<p><strong>ಶಿವಮೊಗ್ಗ:</strong> ಹೊಸನಗರ ತಾಲ್ಲೂಕಿನ ಹೊಂಬುಜ ಜೈನ ಮಠದಲ್ಲಿ ಜ.11 ಮತ್ತು 12ರಂದು ವನವಾಸಿಗಳ ಪ್ರಾಂತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.</p>.<p>ವನವಾಸಿಗಳಲ್ಲಿ ಸ್ವಾಭಿಮಾನ, ಜಾಗೃತಿ, ಸಂಸ್ಕೃತಿಯ ಸಂರಕ್ಷಣೆ ಹಾಗೂ ಅವರ ಸಮಗ್ರ ವಿಕಾಸಕ್ಕಾಗಿ ಮೂರು ವರ್ಷಗಳಿಗೆ ಒಮ್ಮೆಪ್ರಾಂತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗುತ್ತಿದೆ. ಈ ಬಾರಿಯ ಸಮ್ಮೇಳನದಲ್ಲಿ ರಾಜ್ಯದ 16 ಜಿಲ್ಲೆಗಳಿಂದ ಸುಮಾರು 228 ವಿವಿಧ ವನವಾಸಿ ಸಮುದಾಯದ ಪ್ರತಿನಿಧಿಗಳು ಭಾಗವಹಿಸುವರು. ಈ ಜನಾಂಗಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತುಚರ್ಚೆ ನಡೆಸಲಾಗುವುದು ಎಂದುವನವಾಸಿ ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಎಂ.ಎಸ್.ವೆಂಕಟೇಶ್ ಸಾಗರ್ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.</p>.<p>ಜೈನ ಮಠದ ಶ್ರೀಗಳು,ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ಆರಗ ಜ್ಞಾನೇಂದ್ರ ಭಾಗವಹಿಸುವರು ಎಂದರು.</p>.<p>ನಗರ, ಗ್ರಾಮಗಳ ನಾಗರಿಕ ಜೀವನ ಕ್ರಮದಿಂದ ವಿಭಿನ್ನವಾಗಿ ಸುದೂರ ಗುಡ್ಡಗಾಡುಗಳಲ್ಲಿ, ವನಪ್ರದೇಶಗಳಲ್ಲಿ ವಾಸಿಸುವ ಜನಾಂಗಗಳೇ ವನವಾಸಿಗಳು.ಪರಿಶಿಷ್ಟ ಪಂಗಡಕ್ಕೆ ಸೇರಿದ್ದಾರೆ. ದೇಶದ ಜನಸಂಖ್ಯೆಯ ಶೇ 9ರಷ್ಟು ಇದ್ದಾರೆ.ರಾಜ್ಯದಲ್ಲಿ ಸುಮಾರು 50 ಲಕ್ಷಸಂಖ್ಯೆ ಇದೆ. 50ಪಂಗಡಗಳಿವೆ ಎಂದುವಿವರ ನೀಡಿದರು.</p>.<p>ವನವಾಸಿ ಕಲ್ಯಾಣ ಸಂಸ್ಥೆ ವನವಾಸಿಗಳ ಸರ್ವಾಂಗೀಣವಿಕಾಸಕ್ಕಾಗಿ ವಿವಿಧ ಆಯಾಮಗಳ ಮೂಲಕ ಕಾರ್ಯನಿರ್ವಹಿಸುತ್ತಿದೆ. ಇದು ರಾಷ್ಟ್ರೀಯ ವಿಚಾರಧಾರೆಯ ಸ್ವಯಂಸೇವಾ ಸಂಸ್ಥೆ.ಉಚಿತ ವಿದ್ಯಾರ್ಥಿನಿಲಯ, ಬಾಲಸಂಸ್ಕಾರ ಕೇಂದ್ರ, ಮನೆ ಪಾಠ ಕೇಂದ್ರ, ಕ್ರೀಡಾ ಕೇಂದ್ರ, ಹೊಲಿಗೆ ತರಬೇತಿ ಕೇಂದ್ರ, ಕೃಷಿ, ಗೋ-ವಿಕಾಸ ಕೇಂದ್ರ, ಸ್ವಸಹಾಯ ಸಂಘ, ವೈದ್ಯಕೀಯ ಶಿಬಿರಗಳು ಸೇರಿ ನಾನಾ ರೀತಿಯ ಸೇವಾ ಕಾರ್ಯ ಮಾಡಲಾಗುತ್ತಿದೆ. ರಾಜ್ಯದ 16 ಜಿಲ್ಲೆಗಳ 963 ಗ್ರಾಮಗಳಲ್ಲಿ 465 ಸೇವಾ ಪ್ರಕಲ್ಪಗಳು ನಡೆಯುತ್ತಿವೆ ಎಂದರು.</p>.