ಇಂದಿನ ಕೃಷಿ ಬಿಕ್ಕಟ್ಟು ಗಮನಿಸಿದರೆ ಮುಂದೆ ಆಹಾರ ಧಾನ್ಯಗಳ ಕೊರತೆಯ ಆತಂಕ ಎದುರಾಗಿದೆ. ಅದಕ್ಕೆ ಈಗಿನಿಂದಲೇ ಪರಿಹಾರ ಕಂಡುಕೊಳ್ಳಬೇಕು. ನಮ್ಮ ಮೂಲ ಕಸುಬಾದ ಕೃಷಿ ಬಗ್ಗೆ ಯುವಜನರು ಹಿರಿಮೆ ಬೆಳೆಸಿಕೊಳ್ಳಬೇಕು
– ಡಾ. ಡಿ.ಆರ್. ರವಿಕುಮಾರ್, ಸಂಸ್ಥಾಪಕ ಕಾರ್ಯದರ್ಶಿ, ನ್ಯೂ ಎಕ್ಸ್ ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಗಳು ರಾಮನಗರ
ರಸಗೊಬ್ಬರಗಳು ಕೀಟನಾಶಕಗಳು ಔಷಧಗಳ ವಿಪರೀತ ಬಳಕೆಯಿಂದಾಗಿ ಭೂಮಿ ದಿನದಿಂದ ದಿನಕ್ಕೆ ಸತ್ವ ಕಳೆದುಕೊಳ್ಳುತ್ತಿದೆ. ಬೆಳೆಗಳಲ್ಲಿ ವಿಷಕಾರಿ ಅಂಶಗಳು ಕಾಣಿಸಿಕೊಳ್ಳುತ್ತಿವೆ. ಇದಕ್ಕೆ ಪರ್ಯಾಯವಾದ ವ್ಯವಸ್ಥೆಗೆ ಒತ್ತು ನೀಡಬೇಕಿದೆ
– ಬಿ.ಟಿ. ನಾಗೇಶ್, ಅಧ್ಯಕ್ಷ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು