<p><strong>ಬಿಡದಿ (ರಾಮನಗರ):</strong> ‘ನೇರವಾಗಿ ಮತ್ತು ನಿಷ್ಠುರವಾಗಿ ಮಾತನಾಡುವವರು ಯಾವ ಪಕ್ಷದಲ್ಲೂ ಉಳಿಯಲ್ಲ. ಬಸನಗೌಡ ಪಾಟೀಲ ಯತ್ನಾಳ ಇಲ್ಲದಿದ್ದರೆ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಾಗುವುದಿಲ್ಲ. ಉಚ್ಛಾಟನೆ ಮೂಲಕ ಅವರಿಗೆ ಒಂದು ಎಚ್ಚರಿಕೆ ಕೊಟ್ಟಿದ್ದಾರಷ್ಟೆ’ ಎಂದು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದರು.</p> <p>ಯತ್ನಾಳ ಉಚ್ಛಾಟನೆ ಕುರಿತು ಪಟ್ಟಣದಲ್ಲಿ ಗುರುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಯತ್ನಾಳ ಅವರಿಗೆ ಉಚ್ಛಾಟನೆ ಹೊಸದಲ್ಲ. ಎರಡನೇ ಸಲ ಅವರು ಉಚ್ಛಾಟನೆಯಾಗಿದ್ದಾರೆ. ಬಿಜೆಪಿಗೆ ಶಕ್ತಿ ಇದ್ದರೆ, ಅವರನ್ನು ಶಾಶ್ವತವಾಗಿ ಪಕ್ಷದಿಂದ ವಜಾ ಮಾಡಲಿ ನೋಡೋಣ?’ ಎಂದು ಸವಾಲು ಹಾಕಿದರು.</p> <p>‘ಕುಟುಂಬ ರಾಜಕಾರಣ ಬರುವುದಕ್ಕೆ ಮುಂಚೆಯೇ ನಾನು ಬಿಜೆಪಿ ಬಿಟ್ಟಿದ್ದೆ. ಅಲ್ಲಿಂದ ಮತ್ತೊಂದು ಕುಟುಂಬ ರಾಜಕಾರಣ ಸೇರಿದ ನಾನು, ಕಡೆಗೆ ಅವರ ಸಹವಾಸವನ್ನು ಸಹ ಬಿಟ್ಟೆ’ ಎಂದು ವ್ಯಂಗ್ಯವಾಡಿದರು.</p>.ಯತ್ನಾಳ ಉಚ್ಚಾಟನೆ ಹಿಂಪಡೆಯಲು ಏ.10ರ ಗಡುವು ನೀಡಿದ ಮೃತ್ಯುಂಜಯ ಸ್ವಾಮೀಜಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಿಡದಿ (ರಾಮನಗರ):</strong> ‘ನೇರವಾಗಿ ಮತ್ತು ನಿಷ್ಠುರವಾಗಿ ಮಾತನಾಡುವವರು ಯಾವ ಪಕ್ಷದಲ್ಲೂ ಉಳಿಯಲ್ಲ. ಬಸನಗೌಡ ಪಾಟೀಲ ಯತ್ನಾಳ ಇಲ್ಲದಿದ್ದರೆ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಾಗುವುದಿಲ್ಲ. ಉಚ್ಛಾಟನೆ ಮೂಲಕ ಅವರಿಗೆ ಒಂದು ಎಚ್ಚರಿಕೆ ಕೊಟ್ಟಿದ್ದಾರಷ್ಟೆ’ ಎಂದು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದರು.</p> <p>ಯತ್ನಾಳ ಉಚ್ಛಾಟನೆ ಕುರಿತು ಪಟ್ಟಣದಲ್ಲಿ ಗುರುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಯತ್ನಾಳ ಅವರಿಗೆ ಉಚ್ಛಾಟನೆ ಹೊಸದಲ್ಲ. ಎರಡನೇ ಸಲ ಅವರು ಉಚ್ಛಾಟನೆಯಾಗಿದ್ದಾರೆ. ಬಿಜೆಪಿಗೆ ಶಕ್ತಿ ಇದ್ದರೆ, ಅವರನ್ನು ಶಾಶ್ವತವಾಗಿ ಪಕ್ಷದಿಂದ ವಜಾ ಮಾಡಲಿ ನೋಡೋಣ?’ ಎಂದು ಸವಾಲು ಹಾಕಿದರು.</p> <p>‘ಕುಟುಂಬ ರಾಜಕಾರಣ ಬರುವುದಕ್ಕೆ ಮುಂಚೆಯೇ ನಾನು ಬಿಜೆಪಿ ಬಿಟ್ಟಿದ್ದೆ. ಅಲ್ಲಿಂದ ಮತ್ತೊಂದು ಕುಟುಂಬ ರಾಜಕಾರಣ ಸೇರಿದ ನಾನು, ಕಡೆಗೆ ಅವರ ಸಹವಾಸವನ್ನು ಸಹ ಬಿಟ್ಟೆ’ ಎಂದು ವ್ಯಂಗ್ಯವಾಡಿದರು.</p>.ಯತ್ನಾಳ ಉಚ್ಚಾಟನೆ ಹಿಂಪಡೆಯಲು ಏ.10ರ ಗಡುವು ನೀಡಿದ ಮೃತ್ಯುಂಜಯ ಸ್ವಾಮೀಜಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>