<p>ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿಶ್ರೀನಿವಾಸ್, ಸುಮಾ ಮೂರ್ತಿ, ಯಶೋಧರ ಇಂದ್ರಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ:</strong> ಹೊಸನಗರ ತಾಲ್ಲೂಕಿನ ಹೊಂಬುಜ ಜೈನ ಮಠದಲ್ಲಿ ಜ.11 ಮತ್ತು 12ರಂದು ವನವಾಸಿಗಳ ಪ್ರಾಂತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.</p>.<p>ವನವಾಸಿಗಳಲ್ಲಿ ಸ್ವಾಭಿಮಾನ, ಜಾಗೃತಿ, ಸಂಸ್ಕೃತಿಯ ಸಂರಕ್ಷಣೆ ಹಾಗೂ ಅವರ ಸಮಗ್ರ ವಿಕಾಸಕ್ಕಾಗಿ ಮೂರು ವರ್ಷಗಳಿಗೆ ಒಮ್ಮೆಪ್ರಾಂತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗುತ್ತಿದೆ. ಈ ಬಾರಿಯ ಸಮ್ಮೇಳನದಲ್ಲಿ ರಾಜ್ಯದ 16 ಜಿಲ್ಲೆಗಳಿಂದ ಸುಮಾರು 228 ವಿವಿಧ ವನವಾಸಿ ಸಮುದಾಯದ ಪ್ರತಿನಿಧಿಗಳು ಭಾಗವಹಿಸುವರು. ಈ ಜನಾಂಗಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತುಚರ್ಚೆ ನಡೆಸಲಾಗುವುದು ಎಂದುವನವಾಸಿ ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಎಂ.ಎಸ್.ವೆಂಕಟೇಶ್ ಸಾಗರ್ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.</p>.<p>ಜೈನ ಮಠದ ಶ್ರೀಗಳು,ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ಆರಗ ಜ್ಞಾನೇಂದ್ರ ಭಾಗವಹಿಸುವರು ಎಂದರು.</p>.<p>ನಗರ, ಗ್ರಾಮಗಳ ನಾಗರಿಕ ಜೀವನ ಕ್ರಮದಿಂದ ವಿಭಿನ್ನವಾಗಿ ಸುದೂರ ಗುಡ್ಡಗಾಡುಗಳಲ್ಲಿ, ವನಪ್ರದೇಶಗಳಲ್ಲಿ ವಾಸಿಸುವ ಜನಾಂಗಗಳೇ ವನವಾಸಿಗಳು.ಪರಿಶಿಷ್ಟ ಪಂಗಡಕ್ಕೆ ಸೇರಿದ್ದಾರೆ. ದೇಶದ ಜನಸಂಖ್ಯೆಯ ಶೇ 9ರಷ್ಟು ಇದ್ದಾರೆ.ರಾಜ್ಯದಲ್ಲಿ ಸುಮಾರು 50 ಲಕ್ಷಸಂಖ್ಯೆ ಇದೆ. 50ಪಂಗಡಗಳಿವೆ ಎಂದುವಿವರ ನೀಡಿದರು.</p>.<p>ವನವಾಸಿ ಕಲ್ಯಾಣ ಸಂಸ್ಥೆ ವನವಾಸಿಗಳ ಸರ್ವಾಂಗೀಣವಿಕಾಸಕ್ಕಾಗಿ ವಿವಿಧ ಆಯಾಮಗಳ ಮೂಲಕ ಕಾರ್ಯನಿರ್ವಹಿಸುತ್ತಿದೆ. ಇದು ರಾಷ್ಟ್ರೀಯ ವಿಚಾರಧಾರೆಯ ಸ್ವಯಂಸೇವಾ ಸಂಸ್ಥೆ.ಉಚಿತ ವಿದ್ಯಾರ್ಥಿನಿಲಯ, ಬಾಲಸಂಸ್ಕಾರ ಕೇಂದ್ರ, ಮನೆ ಪಾಠ ಕೇಂದ್ರ, ಕ್ರೀಡಾ ಕೇಂದ್ರ, ಹೊಲಿಗೆ ತರಬೇತಿ ಕೇಂದ್ರ, ಕೃಷಿ, ಗೋ-ವಿಕಾಸ ಕೇಂದ್ರ, ಸ್ವಸಹಾಯ ಸಂಘ, ವೈದ್ಯಕೀಯ ಶಿಬಿರಗಳು ಸೇರಿ ನಾನಾ ರೀತಿಯ ಸೇವಾ ಕಾರ್ಯ ಮಾಡಲಾಗುತ್ತಿದೆ. ರಾಜ್ಯದ 16 ಜಿಲ್ಲೆಗಳ 963 ಗ್ರಾಮಗಳಲ್ಲಿ 465 ಸೇವಾ ಪ್ರಕಲ್ಪಗಳು ನಡೆಯುತ್ತಿವೆ ಎಂದರು.</p>.<p>ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿಶ್ರೀನಿವಾಸ್, ಸುಮಾ ಮೂರ್ತಿ, ಯಶೋಧರ ಇಂದ್ರಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>