<p><strong>ಶಿವಮೊಗ್ಗ: </strong>ಕುವೆಂಪು ವಿಶ್ವ ವಿದ್ಯಾಲಯದ ಕನ್ನಡ ಭಾರತಿ ವಿಭಾಗದ ಡಾ.ತಿಪ್ಪೇರುದ್ರಸ್ವಾಮಿ ಸಭಾಂಗಣದಲ್ಲಿ ಸೋಮವಾರ ಕನ್ನಡ ಭಾರತಿ ವಿಭಾಗದ ಸಾಹಿತ್ಯ ಸಂಘ ಮತ್ತು ಗೀತಾಂಜಲಿ ಪುಸ್ತಕ ಪ್ರಕಾಶನ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಾಲ್ಕು ಕೃತಿಗಳ ಬಿಡುಗಡೆ ಮಾಡಲಾಯಿತು.<br /> <br /> ಡಾ.ಸಣ್ಣರಾಮ `ಅವರ ಕಾಯುತ್ತಿದ್ದಾರೆ~ (ಕಥಾಸಂಕಲನ), `ಅಳುನುಂಗಿ, ನಗು ಒಮ್ಮೆ~ (ಅನುಭವ ಕಥನ) ಹಾಗೂ ಡಾ.ಕೇಶವಶರ್ಮ ಅವರ `ಒಡೆದ ಕನ್ನಡಿ~ (ಕಾದಂಬರಿ), `ನೀಲನಕ್ಷೆ-ಇಟ್ಟ ಹೆಜ್ಜೆ-ತೊಟ್ಟ ರೂಪ~ (ವಿಮರ್ಶಾ ಸಂಕಲನ)ಗಳನ್ನು ವಿವಿ ಕುಲಪತಿ ಪ್ರೊ.ಎಸ್.ಎ. ಬಾರಿ ಬಿಡುಗಡೆ ಮಾಡಿದರು.<br /> <br /> ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿಶ್ವವಿದ್ಯಾಲಯದ ಅಧ್ಯಾಪಕರು ಬರಿಯ ಬೋಧನೆ ಮಾಡಿದರೆ ಸಾಲದು, ಅದರ ಜತೆಯಲ್ಲಿ ಸಂಶೋಧನೆ ಕೈಗೊಳ್ಳಬೇಕು. ಸಂಶೋಧನೆಯ ಫಲಿತಗಳು ಪ್ರಕಟವಾಗಬೇಕು ಎಂದರು.<br /> <br /> ಅಧ್ಯಕ್ಷತೆ ವಹಿಸಿದ್ದ ಸಾಹಿತಿ ನಾ.ಡಿಸೋಜ ಮಾತನಾಡಿ, ಕೇಶವಶರ್ಮ ಅವರ `ಒಡೆದ ಕನ್ನಡಿ~ ಕಾದಂಬರಿಗೆ ಓದಿಸಿಕೊಂಡು ಹೋಗುವ ಗುಣವಿದೆ. ಸ್ವತಃ ವಿಮರ್ಶಕರಾದ ಶರ್ಮ ಅವರು ಇಲ್ಲಿ ತಮ್ಮ ಬರವಣಿಗೆ ವಿಧಾನವನ್ನು ಬದಲಾಯಿಸಿಕೊಂಡಿದ್ದಾರೆ. ಅವರ `ನೀಲನಕ್ಷೆ...~ ವಿಮರ್ಶ ಕೃತಿ ಕನ್ನಡ ವಿಮರ್ಶಾ ಪರಂಪರೆಯನ್ನು ಬೆಳೆಸುವ ವಿವೇಕವನ್ನು ಹೊಂದಿದೆ ಎಂದರು.<br /> <br /> ಹಾಗೆಯೇ, ಡಾ.ಸಣ್ಣರಾಮ ಅವರ `ಅಳು ನುಂಗಿ, ನಗು ಒಮ್ಮೆ~ ಬರಹವು ಕನ್ನಡದ ಮಟ್ಟಿಗೆ ತುಂಬಾ ವಿಶಿಷ್ಟದ್ದಾಗಿದೆ. ಈ ಕೃತಿಯಲ್ಲಿ ಸಣ್ಣರಾಮ ಅವರು ತಮ್ಮ ಬಾಳಸಂಗಾತಿ ಕುರಿತು ಬರೆದಿದ್ದಾರೆ. ಕೆಲವು ಪ್ರಸಂಗಗಳನ್ನು ಓದಿದಾಗ ಕಣ್ಣುಗಳು ತೇವಗೊಳ್ಳುತ್ತವೆ ಎಂದು ವಿಶ್ಲೇಷಿಸಿದರು.<br /> <br /> ಪುಸ್ತಕಗಳ ಕುರಿತು ವಿಮರ್ಶಕಾರದ ಡಾ.ಕುಂಸಿ ಉಮೇಶ್, ಬಿ.