ಮರ, ಕೊಂಬೆ ತೆರವಿಗೆ ಕ್ರಮ
ಮಳೆ ಮತ್ತು ಗಾಳಿ ಅಬ್ಬರದ ಬೆನ್ನಲ್ಲೇ, ವಿದ್ಯುತ್ ಕಂಬಗಳು, ತಂತಿಗಳು ಹಾಗೂ ಪರಿವರ್ತಕಗಳು ಇರುವ ಕಡೆ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳು ಹಾಗೂ ಕೊಂಬೆಗಳ ತೆರವಿಗೆ ಬೆಸ್ಕಾಂ ಮುಂದಾಗಿದೆ. ಮುಖ್ಯ ರಸ್ತೆಗಳು, ಜನವಸತಿ ಪ್ರದೇಶಗಳು ಹಾಗೂ ಅರಣ್ಯ ಪ್ರದೇಶದಲ್ಲಿ ಸಾಗಿರುವ ವಿದ್ಯುತ್ ಮಾರ್ಗದ ಕೊಂಬೆಗಳ ಜೊತೆಗೆ ಒಣಗಿದ ಮರಗಳನ್ನು ತೆರವು ಮಾಡಲು ಸೂಚನೆ ನೀಡಲಾಗಿದೆ. ಈಗಾಗಲೇ ತೆರವು ಕಾರ್ಯ ನಡೆದಿದ್ದರೂ, ಮುಂಗಾರು ಸಮೀಪಿಸುತ್ತಿರು ವುದರಿಂದ ಮತ್ತೊಮ್ಮೆ ಪರಿಶೀಲನೆ ನಡೆಸಿ ತೆರವಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಬೆಸ್ಕಾಂ ಅಧಿಕಾರಿಯೊಬ್ಬರು ತಿಳಿಸಿದರು.