<p><strong>ಬೆಳಗಾವಿ:</strong> ‘ಬಸನಗೌಡ ಪಾಟೀಲ ಯತ್ನಾಳ ಉಚ್ಚಾಟನೆ ಆದೇಶವನ್ನು ಬಿಜೆಪಿ ನಾಯಕರು ಏಪ್ರಿಲ್ 10ರೊಳಗೆ ಹಿಂದಕ್ಕೆ ಪಡೆಯಬೇಕು. ಇಲ್ಲದಿದ್ದರೆ ಏಪ್ರಿಲ್ 13ರಿಂದ ಸಮಾಜದಿಂದ ಬೃಹತ್ ಪ್ರತಿಭಟನೆ ಎದುರಿಸಬೇಕಾಗುತ್ತದೆ’ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.</p><p>ನಗರದಲ್ಲಿ ಗುರುವಾರ ಸಮಾಜದವರ ನಡೆಸಿ ಚರ್ಚಿಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.</p>.ಯತ್ನಾಳ ಉಚ್ಚಾಟನೆ | ಬೆಂಗಳೂರಿನಲ್ಲಿ ನಾಳೆ ಭಿನ್ನಮತೀಯರ ಸಭೆ: ರಮೇಶ ಜಾರಕಿಹೊಳಿ.<p>‘ಯಡಿಯೂರಪ್ಪ, ವಿಜಯೇಂದ್ರ ಕುತಂತ್ರದಿಂದ ಯತ್ನಾಳ ಉಚ್ಚಾಟನೆ ಮಾಡಲಾಗಿದೆ. ಕರ್ನಾಟಕದಲ್ಲಿ ಲಿಂಗಾಯತರನ್ನು ಕಡೆಗಣಿಸಿ ಸರ್ಕಾರಗಳು ಉಳಿದಿಲ್ಲ. ದೊಡ್ಡ ಬಲ ಹೊಂದಿದ ಪಂಚಮಸಾಲಿ ನಾಯಕರನ್ನು ತುಳಿದವರು ಉದ್ಧಾರವಾಗಿಲ್ಲ. ಮುಖ್ಯಮಂತ್ರಿಗಳಾಗಿದ್ದ ವೀರೇಂದ್ರ ಪಾಟೀಲ, ಜೆ.ಎಚ್.ಪಟೇಲ್ ಅವರ ಕಾಲದಿಂದಲೂ ಇದಕ್ಕೆ ಉದಾಹರಣೆಗಳಿವೆ’ ಎಂದರು.</p><p>‘ಉತ್ತರ ಕರ್ನಾಟಕದ ಅಭಿವೃದ್ಧಿಗೆ, ಪಂಚಮಸಾಲಿ ಸಮಾಜದ ಮೀಸಲಾತಿಗೆ, ಹಿಂದೂ ಪರ ನಿಲುವುಗಳಿಗೆ ಯತ್ನಾಳ ಅವರು ಯಾವಾಗಲೂ ಮುಂದೆ ಬಂದಿದ್ದಾರೆ. ಎಲ್ಲ ಜಾತಿ, ಸಮಾಜದವರೊಂದಿಗೂ ನಿಂತಿದ್ದಾರೆ. ಈಗ ಎಲ್ಲರೂ ಅವರ ಬೆಂಬಲಕ್ಕೆ ನಿಲ್ಲಲಿದ್ದಾರೆ’ ಎಂದೂ ಸ್ವಾಮೀಜಿ ಹೇಳಿದರು.</p>.ಅಡ್ಜಸ್ಟ್ಮೆಂಟ್ ಪಾಲಿಟಿಕ್ಸ್ ನಿಲ್ಲದಿದ್ದರೆ BJP ಮಕಾಡೆ ಮಲಗುವುದು ಖಚಿತ: ಯತ್ನಾಳ.<p>‘ಕಾಂಗ್ರೆಸ್, ಬಿಜೆಪಿ ಎರಡನ್ನೂ ನಾವು ಸಮಾನವಾಗಿ ವಿರೋಧಿಸುತ್ತೇವೆ. ಮುಂದಿನ ದಿನಗಳಲ್ಲಿ ಪಂಚಮಸಾಲಿಗರದ್ದೇ ಶಕ್ತಿ ಹುಟ್ಟುಹಾಕುತ್ತೇವೆ. ಇದಕ್ಕೆ ನಾಯಕರ ಸಭೆ ಕರೆದು ಅಭಿಪ್ರಾಯ ಪಡೆಯುತ್ತೇವೆ’ ಎಂದರು.</p><p>‘ಪಂಚಮಸಾಲಿ ಸಮಾಜದ ಎಲ್ಲ ಶಾಸಕರು, ಸಂಸದರು ಬಿಜೆಪಿ ವರಿಷ್ಠರಿಗೆ ಮನವರಿಕೆ ಮಾಡಿಕೊಡಬೇಕು. ಸಮಾಜದವರೂ ಅವರ ಬೆನ್ನಿಗೆ ನಿಲ್ಲಬೇಕು’ ಎಂದೂ ಕರೆ ಕೊಟ್ಟರು.</p>.ಯತ್ನಾಳ ಉಚ್ಚಾಟನೆ ಹಿಂಪಡೆಯಲು ಮಠಾಧೀಶರ ಆಗ್ರಹ.<p>‘ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಸೇರದಂತೆ ಯಾರ ಮೇಲೂ ನಮಗೆ ಬೇಸರವಿಲ್ಲ. ಅವರಿಗೆ ಸುಳ್ಳು ಮಾಹಿತಿ ನೀಡಿದವರ ಬಗ್ಗೆ ಮಾತ್ರ ತಕರಾರು ಇದೆ’ ಎಂದೂ ಪ್ರಶ್ನೆಗೆ ಉತ್ತರಿಸಿದರು.</p><p>ಹೋರಾಟ ಸಮಿತಿ ಮುಖಂಡರಾದ ನಿಂಗಪ್ಪ ಫೀರೋಜಿ, ಆರ್.ಕೆ.ಪಾಟೀಲ, ಗುಂಡು ಪಾಟೀಲ, ಶಿವಾನಂದ ತಂಬಾಕೆ, ರಾಜು ಮಗದುಮ್, ರಾಮನಗೌಡ ಪಾಟೀಲ ಇದ್ದರು.</p> .Karnataka BJP Rift: ಯತ್ನಾಳ ಹೊರದಬ್ಬಿದ ಬಿಜೆಪಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ‘ಬಸನಗೌಡ ಪಾಟೀಲ ಯತ್ನಾಳ ಉಚ್ಚಾಟನೆ ಆದೇಶವನ್ನು ಬಿಜೆಪಿ ನಾಯಕರು ಏಪ್ರಿಲ್ 10ರೊಳಗೆ ಹಿಂದಕ್ಕೆ ಪಡೆಯಬೇಕು. ಇಲ್ಲದಿದ್ದರೆ ಏಪ್ರಿಲ್ 13ರಿಂದ ಸಮಾಜದಿಂದ ಬೃಹತ್ ಪ್ರತಿಭಟನೆ ಎದುರಿಸಬೇಕಾಗುತ್ತದೆ’ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.</p><p>ನಗರದಲ್ಲಿ ಗುರುವಾರ ಸಮಾಜದವರ ನಡೆಸಿ ಚರ್ಚಿಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.</p>.ಯತ್ನಾಳ ಉಚ್ಚಾಟನೆ | ಬೆಂಗಳೂರಿನಲ್ಲಿ ನಾಳೆ ಭಿನ್ನಮತೀಯರ ಸಭೆ: ರಮೇಶ ಜಾರಕಿಹೊಳಿ.<p>‘ಯಡಿಯೂರಪ್ಪ, ವಿಜಯೇಂದ್ರ ಕುತಂತ್ರದಿಂದ ಯತ್ನಾಳ ಉಚ್ಚಾಟನೆ ಮಾಡಲಾಗಿದೆ. ಕರ್ನಾಟಕದಲ್ಲಿ ಲಿಂಗಾಯತರನ್ನು ಕಡೆಗಣಿಸಿ ಸರ್ಕಾರಗಳು ಉಳಿದಿಲ್ಲ. ದೊಡ್ಡ ಬಲ ಹೊಂದಿದ ಪಂಚಮಸಾಲಿ ನಾಯಕರನ್ನು ತುಳಿದವರು ಉದ್ಧಾರವಾಗಿಲ್ಲ. ಮುಖ್ಯಮಂತ್ರಿಗಳಾಗಿದ್ದ ವೀರೇಂದ್ರ ಪಾಟೀಲ, ಜೆ.