ಜಿ. ಹರೀಶ್ ಮಾತನಾಡಿದರು. <br /> ಗೀತಾಂಜಲಿ ಪುಸ್ತಕ ಪ್ರಕಾಶನದ ಮೋಹನ್ ಉಪಸ್ಥಿತರಿದ್ದರು.<br /> <br /> <strong>ನಿವೇಶನಕ್ಕೆ ಒತ್ತಾಯ</strong><br /> ನಗರದ ಬಸವನಗುಡಿ ಬಡಾವಣೆಯ 5 ನೇ ತಿರುವಿನಲ್ಲಿರುವ ನಗರಸಭೆ ನಿವೇಶನವನ್ನು ಹರಾಜು ಮಾಡದೆ ಗ್ರಂಥಾಲಯ ಉದ್ದೇಶಕ್ಕಾಗಿ ಕಾಯ್ದಿರಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ಎ. ರಮೇಶ್ ಹೆಗ್ಡೆ ಒತ್ತಾಯಿಸಿದ್ದಾರೆ.<br /> <br /> ಸದರಿ ನಿವೇಶನವನ್ನು ಮೇ 16 ರಂದು ಬಹಿರಂಗ ಹರಾಜು ಮೂಲಕ ಮಾರಾಟ ಮಾಡಲಾಗುವುದೆಂದು ಕಳೆದ 20 ರಂದು ನಗರಸಭೆ ಹರಾಜು ಪ್ರಕಟಣೆ ಹೊರಡಿಸಿದೆ. ಈ ಮೂಲಕ ನಗರಸಭೆ ನಾಗರಿಕ ವಿರೋಧಿ ನೀತಿ ಅನುಸರಿಸುತ್ತಿದೆ. ನಗರಸಭೆ ಈ ಕೂಡಲೇ ಹರಾಜು ಪ್ರಕ್ರಿಯೆಯನ್ನು ಕೈಬಿಟ್ಟು, ಗ್ರಂಥಾಲಯ ನಿರ್ಮಾಣಕ್ಕೆಂದು ಕಾಯ್ದಿರಿಸಬೇಕು. ಇಲ್ಲದಿದ್ದಲ್ಲಿ ಕಾಂಗ್ರೆಸ್ ಪಕ್ಷದಿಂದ ಹೋರಾಟ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ: </strong>ಕುವೆಂಪು ವಿಶ್ವ ವಿದ್ಯಾಲಯದ ಕನ್ನಡ ಭಾರತಿ ವಿಭಾಗದ ಡಾ.ತಿಪ್ಪೇರುದ್ರಸ್ವಾಮಿ ಸಭಾಂಗಣದಲ್ಲಿ ಸೋಮವಾರ ಕನ್ನಡ ಭಾರತಿ ವಿಭಾಗದ ಸಾಹಿತ್ಯ ಸಂಘ ಮತ್ತು ಗೀತಾಂಜಲಿ ಪುಸ್ತಕ ಪ್ರಕಾಶನ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಾಲ್ಕು ಕೃತಿಗಳ ಬಿಡುಗಡೆ ಮಾಡಲಾಯಿತು.<br /> <br /> ಡಾ.ಸಣ್ಣರಾಮ `ಅವರ ಕಾಯುತ್ತಿದ್ದಾರೆ~ (ಕಥಾಸಂಕಲನ), `ಅಳುನುಂಗಿ, ನಗು ಒಮ್ಮೆ~ (ಅನುಭವ ಕಥನ) ಹಾಗೂ ಡಾ.ಕೇಶವಶರ್ಮ ಅವರ `ಒಡೆದ ಕನ್ನಡಿ~ (ಕಾದಂಬರಿ), `ನೀಲನಕ್ಷೆ-ಇಟ್ಟ ಹೆಜ್ಜೆ-ತೊಟ್ಟ ರೂಪ~ (ವಿಮರ್ಶಾ ಸಂಕಲನ)ಗಳನ್ನು ವಿವಿ ಕುಲಪತಿ ಪ್ರೊ.ಎಸ್.ಎ. ಬಾರಿ ಬಿಡುಗಡೆ ಮಾಡಿದರು.<br /> <br /> ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿಶ್ವವಿದ್ಯಾಲಯದ ಅಧ್ಯಾಪಕರು ಬರಿಯ ಬೋಧನೆ ಮಾಡಿದರೆ ಸಾಲದು, ಅದರ ಜತೆಯಲ್ಲಿ ಸಂಶೋಧನೆ ಕೈಗೊಳ್ಳಬೇಕು. ಸಂಶೋಧನೆಯ ಫಲಿತಗಳು ಪ್ರಕಟವಾಗಬೇಕು ಎಂದರು.