ಚನ್ನಪಟ್ಟಣ: ತಾಲ್ಲೂಕಿನ ಶ್ಯಾನುಭೋಗನಹಳ್ಳಿಯಲ್ಲಿ ಪ್ರತಿನಿತ್ಯ 2500 ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಆದರೆ, ಗ್ರಾಮದ ಯುವಕನೊಬ್ಬನಿಗೆ ಕೊರೊನಾ ವೈರಸ್ ಪತ್ತೆಯಾದ ನಂತರ ಈ ಹಾಲನ್ನು ರೈತರು ಪ್ರತಿದಿನ ನೆಲಕ್ಕೆ ಚೆಲ್ಲುವಂತಾಗಿದೆ.
ಗ್ರಾಮದ ಯುವಕನಿಗೆ ಕೊರೊನಾ ಪಾಸಿಟಿವ್ ಬಂದ ನಂತರ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಜಿಲ್ಲಾಡಳಿತದ ಆದೇಶದಂತೆ ಮುಚ್ಚಲಾಗಿದೆ. ಗ್ರಾಮದಲ್ಲಿ ಉತ್ಪಾದನೆಯಾಗುವ ಹಾಲು ಕೇಳುವವರಿಲ್ಲದೆ ರೈತರು ಗಿಡಗಳಿಗೆ, ಬಾವಿಗೆ, ಹುತ್ತಗಳಿಗೆ ಹಾಕುವಂತಾಗಿದೆ.