ ಈಚೆಗೆ ನಡೆದ ಕುಮಾರವ್ಯಾಸ ಭಾರತದ ‘ವಿರಾಟ ಪರ್ವ’ ಸಂಧಿ ಭಾಗದ ಗಮಕವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.</p>.<p>ಕುಮಾರವ್ಯಾಸನ ‘ಕರ್ಣಾಟ ಭಾರತ ಕಥಾಮಂಜರಿ’ ಹಾಡುಗಬ್ಬ ಹಾಗೂ ಕೇಳುಗಬ್ಬದಲ್ಲಿ ರಚನೆಯಾಗಿದೆ. ಮಾನವ ಸಹಜ ಗುಣದೋಷಗಳಿಂದ ಕೂಡಿದ ಪಾತ್ರಗಳು ಜನಸಾಮಾನ್ಯರಿಗೆ ಹತ್ತಿರವಾಗಿವೆ. ಇಂತಹ ಕೃತಿಗಳ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸುವುದು ಅವಶ್ಯಕ ಎಂದರು.</p>.<p>ಟ್ರಸ್ಟ್ ಅಧ್ಯಕ್ಷ ಪುಟ್ಟಸ್ವಾಮಿಗೌಡ ಮಾತನಾಡಿ, ಕುಮಾರವ್ಯಾಸನ ಕಾವ್ಯ ಕಲಿತವರ ಪಾಲಿಗೆ ಕಲ್ಪತರು. ಕಲಿಯದವರ ಪಾಲಿಗೆ ಕಾಮಧೇನು. ಗಮಕವಾಚನ ಮತ್ತು ವ್ಯಾಖ್ಯಾನವಾದ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುವ ಮೂಲಕ ಪ್ರತಿ ಮನೆಗೆ ಕುಮಾರವ್ಯಾಸಭಾರತವನ್ನು ಕೊಂಡೊಯ್ಯಲಾಗುವುದು ಎಂದರು.</p>.<p>ಟ್ರಸ್ಟ್ ಕಾರ್ಯದರ್ಶಿ ವಸಂತ ಕುಮಾರ್ ಮಾತನಾಡಿದರು. ನಿವೃತ್ತ ಉಪನ್ಯಾಸಕ ಪುಟ್ಟಸ್ವಾಮಿಗೌಡ ವಿರಾಟಪರ್ವ ಸಂಧಿಯ ಪದ್ಯಭಾಗಗಳನ್ನು ವಾಚಿಸಿದರು. ಶಿಕ್ಷಣ ಸಂಯೋಜಕ ಯೋಗೇಶ್ ಚಕ್ಕೆರೆ ವ್ಯಾಖ್ಯಾನ ನೀಡಿದರು.</p>.<p>ಟ್ರಸ್ಟ್ ಸಂಚಾಲಕ ಸಿ.ಕೆ. ಯೋಗಾನಂದ, ಮಮತಾ, ಕರಿಯಪ್ಪ, ರವಿಕುಮಾರ್ ಗೌಡ, ವಿ.ಟಿ.ರಮೇಶ್, ಬಸವರಾಜು, ಆಶಾಲತಾ, ನಿವೃತ್ತ ಸಿಡಿಪಿಒ ಪುಟ್ಟಸ್ವಾಮಿ, ಟಿ.ಎನ್. ದೇವರಾಜ್, ಎಂ.ಎನ್. ಕೃಷ್ಣಕುಮಾರ್, ಗುರುಮಾದಯ್ಯ, ಕೂರಣಗೆರೆ ಕೃಷ್ಣಪ್ಪ, ಬೆಸ್ಕಾಂ ಶಿವಲಿಂಗಯ್ಯ, ಧರಣೀಶ್ ರಾಂಪುರ, ಪದ್ಮಾವತಿ ವೆಂಕಟಾಚಲ, ಧನಂಜಯ, ರಾಮಚಂದ್ರ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>