<br /> <br /> ಅಧ್ಯಕ್ಷತೆ ವಹಿಸಿದ್ದ ಸಾಹಿತಿ ನಾ.ಡಿಸೋಜ ಮಾತನಾಡಿ, ಕೇಶವಶರ್ಮ ಅವರ `ಒಡೆದ ಕನ್ನಡಿ~ ಕಾದಂಬರಿಗೆ ಓದಿಸಿಕೊಂಡು ಹೋಗುವ ಗುಣವಿದೆ. ಸ್ವತಃ ವಿಮರ್ಶಕರಾದ ಶರ್ಮ ಅವರು ಇಲ್ಲಿ ತಮ್ಮ ಬರವಣಿಗೆ ವಿಧಾನವನ್ನು ಬದಲಾಯಿಸಿಕೊಂಡಿದ್ದಾರೆ. ಅವರ `ನೀಲನಕ್ಷೆ...~ ವಿಮರ್ಶ ಕೃತಿ ಕನ್ನಡ ವಿಮರ್ಶಾ ಪರಂಪರೆಯನ್ನು ಬೆಳೆಸುವ ವಿವೇಕವನ್ನು ಹೊಂದಿದೆ ಎಂದರು.<br /> <br /> ಹಾಗೆಯೇ, ಡಾ.ಸಣ್ಣರಾಮ ಅವರ `ಅಳು ನುಂಗಿ, ನಗು ಒಮ್ಮೆ~ ಬರಹವು ಕನ್ನಡದ ಮಟ್ಟಿಗೆ ತುಂಬಾ ವಿಶಿಷ್ಟದ್ದಾಗಿದೆ. ಈ ಕೃತಿಯಲ್ಲಿ ಸಣ್ಣರಾಮ ಅವರು ತಮ್ಮ ಬಾಳಸಂಗಾತಿ ಕುರಿತು ಬರೆದಿದ್ದಾರೆ. ಕೆಲವು ಪ್ರಸಂಗಗಳನ್ನು ಓದಿದಾಗ ಕಣ್ಣುಗಳು ತೇವಗೊಳ್ಳುತ್ತವೆ ಎಂದು ವಿಶ್ಲೇಷಿಸಿದರು.<br /> <br /> ಪುಸ್ತಕಗಳ ಕುರಿತು ವಿಮರ್ಶಕಾರದ ಡಾ.ಕುಂಸಿ ಉಮೇಶ್, ಬಿ.ಜಿ. ಹರೀಶ್ ಮಾತನಾಡಿದರು. <br /> ಗೀತಾಂಜಲಿ ಪುಸ್ತಕ ಪ್ರಕಾಶನದ ಮೋಹನ್ ಉಪಸ್ಥಿತರಿದ್ದರು.<br /> <br /> <strong>ನಿವೇಶನಕ್ಕೆ ಒತ್ತಾಯ</strong><br /> ನಗರದ ಬಸವನಗುಡಿ ಬಡಾವಣೆಯ 5 ನೇ ತಿರುವಿನಲ್ಲಿರುವ ನಗರಸಭೆ ನಿವೇಶನವನ್ನು ಹರಾಜು ಮಾಡದೆ ಗ್ರಂಥಾಲಯ ಉದ್ದೇಶಕ್ಕಾಗಿ ಕಾಯ್ದಿರಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ಎ. ರಮೇಶ್ ಹೆಗ್ಡೆ ಒತ್ತಾಯಿಸಿದ್ದಾರೆ.<br /> <br /> ಸದರಿ ನಿವೇಶನವನ್ನು ಮೇ 16 ರಂದು ಬಹಿರಂಗ ಹರಾಜು ಮೂಲಕ ಮಾರಾಟ ಮಾಡಲಾಗುವುದೆಂದು ಕಳೆದ 20 ರಂದು ನಗರಸಭೆ ಹರಾಜು ಪ್ರಕಟಣೆ ಹೊರಡಿಸಿದೆ. ಈ ಮೂಲಕ ನಗರಸಭೆ ನಾಗರಿಕ ವಿರೋಧಿ ನೀತಿ ಅನುಸರಿಸುತ್ತಿದೆ. ನಗರಸಭೆ ಈ ಕೂಡಲೇ ಹರಾಜು ಪ್ರಕ್ರಿಯೆಯನ್ನು ಕೈಬಿಟ್ಟು, ಗ್ರಂಥಾಲಯ ನಿರ್ಮಾಣಕ್ಕೆಂದು ಕಾಯ್ದಿರಿಸಬೇಕು. ಇಲ್ಲದಿದ್ದಲ್ಲಿ ಕಾಂಗ್ರೆಸ್ ಪಕ್ಷದಿಂದ ಹೋರಾಟ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>