ಎಚ್.ಪಟೇಲ್ ಅವರ ಕಾಲದಿಂದಲೂ ಇದಕ್ಕೆ ಉದಾಹರಣೆಗಳಿವೆ’ ಎಂದರು.</p><p>‘ಉತ್ತರ ಕರ್ನಾಟಕದ ಅಭಿವೃದ್ಧಿಗೆ, ಪಂಚಮಸಾಲಿ ಸಮಾಜದ ಮೀಸಲಾತಿಗೆ, ಹಿಂದೂ ಪರ ನಿಲುವುಗಳಿಗೆ ಯತ್ನಾಳ ಅವರು ಯಾವಾಗಲೂ ಮುಂದೆ ಬಂದಿದ್ದಾರೆ. ಎಲ್ಲ ಜಾತಿ, ಸಮಾಜದವರೊಂದಿಗೂ ನಿಂತಿದ್ದಾರೆ. ಈಗ ಎಲ್ಲರೂ ಅವರ ಬೆಂಬಲಕ್ಕೆ ನಿಲ್ಲಲಿದ್ದಾರೆ’ ಎಂದೂ ಸ್ವಾಮೀಜಿ ಹೇಳಿದರು.</p>.ಅಡ್ಜಸ್ಟ್ಮೆಂಟ್ ಪಾಲಿಟಿಕ್ಸ್ ನಿಲ್ಲದಿದ್ದರೆ BJP ಮಕಾಡೆ ಮಲಗುವುದು ಖಚಿತ: ಯತ್ನಾಳ.<p>‘ಕಾಂಗ್ರೆಸ್, ಬಿಜೆಪಿ ಎರಡನ್ನೂ ನಾವು ಸಮಾನವಾಗಿ ವಿರೋಧಿಸುತ್ತೇವೆ. ಮುಂದಿನ ದಿನಗಳಲ್ಲಿ ಪಂಚಮಸಾಲಿಗರದ್ದೇ ಶಕ್ತಿ ಹುಟ್ಟುಹಾಕುತ್ತೇವೆ. ಇದಕ್ಕೆ ನಾಯಕರ ಸಭೆ ಕರೆದು ಅಭಿಪ್ರಾಯ ಪಡೆಯುತ್ತೇವೆ’ ಎಂದರು.</p><p>‘ಪಂಚಮಸಾಲಿ ಸಮಾಜದ ಎಲ್ಲ ಶಾಸಕರು, ಸಂಸದರು ಬಿಜೆಪಿ ವರಿಷ್ಠರಿಗೆ ಮನವರಿಕೆ ಮಾಡಿಕೊಡಬೇಕು. ಸಮಾಜದವರೂ ಅವರ ಬೆನ್ನಿಗೆ ನಿಲ್ಲಬೇಕು’ ಎಂದೂ ಕರೆ ಕೊಟ್ಟರು.</p>.ಯತ್ನಾಳ ಉಚ್ಚಾಟನೆ ಹಿಂಪಡೆಯಲು ಮಠಾಧೀಶರ ಆಗ್ರಹ.<p>‘ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಸೇರದಂತೆ ಯಾರ ಮೇಲೂ ನಮಗೆ ಬೇಸರವಿಲ್ಲ. ಅವರಿಗೆ ಸುಳ್ಳು ಮಾಹಿತಿ ನೀಡಿದವರ ಬಗ್ಗೆ ಮಾತ್ರ ತಕರಾರು ಇದೆ’ ಎಂದೂ ಪ್ರಶ್ನೆಗೆ ಉತ್ತರಿಸಿದರು.</p><p>ಹೋರಾಟ ಸಮಿತಿ ಮುಖಂಡರಾದ ನಿಂಗಪ್ಪ ಫೀರೋಜಿ, ಆರ್.ಕೆ.ಪಾಟೀಲ, ಗುಂಡು ಪಾಟೀಲ, ಶಿವಾನಂದ ತಂಬಾಕೆ, ರಾಜು ಮಗದುಮ್, ರಾಮನಗೌಡ ಪಾಟೀಲ ಇದ್ದರು.</p> .Karnataka BJP Rift: ಯತ್ನಾಳ ಹೊರದಬ್ಬಿದ ಬಿಜೆಪಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>