ಶಿವರಾಜು ಮತ್ತು ಸ್ನೇಹಿತರು ಜೂಜಾಟಕ್ಕೆ ರೇಣುಕಾರಾಧ್ಯ ಎಂಬುವರಿಂದ ಮೀಟರ್ ಬಡ್ಡಿ ಲೆಕ್ಕದಲ್ಲಿ ₹30 ಸಾವಿರ ಸಾಲ ಪಡೆದಿದ್ದರು. ಬಡ್ಡಿ ಕಟ್ಟಿಲ್ಲ ಎಂಬ ಕಾರಣಕ್ಕೆ ಸಾಲ ಕೊಟ್ಟವರು ಶಿವರಾಜು ಅವರ ಬೈಕ್ ಎತ್ತಿಕೊಂಡು ಹೋಗಿದ್ದರು. ನಂತರವೂ ಹಣಕ್ಕಾಗಿ ನಿರಂತರ ಕಿರುಕುಳ ನೀಡುತ್ತಿದ್ದರು ಎಂದು ದೂರಲಾಗಿದೆ. ಧನು, ರೇಣುಕಾರಾಧ್ಯ, ವೆಂಕಟೇಶ್ ಎಂಬುವರ ವಿರುದ್ಧ ಕಗ್ಗಲೀಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.