ಮಂಗಳವಾರ, 2 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ರಾಮನಗರ | ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ಮಾರಾಮಾರಿ: 23 ಮಂದಿ ವಿರುದ್ಧ ಪ್ರಕರಣ

Published : 1 ಸೆಪ್ಟೆಂಬರ್ 2025, 2:00 IST
Last Updated : 1 ಸೆಪ್ಟೆಂಬರ್ 2025, 2:00 IST
ಫಾಲೋ ಮಾಡಿ
Comments
ಕ್ಷುಲ್ಲಕ ಕಾರಣಕ್ಕೆ ಕೈದಿಗಳು ಜಗಳವಾಡಲು ಮುಂದಾದಾಗ ನಾವು ತಕ್ಷಣ ಕಾರ್ಯಪ್ರವೃತ್ತರಾಗಿ ಗಲಾಟೆ ನಿಲ್ಲಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದೆವು. ಕಾರಾಗೃಹ ನಿಯಮ ಉಲ್ಲಂಘನೆ ಹಾಗೂ ಗಲಾಟೆ ಕಾರಣಕ್ಕೆ ಕೈದಿಗಳ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಲಾಗಿದೆ
– ರಾಕೇಶ ಕಾಂಬಳೆ ಅಧೀಕ್ಷಕ ಬೆಂಗಳೂರು ದಕ್ಷಿಣ ಜಿಲ್ಲಾ ಕಾರಾಗೃಹ
ಕಾರಾಗೃಹಕ್ಕೆ ಡಿಐಜಿ ಭೇಟಿ
ಘಟನೆ ಬೆನ್ನಲ್ಲೇ ಕಾರಾಗೃಹ ಇಲಾಖೆಯ ಬೆಂಗಳೂರು ದಕ್ಷಿಣ ವಲಯದ ಉಪ ಮಹಾ ನಿರೀಕ್ಷಕಿ (ಡಿಐಜಿ) ದಿವ್ಯಶ್ರೀ ಅವರು ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿದ್ದಾರೆ. ಘಟನೆ ಕುರಿತು ಅಧೀಕ್ಷಕರು ಹಾಗೂ ಸಿಬ್ಬಂದಿಯಿಂದ ಮಾಹಿತಿ ಪಡೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರ ಜೊತೆಗೆ ಕಾರಾಗೃಹ ಇಲಾಖೆ ವತಿಯಿಂದಲೂ ಆಂತರಿಕ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಗುಂಡೇಟು ತಿಂದಿದ್ದ ಕೈದಿ
ಘಟನೆಗೆ ಕಾರಣನಾದ ಹರ್ಷ ಅಲಿಯಾಸ್ ಕೈಮ 2024ರ ಜುಲೈನಲ್ಲಿ ಕನಕಪುರದ ಮಳಗಾಳು ಗ್ರಾಮಕ್ಕೆ ರಾತ್ರಿ ನುಗ್ಗಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವೈರಮುಡಿ ಅವರ ಪುತ್ರ ಅನೀಶ್ ಕೈ ಕತ್ತರಿಸಿದ್ದ. ಕೃತ್ಯವು ರಾಜ್ಯದ ಗಮನ ಸೆಳೆದಿತ್ತು. ಬಳಿಕ ಪೊಲೀಸರು ಹರ್ಷನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದರು. ಅಂದಿನಿಂದ ಆತ ಕಾರಾಗೃಹದಲ್ಲಿ ಬಂಧಿಯಾಗಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT