ಮೈತ್ರಿ ಅಭ್ಯರ್ಥಿ ಎ.ಪಿ. ರಂಗನಾಥ್ ಅವರ ಪರವಾಗಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ರಾಮನಗರದ ಮತದಾನ ಕೇಂದ್ರದತ್ತ ಭೇಟಿ ನೀಡಿ, ಮತದಾನವನ್ನು ಗಮನಿಸಿದರು. ಈ ವೇಳೆ, ಪಕ್ಷದ ಸ್ಥಳೀಯ ಮುಖಂಡರು ಅವರನ್ನು ಭೇಟಿ ಮಾಡಿದರು. ರಂಗನಾಥ್ ಅವರ ಪತ್ನಿ ನಂದಿನಿ ಅವರು ಸಹ ಮತದಾನ ಕೇಂದ್ರದ ಬಳಿ ಪಕ್ಷದ ಮುಖಂಡರನ್ನು ಭೇಟಿಯಾದರು.